ಮತ್ತೆ ಮೂವರಿಗೆ ಕೋವಿಡ್
13 ಜನ ಗುಣಮುಖಜಾಲಿನಗರದ 80 ವರ್ಷದ ವಯೋವೃದ್ಧೆ ಸಾವು
Team Udayavani, Jun 4, 2020, 11:13 AM IST
ದಾವಣಗೆರೆ: ಬುಧವಾರ ದಾವಣಗೆರೆಯಲ್ಲಿ ಮೂವರಿಗೆ (ಮೃತಪಟ್ಟಿರುವ ವೃದ್ಧೆಯೂ ಸೇರಿ) ಹೊಸದಾಗಿ ಕೋವಿಡ್ ಸೋಂಕು ದೃಢಪಟ್ಟಿದ್ದರೆ, 13 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆಯ ಜಾಲಿನಗರದ 80 ವರ್ಷದ ವಯೋವೃದ್ಧೆ (ರೋಗಿ ನಂಬರ್ 3861)ಗೆ ರೋಗಿ ನಂಬರ್ 2415 ರ ಸಂಪರ್ಕದಿಂದ ಮೇ. 28 ರಂದು ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿತ್ತು. ಮೇ. 29 ರಂದು ನಿಧನರಾಗಿದ್ದರು. ಅಂದೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶವವನ್ನು ತಂದು ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಬುಧವಾರ ಬಂದ ವರದಿಯಲ್ಲಿ ಮೃತ ವೃದ್ಧೆಯಲ್ಲಿ ಕೋವಿಡ್ ಸೋಂಕು ಇದ್ದದ್ದು ದೃಢಪಟ್ಟಿದೆ.
ರೋಗಿ ನಂಬರ್ 2415ರ ಸಂಪರ್ಕದಿಂದ 23 ವರ್ಷದ ಯುವಕ(ರೋಗಿ ನಂಬರ್ 3862)ನಿಗೆ ಸೋಂಕು ಬಂದಿದೆ. ರಾಜಸ್ಥಾನದಿಂದ ವಾಪಾಸ್ಸಾಗಿದ್ದ 26 ವರ್ಷದ ಯುವಕ(ರೋಗಿ ನಂಬರ್ 3977)ನಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊರೊನಾದಿಂದ ಗುಣಮುಖರಾದ ರೋಗಿ ನಂಬರ್ 1293, 2276, 2279, 2280, 2282, 2412, 2413, 2414, 2819, 2818, 1962, 582, 2274 ಬುಧವಾರ ಜಿಲ್ಲಾ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 166 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 134 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಐವರಯ ಸಾವನ್ನಪ್ಪಿದ್ದಾರೆ. ಈಗ 27 ಸಕ್ರಿಯ ಪ್ರಕರಣಗಳಿವೆ. ನಿನ್ನೆ 286 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈವರೆಗೆ ಕೊರೊನಾ ಸಂಬಂಧಿತ ಪರೀಕ್ಷೆಗೆ ಕಳಿಸಲಾಗಿದ್ದ 9628(ಬುಧವಾರದ 383 ಸೇರಿ) 8644 ಮಾದರಿಗಳ ವರದಿ ನೆಗೆಟಿವ್ ಎಂದು ಬಂದಿದೆ.ಇನ್ನೂ 286 ಜನರ ಗಂಟಲ ದ್ರವ ಮಾದರಿ ವರದಿ ಬರಬೇಕಾಗಿದೆ. 16 ಕಂಟೈನ್ಮೆಂಟ್ ಝೋನ್ಗಳಲ್ಲಿ ಪ್ರತಿ ದಿನ ಜ್ವರ, ಐಎಲ್ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. ಬಫರ್ ಝೋನ್ನಲ್ಲಿ 3 ದಿನಗಳಿಗೊಮ್ಮೆ ಸಮೀಕ್ಷೆ ನಡೆಸಲಾಗುತ್ತಿದೆ.
ತೀವ್ರ ಉಸಿರಾಟದ ತೊಂದರೆಗೆ(ಎಸ್ ಎಆರ್ಐ)ಸಂಬಂ ಧಿಸಿದಂತೆ ಈವರೆಗೆ 338 ಪರೀಕ್ಷೆ ನಡೆಸಲಾಗಿದ್ದು 3 ಪಾಸಿಟಿವ್ ಬಂದಿದ್ದು, 331 ನೆಗೆಟಿವ್ ಎಂದು ವರದಿ ಬಂದಿದೆ. 3 ರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ. ಶೀತ ಕೆಮ್ಮು ಜ್ವರ (ಐಎಲ್ಐ)ಕ್ಕೆ ಸಂಬಂಧಿಸಿದಂತೆ 652 ಪರೀಕ್ಷೆ ನಡೆಸಲಾಗಿದ್ದು, 619 ನೆಗೆಟಿವ್ ಎಂದು ವರದಿ ಬಂದಿದ್ದು, 7 ಪಾಸಿಟಿವ್ ವರದಿ ಬಂದಿದೆ ಮತ್ತು 26 ಜನರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…