ಹೆಸ್ಕಾಂನಿಂದ ಫ‌ಟಾಫ‌ಟ್‌ ಟಿಸಿ ಬದಲಾವಣೆ

ದೂರು ನೀಡಿದ 24 ಗಂಟೆಯಲ್ಲಿ ಸ್ಪಂದನೆ

Team Udayavani, Apr 1, 2022, 11:29 AM IST

7

ಹುಬ್ಬಳ್ಳಿ: ಸುಟ್ಟ ಅಥವಾ ದುರಸ್ತಿಗೆ ಬಂದ ವಿದ್ಯುತ್‌ ಪರಿವರ್ತಕಗಳನ್ನು (ಟ್ರಾನ್ಸ್ ಫಾರ್ಮರ್‌) ಬದಲಾಯಿಸಲು ಹಿಂದೆ ದೊಡ್ಡ ಕಸರತ್ತುಗಳನ್ನೇ ಮಾಡಬೇಕಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ದುರಸ್ತಿಗಾಗಿ ದೂರು ನೀಡಿದ 24 ಗಂಟೆಯಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದೆ.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಈ ಕಾರ್ಯದಲ್ಲಿ ಶೇ.99.13 ಸಾಧನೆ ತೋರಿದೆ. ಸುಟ್ಟ ಅಥವಾ ದುರಸ್ತಿಗೆ ಬಂದ ವಿದ್ಯುತ್‌ ಪರಿವರ್ತಕಗಳನ್ನು ಬದಲಾಯಿಸಲು ಕೆಲವೊಮ್ಮೆ ವಾರಗಟ್ಟಲೆ ಹಿಡಿಯುತ್ತಿತ್ತು. ಇದಕ್ಕಾಗಿ ಹೆಸ್ಕಾಂ ಕಚೇರಿಗಳಿಗೆ ಜನರು, ರೈತರು ಅಲೆಯಬೇಕಿತ್ತು. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ಇದಕ್ಕಾಗಿ ಲಾಬಿಯೇ ನಡೆಯುತ್ತಿತ್ತು. ಆದರೀಗ ಆ ಎಲ್ಲಾ ಅವ್ಯವಹಾರ ಹಾಗೂ ವಿಳಂಬಕ್ಕೆ ಕಡಿವಾಣ ಬಿದ್ದಿದೆ.

ಇಂಧನ ಸಚಿವ ವಿ.ಸುನೀಲಕುಮಾರ ಸೆಪ್ಟಂಬರ್‌ ತಿಂಗಳಲ್ಲಿ ಕೈಗೊಂಡ ದಿಟ್ಟ ನಿರ್ಧಾರದಿಂದ ವಿದ್ಯುತ್‌ ಪರಿವರ್ತಕಗಳ ಬದಲಾವಣೆ ಕಾರ್ಯ ದೊಡ್ಡದಲ್ಲ ಎಂಬುದು ಸಾಬೀತಾಗಿದೆ. ಹೆಸ್ಕಾಂ ಈ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಟೋಲ್‌ ಫ್ರಿ ನಂಬರ್‌ ಅನ್ನು ಜನರಿಗೆ ನೀಡಿದೆ.

2022 ಜನವರಿ, ಫೆಬ್ರವರಿ, ಮಾರ್ಚ್‌ 3 ತಿಂಗಳಲ್ಲಿ 24 ಗಂಟೆಯಲ್ಲಿ ಪರಿವರ್ತಕ ಬದಲಾಯಿಸಿದ ಕಾರ್ಯದಲ್ಲಿ ಶೇ.99.13 ಸಾಧನೆ ಮಾಡಿದೆ. 24 ಗಂಟೆಯಲ್ಲಿ 7168 ಟಿಸಿ ಬದಲು: ಕಳೆದ ಮೂರು ತಿಂಗಳಲ್ಲಿ 7231 ಪರಿವರ್ತಕ ಬದಲಾವಣೆಗೆ ಕರೆ ಬಂದಿದ್ದು, ಅವುಗಳಲ್ಲಿ 24 ಗಂಟೆಯಲ್ಲಿ 7168 ಪರಿವರ್ತಗಳನ್ನು ಬದಲಾಯಿಸಲಾಗಿದೆ. ಉಳಿದ 63 ಪರಿವರ್ತಕಗಳ ಬದಲಾವಣೆಗೆ ರಸ್ತೆಯಿಲ್ಲದೆ, ವಾಹನಗಳು ಹೋಗದಂತಹ ತಾಂತ್ರಿಕ ಕಾರಣಗಳಿಂದ 48 ಹಾಗೂ 72 ಗಂಟೆಗಳಲ್ಲಿ ಬದಲಾಯಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 2587 ಅತೀ ಹೆಚ್ಚು ಪರಿವರ್ತಕಗಳು ದುರಸ್ತಿಗೆ ಬಂದಿದ್ದು, ಅವುಗಳ ಪೈಕಿ 2531 ಪರಿವರ್ತಗಳನ್ನು 24 ಗಂಟೆಯಲ್ಲಿ ಬದಲಾಯಿಸಲಾಗಿದೆ. ಇಲ್ಲಿ ನೀರಾವರಿ ಪ್ರದೇಶ ಹೆಚ್ಚಿರುವ ಕಾರಣಕ್ಕೆ ಪಂಪ್‌ಸೆಟ್‌ಗಳ ಬಳಕೆ ಹೆಚ್ಚಿರುವುದು ದುರಸ್ತಿ ಅಥವಾ ಸುಟ್ಟು ಹೋಗುವ ಪ್ರಮಾಣ ಹೆಚ್ಚಿದೆ.

ವಿಜಯಪುರ ಜಿಲ್ಲೆಯಲ್ಲಿ ದುರಸ್ತಿಗೆ ಬಂದ 1289 ಪರಿವರ್ತಗಳ ಪೈಕಿ 1288ನ್ನು 24 ಗಂಟೆಯಲ್ಲಿ ಬದಲಾಯಿಸಲಾಗಿದೆ. ಉಳಿದಂತೆ ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಶೇ.100 ಸಾಧನೆ ತೋರಿದೆ.

ಪರಿವರ್ತಕ ಬ್ಯಾಂಕ್‌: ಸಕಾಲದಲ್ಲಿ ಪರಿವರ್ತಕ ಬದಲಾವಣೆಗಾಗಿ ಟೋಲ್‌ ಫ್ರಿ ನಂಬರ್‌ಗೆ ಕರೆ ಮಾಡುತ್ತಿದ್ದಂತೆ ಯೂನಿಕ್‌ ಐಡಿ ನೀಡಲಾಗುತ್ತಿದೆ. 24 ಗಂಟೆಯಲ್ಲಿ ಪರಿವರ್ತಕ ಬದಲಾಯಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ವಿಭಾಗ ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿ “ಪರಿವರ್ತಕ ಬ್ಯಾಂಕ್‌’ ಮಾಡಲಾಗಿದೆ. ಇದಕ್ಕಾಗಿ ಹೆಸ್ಕಾಂನ 121 ವಾಹನಗಳನ್ನು ಬಳಸಲಾಗುತ್ತಿದೆ. ಈ ಕಾರ್ಯಕ್ಕೆ ಹೆಚ್ಚುವರಿ ವಾಹನದ ಬೇಡಿಕೆಯಿದ್ದರೆ ಪಡೆಯಲು ಅನುಮೋದನೆ ಕೂಡ ನೀಡಲಾಗಿದೆ.

ಸೆಪ್ಟಂಬರ್‌ ತಿಂಗಳಲ್ಲಿ ಈ ಕಾರ್ಯಕ್ಕೆ ತೀವ್ರಗತಿಯ ಚಾಲನೆ ನೀಡಿದ ಪರಿಣಾಮ ಬೇಸಿಗೆ ವೇಳೆ ಅತಿಯಾದ ಒತ್ತಡದಿಂದ ವಿದ್ಯುತ್‌ ಪರಿವರ್ತಕಗಳು ದುರಸ್ತಿಗೆ ಬಂದರೆ ರೈತರಿಗೆ, ಜನರಿಗೆ ಅನಾನುಕೂಲವಾಗದಂತೆ ಅತ್ಯಂತ ಕಡಿಮೆ ಸಮಯದಲ್ಲಿ ಬದಲಾಯಿಸಲು ಸಾಧ್ಯವಾಗುವಂತಾಗಿದೆ.

51 ದುರಸ್ತಿ ಕೇಂದ್ರಗಳು: ಪರಿವರ್ತಕ ಬ್ಯಾಂಕ್‌ನೊಂದಿಗೆ ಅವುಗಳ ದುರಸ್ತಿಗೂ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರದ ಎನ್‌ಜಿಇಎಫ್‌ 2 ಬೃಹತ್‌ ದುರಸ್ತಿ ಕೇಂದ್ರಗಳು ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ 51 ಕಡೆಗಳಲ್ಲಿ ಕೇಂದ್ರಗಳನ್ನು ಗುರುತಿಸಿ ಅವುಗಳ ಮೂಲಕ ದುರಸ್ತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರತಿ ತಾಲೂಕಿಗೆ ಒಂದರಂತೆ ಈ ಕೇಂದ್ರಗಳಿವೆ. ಖಾಸಗಿ ಕೇಂದ್ರಗಳ ಮೂಲಕ ದುರಸ್ತಿಯಾದ ಪರಿವರ್ತಕಗಳನ್ನು ಹೆಸ್ಕಾಂನ ತಂತ್ರಜ್ಞರ ತಂಡ ಪರಿಶೀಲಿಸಿದ ನಂತರವಷ್ಟೇ ಬದಲಿಸಲು ಒಪ್ಪಿಗೆ ನೀಡಲಾಗುತ್ತಿದೆ. ಈ ಕಾರ್ಯದಿಂದ ಜನರು ಹೆಸ್ಕಾಂ ಕಚೇರಿಗಳಿಗೆ ಅಲೆಯುವುದೂ ತಪ್ಪಿದಂತಾಗಿದೆ.

 

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು 24 ಗಂಟೆಯಲ್ಲಿ ವಿದ್ಯುತ್‌ ಪರಿವರ್ತಕಗಳ ಬದಲಾವಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ಶೇ.99.13 ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಟೋಲ್‌ ಫ್ರಿ ನಂಬರ್‌ ನೀಡಲಾಗಿದೆ. ಕರೆ ಬಂದ 24 ಗಂಟೆಯೊಳಗೆ ವಿಳಂಬಕ್ಕೆ ಯಾವುದೇ ಆಸ್ಪದವಿಲ್ಲದಂತೆ ಈ ಕಾರ್ಯ ನಡೆಯುತ್ತಿದೆ. ಶೇ.100 ಸಾಧನೆ ಮಾಡುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ.

– ಡಿ.ಭಾರತಿ, ವ್ಯವಸ್ಥಾಪಕ ನಿರ್ದೇಶಕಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ

ವಿದ್ಯುತ್‌ ಪರಿವರ್ತಕ ದುರಸ್ತಿಗೆ ಉಚಿತ ಟೋಲ್‌ ಫ್ರಿ ನಂಬರ್‌ 18004254754

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.