ಕ್ಲಿಕ್ ವಿತ್ ಗೋ ಮಾತಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ
Team Udayavani, Jun 4, 2020, 12:14 PM IST
ಚಿಕ್ಕಮಗಳೂರು: ವಂದೇ ಮಾತರಂ ಟ್ರಸ್ಟ್ ಆಯೋಜಿಸಿದ್ದ ಕ್ಲಿಕ್ ವಿತ್ ಗೋ ಮಾತಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡ ಚಿತ್ರಗಳು.
ಚಿಕ್ಕಮಗಳೂರು: ವಂದೇ ಮಾತರಂ ಟ್ರಸ್ಟ್ ಆಯೋಜಿಸಿದ್ದ ಕ್ಲಿಕ್ ವಿತ್ ಗೋ ಮಾತಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕೊಪ್ಪದ ಪ್ರಮೋದ್ ನಾಯಕ್ ಅವರು ಕರುವನ್ನು ಅಪ್ಪಿಕೊಂಡು ಮುತ್ತಿಡುತ್ತಿರುವ ಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಗೋಮಾತೆ ಸಂರಕ್ಷಣೆ ಕುರಿತ ಯುವಜನರಲ್ಲಿ ಜಾಗೃತಿ ಮೂಡಿಸುವ ಸರ್ಧೆ ಏರ್ಪಡಿಸಿದ್ದು ಪ್ರಥಮ ವರ್ಷದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಶಿಲ್ಪಾ ಆರ್. ಚಂದ್ರನ್ ದ್ವಿತೀಯ, ಬೆಳಗಾವಿ ಜಿಲ್ಲೆ ಹುಕ್ಕೇರಿಯ ಸುನೀಲ್ ಚಿನ್ನಣ್ಣನವರ್ ತೃತೀಯ ಹಾಗೂ ಹಾವೇರಿ ಜಿಲ್ಲೆ ಹುಲಗೂರಿನ ಐಶು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಚಿಕ್ಕಮಗಳೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಹಾಸನ, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಚಿತ್ರಗಳು ಬಂದಿದ್ದು. ಬಗೆಬಗೆಯ ಗೋವುಗಳೊಂದಿಗೆ ನಿಂತು, ಕುಳಿತು, ಮುತ್ತಿಕ್ಕಿ, ಮುದ್ದಾಡುತ್ತಿದ್ದ ಚಿತ್ರಗಳನ್ನು ಕ್ಲಿಕ್ಕಿಸಿ ಸ್ಪರ್ಧೆಗೆ ಕಳುಹಿಸಿದ್ದರು. ಕೃಷ್ಣವೇಷಧಾರಿಗಳು, ಮುದ್ದು ಮಕ್ಕಳು, ಯುವತಿಯರು ಗೋ ಕರುವಿನೊಂದಿಗೆ ಅಕ್ಕರೆಯ ನೋಟದಲ್ಲಿರುವ ಚಿತ್ರಗಳನ್ನು ತೆಗೆಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದು ಆಯೋಜಕ ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ತಿಳಿಸಿದ್ದಾರೆ.
ಗೋವು ತಾಯಿಗೆ ಸಮಾನ. ಹುಟ್ಟಿದ ಮಗು ಒಂದೂವರೆ ವರ್ಷ ತಾಯಿಯ ಎದೆಹಾಲು ಕುಡಿಯುತ್ತದೆ ಅಷ್ಟೆ. ಅದೇ ಗೋವಿನ ಹಾಲನ್ನು ಬದುಕಿರುವ ತನಕ ಕುಡಿಯುತ್ತೇವೆ. ಇಂತಹ ಗೋ ಸಂತತಿ ಉಳಿಯಬೇಕು. ಯುವಜನರಲ್ಲಿ ಗೋಭಕ್ತಿ ಮೂಡಬೇಕೆಂದು ಅರಿವು ಮೂಡಿಸುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ