ಮಾನವೀಯತೆ ಮೆರೆದ ಅಧಿಕಾರಿಗೆ ಸನ್ಮಾನ
Team Udayavani, Jun 5, 2020, 11:32 AM IST
ದಾವಣಗೆರೆ: ಬಸವಾಪಟ್ಟಣ ಉಪ ತಹಶೀಲ್ದಾರ್ ಎನ್.ಎಸ್.ಚಂದ್ರಪ್ಪ ಅವರಿಗೆ ಸನ್ಮಾನ
ದಾವಣಗೆರೆ: ರಸ್ತೆ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದ ಪ್ರೇಮಾ (44 ವರ್ಷ) ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆತಂದು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಸವಾಪಟ್ಟಣ ನಾಡ ಕಚೇರಿಯ ಉಪ ತಹಶೀಲ್ದಾರ್ ಎನ್.ಎಸ್. ಚಂದ್ರಪ್ಪ ಅವರನ್ನು ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸನ್ಮಾನಿಸಿದರು.
ಮೇ. 30 ರಂದು ತ್ಯಾವಣಿಗಿ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗಳೂರು ತಾಲೂಕಿನ ಹಳದಂಡೆ ಗ್ರಾಮದ ಪ್ರೇಮಾ ಎಂಬುವರು ದಾವಣಗೆರೆಯಿಂದ ಮೋಟಾರ್ ಬೈಕಿನಲ್ಲಿ ಬರುತ್ತಿರುವಾಗ ಮತ್ತಿ ಗ್ರಾಮದ ಸಮೀಪ ಅಡ್ಡ ಬಂದ ಎಮ್ಮೆಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪ್ರೇಮಾ ತೀವ್ರ ಗಾಯಗೊಂಡು ಒದ್ದಾಡುತ್ತಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ ಉಪ ತಹಶೀಲ್ದಾರ್ ಚಂದ್ರಪ್ಪ ಗಾಯಾಳು ತಮ್ಮ ಕಾರಿನಲ್ಲಿ ದಾವಣಗೆರೆ ಎಸ್ಎಸ್ ಆಸ್ಪತ್ರೆಗೆ ತಂದು ಸೇರಿಸಿ, ಆಸ್ಪತ್ರೆ ಖರ್ಚಿಗೆಂದು 10 ಸಾವಿರ ನೀಡಿದ್ದರು. ಪ್ರೇಮಾ ತಂದೆ ತಾಯಿಗೆ ವಿಷಯ ತಿಳಿಸಿದ್ದರು.
ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ನಮ್ಮ ಸುತ್ತಮುತ್ತಲು ಏನಾದರೂ ಅವಘಡ ಸಂಭವಿಸಿದರೆ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆಯಬೇಕು ಎಂದರು. ಅಪಘಾತಕ್ಕೀಡಾದ ಪಂಚಾಕ್ಷರಪ್ಪನವರಿಗೆ ಧೈರ್ಯ ಹೇಳಿದರು. ಚಂದ್ರಪ್ಪನವರ ಪತ್ನಿ ಬಿ.ಎಸ್.ರೇಣುಕಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ