ವ್ಯಾಪಾರದಲ್ಲಿ ಆರ್ಥಿಕ ನಿರ್ವಹಣೆ ಅರಿಯಿರಿ: ಖಜೂರಿ
Team Udayavani, Feb 5, 2022, 12:04 PM IST
ಆಳಂದ: ಬೀದಿ ವ್ಯಾಪಾರದಲ್ಲೂ ನೈಪುಣ್ಯತೆಯಿಂದ ದಿನನಿತ್ಯದ ಆರ್ಥಿಕ ನಿರ್ವಹಣೆ ಅರಿತರೆ ಕುಟುಂಬದ ಆರ್ಥಿಕ ಹೊರೆ ತಗ್ಗಿಸಿ ನಿಶ್ಚಿಂತವಾಗಿ ಜೀವನ ಸಾಗಬಹುದು ಎಂದು ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಹೇಳಿದರು.
ಪುರಸಭೆ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಬೀದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯಗಳಿದ್ದು ಅವುಗಳ ಲಾಭ ಪಡೆಯಬೇಕು. ಬ್ಯಾಂಕ್ ಗಳಿಂದ ಸಾಲ ಪಡೆದಂತೆ ಸಕಾಲಕ್ಕೆ ಪಾವತಿಸಿದರೆ ಪುನಃ ಸಾಲ ನೀಡುತ್ತಾರೆ. ಬ್ಯಾಂಕಿನೊಂದಿಗೆ ಲೆವಾದೇವಿ ಸಂಬಂಧ ಉತ್ತಮವಾಗಿಟ್ಟುಕೊಂಡು ಆರ್ಥಿಕ ವೃದ್ಧಿಗೊಳಿಸಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸರ್ಕಾರದ ಅಧಿನಿಯಮವಿದ್ದು, ಈ ನಿಯಮ ತಿಳಿದುಕೊಳ್ಳಬೇಕು. ವ್ಯಾಪಾರಿಗಳ ಸಮಸ್ಯೆಗಳನ್ನು ಗಮನಕ್ಕೆ ತಂದರೆ ನಿವಾರಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುರೇಖಾ ಮಾತನಾಡಿ, ಸಾರ್ವಜನಿಕರಿಗೆ ಇರುವ ಇಲಾಖೆ ಯೋಜನೆಗಳ ಮಾಹಿತಿ ಒದಗಿಸಿ ಈ ಕುರಿತು ನೆರೆ ಹೊರೆಯವರಿಗೆ ತಿಳಿಹೇಳಿ ಎಂದರು. ಕೌಶಲ್ಯ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ರಾಜಕುಮಾರ ಗುತ್ತೇದಾರ ಆರ್ಥಿಕ ಉಳಿತಾಯ ಕುರಿತು ವಿವರಿಸಿದರು. 2014ರ ಮತ್ತು 2020ರ ಸರ್ಕಾರದ ಅಧಿನಿಯಮ ಕುರಿತು ಹಾಗೂ ಬೀದಿಯಲ್ಲಿ ವ್ಯಾಪಾರ ಕೈಗೊಳ್ಳುವುದು, ಪುರುಷ ವ್ಯಾಪಾರಿಗಳು ಬ್ಯಾಂಕ್ ಖಾತೆ ಹೊಂದಿ ಉಳಿತಾಯ ಮಾಡಿಕೊಳ್ಳಬೇಕು ಎಂದರು.
ಬೀದಿ ವ್ಯಾಪಾರಿ ಸಂಘದ ಜಾವೇದ ಭಾಗವಾನ, ಫಾರುಕ್ ಭಾಗವಾನ್, ಸೈಫಾನ್ ಭಾಗವಾನ, ಸಿದ್ಧಮ್ಮ ಬಸವರಾಜ, ಗುರುನಾಥ ಕಳಸೆ, ಬಿಸ್ಮಿಲಾ ಭಾಗವಾನ, ಸಾಬವ್ವ ಇದ್ದರು. ಭೀಮಾಶಂಕರ ಬೆಳಮ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ