11 ವರ್ಷ ಪೂರೈಸಿದ ನಮ್ಮ ಮೆಟ್ರೋ

ʼನಮ್ಮ ಮೆಟ್ರೋ' ಸಾರಥಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಮನದಾಳ

Team Udayavani, Oct 20, 2022, 12:36 PM IST

12

ಬೆಂಗಳೂರು: ಸಾಗಿಬಂದ ಹಾದಿ ಸಾಕಷ್ಟಿದೆ. ಆದರೆ, ಸಾಗಬೇಕಾದ ಹಾದಿ ಮೂರು ಪಟ್ಟು ಇದೆ. 2024ರ ಡಿಸೆಂಬರ್‌ ಅಂತ್ಯಕ್ಕೆ “ನಮ್ಮ ಮೆಟ್ರೋ’ ಜಾಲ 90 ಕಿ.ಮೀ. ಕ್ರಮಿಸಲಿದ್ದು, ಪ್ರಯಾಣಿಕರ ಸಂಖ್ಯೆ ಎರಡಂಕಿ ಅಂದರೆ 10 ಲಕ್ಷಕ್ಕೆ ತಲುಪಿಸುವ ಗುರಿ ಇದೆ. ಇದಕ್ಕೆ ಸಾರ್ವಜನಿ ಕರಿಂದ ಹಿಡಿದು ಎಲ್ಲರ ಸಹಕಾರ ಬೇಕಾಗುತ್ತದೆ. ನಮ್ಮ ಮೆಟ್ರೋ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ ಸಾರಥಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರ ಮಾತುಗಳಿವು.

ʼಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಯೋಜನೆಯ ಪ್ರಗತಿ, ಗುರಿ, ಆದಾಯ ಮತ್ತಿತರ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ.

ಸಂದರ್ಶನ ವಿವರ:

ನಮ್ಮ ಮೆಟ್ರೋಗೆ 11 ವರ್ಷ ತುಂಬಿದೆ. ಸರಾಸರಿ ವರ್ಷಕ್ಕೆ 5 ಕಿ.ಮೀ. ಪೂರ್ಣಗೊಳಿಸಿ ದಂತಾಯಿತು. ಈ ಪಯಣ ತೃಪ್ತಿ ತಂದಿದೆಯೇ?

ಖಂಡಿತ ತೃಪ್ತಿ ತಂದಿದೆ. ಸೊನ್ನೆಯಿಂದ ಶುರುವಾದ ನಮ್ಮ ಪಯಣ ಇಂದು 56 ಕಿ.ಮೀ.ಗೆ ತಲುಪಿದೆ. ನಿತ್ಯ 5.3 ಲಕ್ಷ ಜನ ಸಂಚರಿಸುತ್ತಿದ್ದಾರೆ. ಆರಂಭದಲ್ಲಿ ಯೋಜನೆ ನೀಲನಕ್ಷೆಯಿಂದ ಹಿಡಿದು ಪ್ರತಿಯೊಂದಕ್ಕೂ ನಾವು ಅವಲಂಬನೆ ಆಗಿದ್ದೆವು. ಈಗ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು, ಎಂಜಿನಿಯರ್‌ಗಳು, ಪ್ರಯಾಣಿಕರ ನೆರವಿನಿಂದ ಇಷ್ಟು ದೂರ ಸಾಗಿದ್ದೇವೆ. ಈಗ ಸ್ವಾವಲಂಬನೆ ಸಾಧಿಸಿದ್ದೇವೆ. ಸರಾಸರಿ ತೆಗೆದುಕೊಂಡು ಹೇಳುವುದು ತಪ್ಪಾಗುತ್ತದೆ.

ಮುಂದಿನ ಗುರಿ ಮತ್ತು ಆದ್ಯತೆ ಏನು?

2023ರ ಡಿಸೆಂಬರ್‌ ಅಂತ್ಯದ ವೇಳೆಗೆ ಇನ್ನೂ 35 ಕಿ.ಮೀ. ಇದಕ್ಕೆ ಸೇರ್ಪಡೆಗೊಳಿಸಿ, 90 ಕಿ.ಮೀ.ಗೆ ವಿಸ್ತರಿಸಲಾಗುವುದು. ಇದರಲ್ಲಿ ನಾಲ್ಕೂ ವಿಸ್ತರಿತ ಮಾರ್ಗಗಳ ಜತೆಗೆ ಆರ್‌.ವಿ. ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ- ಬೊಮ್ಮಸಂದ್ರ ಮಾರ್ಗವೂ ಸೇರ್ಪಡೆ ಆಗಲಿದೆ. ಆಗ ಮೆಟ್ರೋ ಪ್ರಯಾಣಿಕರ ಸಂಖ್ಯೆ 9ರಿಂದ 10 ಲಕ್ಷ ತಲುಪಲಿದೆ. ಸಹಜವಾಗಿ ಆದಾಯ ಕೂಡ ದುಪ್ಪಟ್ಟಾಗಲಿದೆ. ಒಟ್ಟಾರೆ 2024ರ ಅಂತ್ಯದ ವೇಳೆಗೆ ಬಿಎಂಆರ್‌ಸಿಎಲ್‌ ಶ್ರಮದ ಫ‌ಲ ಸಿಗಲಿದೆ.

ಮೆಟ್ರೋ ಮಾರ್ಗದಲ್ಲಿ ಕಾರ್ಯಾಚರಣೆಯೇತರ ಆದಾಯ ಮೂಲದ ಬಗ್ಗೆ ಗಮನಹರಿಸಿಲ್ಲವೇ ? ಈ ನಿಟ್ಟಿನಲ್ಲಿ ತುಸು ಹಿನ್ನಡೆ ಆಗಿದ್ದು ನಿಜ. ಆದರೆ ಮರೆತಿಲ್ಲ. ಬ್ಯುಸಿನೆಸ್‌ ಮಾದರಿಗಳನ್ನು ಬದಲಿಸಿಕೊ ಳ್ಳಲಾಗುತ್ತಿದೆ. ಪಿಪಿಪಿ ಅಡಿ ಈಗಾಗಲೇ ಪ್ರಾಪರ್ಟಿ ಡೆವೆಲಪ್‌ಮೆಂಟ್‌ಗೆ ಯೋಜನೆ ರೂಪಿಸಲಾಗುತ್ತಿದೆ. ಕೆ.ಆರ್‌. ಪುರಂನಲ್ಲಿ ಒಂದು ಎಕರೆಯಲ್ಲಿ ಬಹುಮಹಡಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಜತೆಗೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಇನ್ನು ದೇಶದ 18 ಮಹಾನಗರಗಳಲ್ಲಿ ಪ್ರಸ್ತುತ ಮೆಟ್ರೋ ಯೋಜನೆ ಪ್ರಗತಿಯಲ್ಲಿದೆ. ಅಲ್ಲೆಲ್ಲಾ ದೇಶ-ವಿದೇಶ ಕಂಪನಿಗಳು ಹೂಡಿಕೆಯ ಅವಕಾಶಗಳನ್ನು ನೋಡುತ್ತಿವೆ. ಅದರಲ್ಲಿ ನಮ್ಮ ಮೆಟ್ರೋ ಕೂಡ ಸೇರಿದೆ.

9ರಿಂದ 10 ಲಕ್ಷ ಪ್ರಯಾಣಿಕರ ಗುರಿ ತಲುಪಲು ಫ್ರೀಕ್ವೆನ್ಸಿ ಹೆಚ್ಚಳ ಅಥವಾ ರಾತ್ರಿ ಸಮಯ ವಿಸ್ತರಣೆ ಯೋಚನೆ ಇದೆಯೇ? ಸದ್ಯಕ್ಕೆ 5 ನಿಮಿಷಗಳಿಗೊಂದು ಮೆಟ್ರೋ ಸೇವೆ ಕಲ್ಪಿಸಲಾಗುತ್ತಿದೆ. ಇನ್ನೂ ವರ್ಕ್‌ ಫ್ರಾಂ ಹೋಂ ಪೂರ್ತಿಯಾಗಿ ತೆರವಾಗಿಲ್ಲ. ಈ ಹಂತದಲ್ಲಿ ವಿಸ್ತರಣೆ ಅಥವಾ ಫ್ರೀಕ್ವೆನ್ಸಿ ಹೆಚ್ಚಳ ಕಷ್ಟ. ಇದರಿಂದ ಸಾಕಷ್ಟು ಹೊರೆ ಆಗಲಿದೆ. ಬರುವ ವರ್ಷದಲ್ಲಿ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಆಗ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ತೀರ್ಮಾನಿಸಲಾಗುವುದು. ಈಗಂತೂ ವಿಸ್ತರಣೆ ಆಲೋಚನೆ ಇಲ್ಲ.

ಮೆಟ್ರೋ ಆದಾಯ ಮತ್ತು ಸಾಲದ ಬಗ್ಗೆ ಹೇಳಿ….

ನಿತ್ಯ 5.3ರಿಂದ 5.4 ಲಕ್ಷ ಜನ ಸಂಚರಿಸುತ್ತಿದ್ದು, 1.2 ಕೋಟಿ ರೂ. ಹರಿದುಬರುತ್ತಿದೆ. ವಿದೇಶಿ ಬ್ಯಾಂಕ್‌ಗಳು ಸೇರಿದಂತೆ ಒಟ್ಟಾರೆ ಅಂದಾಜು 11 ಸಾವಿರ ಕೋಟಿ ರೂ. ದೀರ್ಘಾವಧಿ ಸಾಲ ಇದೆ. ಇದನ್ನು ವಿವಿಧ ಹಂತಗಳಲ್ಲಿ ಮರುಪಾವತಿಸಲಾಗುತ್ತದೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.