ಸಿಡಿಲು ಬಡಿದು 11 ಕುರಿಗಳು ಸಾವು
Team Udayavani, Jun 22, 2022, 2:15 PM IST
ಯಡ್ರಾಮಿ: ಪಟ್ಟಣದ ಹೊರ ವಲಯದಲ್ಲಿನ ಕಡಕೋಳ ಶ್ರೀ ಮಡಿವಾಳೇಶ್ವರ ಅಶ್ರಮ ಸಮೀಪದ ಹೊಲವೊಂದರಲ್ಲಿ ಮಂಗಳವಾರ ಸಾಯಂಕಾಲ ಜೋರಾದ ಮಳೆ ಸಹಿತ ಸಿಡಿಲು ಬಡಿದ ಪರಿಣಾಮ 11 ಕುರಿಗಳು ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ರಾಯಪ್ಪ ಜಟ್ಟೆಪ್ಪ ಮುಳ್ಳೊಳ್ಳಿ ಎಂಬಾತನಿಗೆ ಸೇರಿದ ಕುರಿಗಳು ಮೃತಪಟ್ಟಿವೆ.
ಈತನ ಮಗ ಸಂತೋಷ ಎನ್ನುವಾತ ಎಂದಿನಂತೆ ಮಂಗಳವಾರ 11 ಕುರಿಗಳನ್ನು ಪಟ್ಟಣದ ಸಮೀಪದ ಹೊಲದ ದಂಡೆಯಲ್ಲಿ ಮೇಯಿಸುತ್ತಿರುವಾಗ ಜೋರಾದ ಮಳೆ ಬರುತ್ತಿದ್ದಂತೆ ಜತೆಗೆ ಮಿಂಚು ಗುಡುಗಿನ ಜೋರಾದ ಸದ್ದಿಗೆ ಭಯಗೊಂಡು ಸಮೀಪದ ಶೆಡ್ ಒಂದರಲ್ಲಿ ಓಡಿ ಹೋಗಿ ಕುಳಿತಿದ್ದ. ಅಷ್ಟರಲ್ಲೆ ಕೋಲ್ಮಿಂಚಿನೊಂದಿಗೆ ಸಿಡಿಲು ಬೀಳುತ್ತಿದ್ದಂತೆ 11 ಕುರಿಗಳು ಕ್ಷಣದಲ್ಲೇ ಜೀವಬಿಟ್ಟು ನೆಲಕ್ಕುರುಳಿವೆ. ಈ ಕುರಿತಂತೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ