ಎರೆಹುಳು ಗೊಬ್ಬರ ಘಟಕ ಉದ್ಘಾಟನೆ
Team Udayavani, Jun 18, 2020, 5:41 AM IST
ಬೆಂಗಳೂರು: ಯಡಿಯೂರು ವಾರ್ಡ್ನ ಲಕ್ಷ್ಮಣ್ ರಾವ್ ಬುಲೇವಾಡ್ ಉದ್ಯಾನದಲ್ಲಿ ಪಾಲಿಕೆ ವತಿಯಿಂದ ನಿರ್ಮಾಣವಾಗಿರುವ ಎರೆಹುಳು ಘಟಕವನ್ನು ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮೇಯರ್ ಎಂ.ಗೌತಮ್ಕುಮಾರ್ ಬುಧವಾರ ಉದ್ಘಾಟನೆ ಮಾಡಿದರು.
ಯಡಿಯೂರು ವಾರ್ಡ್ನ ಜಯನಗರದ 6ನೇ ಬಡವಾಣೆಯ ಲಕ್ಷ್ಮಣ್ ರಾವ್ ಬುಲೇವಾಡ್ ಉದ್ಯಾನದಲ್ಲಿ ಪಾಲಿಕೆ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಎರೆಹುಳು ಘಟಕ ನಿರ್ಮಾಣ ಮಾಡಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಂ. ಗೌತಮ್ಕುಮಾರ್, ಎರೆಹುಳು ಘಟಕದಿಂದ 774 ಉದ್ಯಾನಗಳಿಗೆ ಗೊಬ್ಬರ ಪೂರೈಕೆ ಗುರಿ ಇದೆ.
ಅಲ್ಲದೆ, ಎರೆಹುಳು ಗೊಬ್ಬರವನ್ನು ರೈತರಿಗೆ ಪ್ರತಿ ಕೆ.ಜಿಗೆ 2 ರೂ.ಗೆ ಮಾರಾಟ ಮಾಡಲಾಗುವುದೆಂದರು. ಯಡಿಯೂರು ವಾರ್ಡ್ನಲ್ಲಿ ನಿರ್ಮಾಣ ಮಾಡಿರುವ ಎರೆಹುಳು ಗೊಬ್ಬರ ಘಟಕ ಮಾದರಿಯಲ್ಲೇ ವಿವಿಧ ವಾರ್ಡ್ಗಳಲ್ಲಿ ಎರೆಹುಳು ಘಟಕ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಎರೆಹುಳು ಘಟಕಗಳ ಅಭಿವೃದ್ಧಿಯಿಂ ದಾಗಿ ರಾಸಾಯನಿಕ ಗೊಬ್ಬರ ಬಳಕೆ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾತನಾಡಿ, ಯಡಿಯೂರು ವಾರ್ಡ್ನ ರಸ್ತೆ ಬದಿ ಹಾಗೂ 17 ಉದ್ಯಾನಗಳಲ್ಲಿನ ಮರಗಳಿಂದ ಉದುರುವ ಎಲೆಗಳನ್ನು ಈ ಎರೆಹುಳು ಘಟಕದಲ್ಲಿ ನಿರ್ಮಿಸಲಾಗಿರುವ 17 ಸಾವಿರ ಲೀ. ಸಾರ್ಮಥ್ಯದ 2 ತೊಟ್ಟಿಗಳಲ್ಲಿ ತಲಾ ಹತ್ತು ಕೆ.ಜಿ.ತೂಕದ ಎರೆಹುಳುಗಳನ್ನು ಬಿಡಲಾಗುವುದು.
ಇದರೊಂದಿಗೆ ಸಗಣಿ ಹಾಗೂ ನೀರನ್ನು ಬೆರೆಸಲಾಗುವುದು 20ರಿಂದ 25 ದಿನಗಳ ಅಂತರದಲ್ಲಿ ಇದು ಗೊಬ್ಬರವಾಗಿ ಬದಲಾಗಲಿದೆ ಎಂದು ವಿವರಿಸಿದರು. ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್, ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್