University:ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ಸಿಬ್ಬಂದಿ ಮೇಲೆ ಕ್ರಮ:ಕುಲಸಚಿವ ಎಚ್ಚರಿಕೆ
Team Udayavani, Jan 5, 2024, 10:24 AM IST
ಬೆಂಗಳೂರು: ಸಮಯಕ್ಕೆ ಸರಿಯಾಗಿ ತಮ್ಮ ಕಚೇರಿ, ವಿಭಾಗಗಳಿಗೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಹಾಗೂ ಒಂದು ದಿನದ ರಜೆ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ತನ್ನ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.
ವಿವಿಯ ಎಲ್ಲ ಕಚೇರಿ, ವಿಭಾಗ, ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳ ಕೆಲಸದ ಅವಧಿ ಬೆಳಗ್ಗೆ 10ರಿಂದ ಆರಂಭವಾಗುತ್ತದೆ. ಆದರೆ, ಕಳೆದ ತಿಂಗಳು ವಿವಿಯ ವಿವಿಧ ಕಚೇರಿ, ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಹಳಷ್ಟು ಸಿಬ್ಬಂದಿಗಳು 10.30 ಆದರೂ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ಸಿಬ್ಬಂದಿಯ ವಿರುದ್ಧ ಆಯಾ ವಿಭಾಗದ ಮುಖ್ಯಸ್ಥರು, ನಿಯಂತ್ರಕರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಅವಂತಹವರ ಅರ್ಧ ದಿನದ ಸಾಂದರ್ಭಿಕ ರಜೆ ಕಡಿತಗೊಳಿಸಲಾಗುವುದು. ಇದು ಅವರು ಎಷ್ಟು ದಿನ ವಿಳಂಬವಾಗಿ ಬರುತ್ತಾರೋ ಅಷ್ಟೂ ದಿನಕ್ಕೂ ರಜೆ ಕಡಿತವಾಗುತ್ತಿರುತ್ತದೆ. ಒಂದು ವೇಳೆ ಸಾಂದರ್ಭಿಕ ರಜೆ ಸಿಬ್ಬಂದಿಗೆ ಇಲ್ಲದಿದ್ದಲ್ಲಿ ಗಳಿಕೆ ರಜೆ ಅಥವಾ ಇನ್ಯಾವುದೇ ರಜೆಯ ಒಂದು ದಿನವನ್ನು ಕಡಿತಗೊಳಿಸಲಾಗುವುದೆಂದು ಕುಲಸಚಿವರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ