ಬೀದರ ಜನಮನ ತಟ್ಟುವಲ್ಲಿ ಯಶಸ್ವಿ
ಅಧಿಕಾರಿಗಳ ತಂಡದ ನಾಯಕನಾಗಿ ಎಲ್ಲರಿಗೂ ಸ್ಪಂದನೆ: ಮಹಾದೇವ
Team Udayavani, Jun 7, 2020, 12:04 PM IST
ಬೀದರ: ಬೆಂಗಳೂರಿಗೆ ವರ್ಗಾವಣೆಯಾಗಿರುವ ಡಾ| ಮಹಾದೇವ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಬೀದರ: ತಾವು ಬೀದರ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡುವಾಗ ಎಲ್ಲ ಮಿತಿಯಲ್ಲಿ ಮತ್ತು ಹಲವು ತೊಡಕುಗಳ ಮಧ್ಯೆಯೂ ಜನಮನ ತಟ್ಟಲಿಕ್ಕೆ ಯಶಸ್ವಿಯಾಗಿದ್ದೇವೆ ಎನ್ನುವುದೇ ಒಂದು ದೊಡ್ಡ ಸಾಧನೆ ಎಂದು ತಾವು ಭಾವಿಸಿಕೊಂಡಿರುವುದಾಗಿ ಬಿಡಿಎ ಆಯುಕ್ತರಾಗಿ ವರ್ಗಾವಣೆಯಾಗಿರುವ ಡಾ| ಎಚ್.ಆರ್. ಮಹಾದೇವ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಕೆಲಸ ಮಾಡಿದ ರೀತಿ, ತಾವು ಕೈಗೊಂಡ ಕಾರ್ಯಕ್ರಮಗಳ ಗುಣಾತ್ಮಕತೆಯನ್ನು ಜಿಲ್ಲೆಯ ಜನರು ಮೆಚ್ಚಿದ್ದಾರೆ ಎಂದು ಹೇಳಿದರು. ಜನರು ತಮ್ಮನ್ನು ಮತ್ತು ತಮ್ಮ ಆಡಳಿತದ ವೈಖರಿ ಒಪ್ಪಿಕೊಂಡಿದ್ದಾರೆ. ತಾವು ಅಧಿಕಾರಿಗಳ ತಂಡದ ಒಬ್ಬ ನಾಯಕನಾಗಿ ಎಲ್ಲರಿಗೂ ಸ್ಪಂದಿಸಿದ್ದೇನೆ. ಚುನಾವಣೆ ಮತ್ತು ಕೋವಿಡ್-19 ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಹಲವಾರು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿಯಿಡಿ ಶ್ರಮಿಸಿದ್ದರಿಂದ ಬಹಳಷ್ಟು ಕೆಲಸಗಳು ಸುಸೂತ್ರವಾಗಿ ನಡೆದಿವೆ. ಕೋವಿಡ್-19 ವೈರಸ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಇಲಾಖೆ ವಿಶೇಷವಾಗಿ ಕೆಲಸ ಮಾಡಿದೆ. ಇಲಾಖೆ ತನ್ನೆಲ್ಲ ಸಿಬ್ಬಂದಿ ಜತೆಯಲ್ಲಿ ಹಗಲು ರಾತ್ರಿ ಶ್ರಮಿಸಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ರೈತ ಮುಖಂಡರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡು ಬಂದಿದ್ದೇವೆ. ರೈತರ ಬದುಕಿನಲ್ಲಿ ಒಂದು ಹೊಸತನ ತರಲಿಕ್ಕೆ ಬಹಳಷ್ಟು ಶ್ರಮಪಟ್ಟಿದ್ದಾಗಿ ಮತ್ತು ಜಿಲ್ಲೆಯ ರೈತರ ಬಹುತೇಕ ರೈತರ ಬೇಡಿಕೆ ತಾವು ಈಡೇರಿಸಿದ್ದಾಗಿ ಹೇಳಿದರು.
ಶಾಸಕ ಬಿ.ನಾರಾಯಣರಾವ್, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್. ನಾಗೇಶ, ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ, ಭಂವರಸಿಂಗ್ ಮೀನಾ, ವಾರ್ತಾಧಿಕಾರಿ ಗವಿಸಿದ್ದಪ್ಪ ಮಾತನಾಡಿದರು. ಸಂಜೀವಕುಮಾರ ಜುಮ್ಮಾ, ಶಿವಶಂಕರ ಟೋಕರೆ ಡಾ| ಮಹಾದೇವ ಅವರ ಕಾರ್ಯವೈಖರಿ ಕುರಿತು ಕವನ ವಾಚಿಸಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇನ್ನಿತರ ಅಧಿಕಾರಿಗಳು ಇದ್ದರು. ಚನ್ನಬಸವ ಹೆಡೆ ನಿರೂಪಿಸಿದರು. ಡಿಯುಡಿಸಿ ಪಿ.ಡಿ. ಶರಣಬಸಪ್ಪ ಕೋಟಪ್ಪಗೋಳ ವಂದಿಸಿದರು.
ಜನ ಮೆಚ್ಚುವಂತೆ ಕೆಲಸ ಮಾಡುವೆ
ಬೀದರ ಜಿಲ್ಲೆಯ ಜನರು ಮೆಚ್ಚುವ ಹಾಗೆ ತಾವು ಜನಮನ ಅರಿತು ಕೆಲಸ ನಿರ್ವಹಿಸುತ್ತೇನೆ. ಒಂದು ತಂಡವಾಗಿ ಕಾರ್ಯನಿರ್ವಹಿಸಿದಾಗಲೇ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಅದಕ್ಕೆ ಎಲ್ಲ ಸಹದ್ಯೋಗಿಗಳ ಸಹಕಾರ ಕೂಡ ಮುಖ್ಯವಾಗಿರುತ್ತದೆ. ತಾವು ಜಿಲ್ಲೆಯಲ್ಲಿನ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯ ಜನರು ಮೆಚ್ಚುವ ಹಾಗೆ ಕಾರ್ಯ ಮಾಡುವೆ.
ಆರ್. ರಾಮಚಂದ್ರನ್,
ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್