ಭೀಮಾ-ಕಾಗಿಣಾ ಸಂಗಮದಲ್ಲಿ ಸಂಕ್ರಾಂತಿ

ಸಂಕ್ರಾಂತಿಯ ವಿಶೇಷತೆಗಳಲ್ಲೊಂದಾದ ಎಳ್ಳು, ಅರಿಶಿಣ ಮಿಶ್ರಣದ ಹೊಳೆ ಸ್ನಾನ ಭಕ್ತಿಯ ಪ್ರತೀಕವಾಗಿತ್ತು.

Team Udayavani, Jan 15, 2021, 4:38 PM IST

ಭೀಮಾ-ಕಾಗಿಣಾ ಸಂಗಮದಲ್ಲಿ ಸಂಕ್ರಾಂತಿ

ಅರಿಶಿಣ ಮಿಶ್ರಣದ ಹೊಳೆ ಸ್ನಾನ ಭಕ್ತಿಯ ಪ್ರತೀಕವಾಗಿತ್ತು.

ವಾಡಿ: ಸಮೀಪದ ಕುಂದನೂರು, ಯನಗುಂಟಿ ಹಾಗೂ ಹೊನಗುಂಟಿ ಗ್ರಾಮಗಳ ಮಧ್ಯದ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮ ತಟದಲ್ಲಿ ಎಂದಿನಂತೆ ಸಂಕ್ರಾಂತಿ ಸಡಗರ ಮನೆ ಮಾಡಿತ್ತು. ಚಿತ್ತಾಪುರ, ಶಹಾಬಾದ ಮತ್ತು ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ನದಿಯಲ್ಲಿ ಸೇರಿ ಪುಣ್ಯಸ್ನಾಗೈಯುವ ಮೂಲಕ ಸಂಗಮೇಶ್ವರನ ಕೃಪೆಗೆ ಪಾತ್ರರಾದರು.

ಹಬ್ಬದ ಬುತ್ತಿ ಹೊತ್ತು ಬಂದ ಮಹಿಳೆಯರು, ಯುವತಿಯರು, ಹಿರಿಯರು ನದಿ ದಡದಲ್ಲಿ ಬೀಡು ಬಿಟ್ಟು ಸಂಗಮಗೊಂಡ ಗಂಗೆಯ ಪಾತ್ರದಲ್ಲಿ ಸ್ನಾನ ಮಾಡಿದರು. ಸಂಕ್ರಾಂತಿಯ ವಿಶೇಷತೆಗಳಲ್ಲೊಂದಾದ ಎಳ್ಳು, ಅರಿಶಿಣ ಮಿಶ್ರಣದ ಹೊಳೆ ಸ್ನಾನ ಭಕ್ತಿಯ ಪ್ರತೀಕವಾಗಿತ್ತು. ಮನೆಯಿಂದ ತರಲಾಗಿದ್ದ ಬುತ್ತಿಯೊಳಗಿನ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಎಣ್ಣೆ ಬದನೆಕಾಯಿ ಪಲ್ಲೆ, ಕಬ್ಬು, ಸುಲಿಗಾಯಿ, ಹಸಿ ತರಕಾರಿ ದಿನಿಸಿನ ಭೋಜನ ಮೃಷ್ಟಾನ್ನಕ್ಕೆ ಸಮವಾಗಿತ್ತು. ನದಿಯ ದಡದ ಮರಳಿನಲ್ಲಿ ಯುವಕರು ವಿವಿಧ ಆಟಗಳನ್ನಾಡಿ ಮನರಂಜನೆಯಲ್ಲಿ ತೊಡಗಿದ್ದು ಕಂಡುಬಂತು.

ನದಿ ದಂಡೆಯಲ್ಲಿರುವ ಸಂಗಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಮಲ್ಲೇಶಪ್ಪ ಹೂಗಾರ ಅವರು ಬಂದ ಭಕ್ತರಿಗೆ ಪ್ರಸಾದ ಸೇವೆ ಮಾಡಿದ್ದರು. ಮೂರು ತಾಲೂಕಿನ ಜನರು ಒಂದೆಡೆ ಸೇರಿ ಸಂಕ್ರಾಂತಿ ಆಚರಿಸಿದ್ದೇ ಇಲ್ಲಿನ ಮತ್ತೂಂದು ವಿಶೇಷ ಎನ್ನಬಹುದು.

ರೈತರೊಂದಿಗೆ ಶಾಸಕ ಪಾಟೀಲ ಸಂಕ್ರಮಣ ಆಚರಣೆ

ಫಜಲಪುರ: ಕೃಷಿ ಆಧಾರಿತ ಭಾರತದಲ್ಲಿ ರೈತರು ಆಚರಿಸುತ್ತಿರುವ ಹಬ್ಬಗಳು ತುಂಬಾ ವಿಶೇಷ. ಅವರ ಉತ್ಸಾಹ ಹೆಚ್ಚಾಗಲು ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು.

ತಾಲೂಕಿನ ಮಾಶಾಳ ಗ್ರಾಮದ ಹಿರಿಯ ಮುಖಂಡ ನಾನಾ ಸಾಹೇಬ ಅವರ ತೋಟದಲ್ಲಿ ರೈತರೊಂದಿಗೆ ಎಳ್ಳ ಅಮಾವಾಸ್ಯೆ, ಸಂಕ್ರಾಂತಿ ಹಬ್ಬ ಆಚರಿಸಿ ಮಾತನಾಡಿದ ಅವರು, ರೈತರ ಹಬ್ಬಗಳು ಸಂಭ್ರಮದಿಂದ ಕೂಡಲು ಅವರು ಬೆಳೆದ ಬೆಳೆಗಳಿಗೆ ಸರಕಾರ ಸೂಕ್ತ ಬೆಲೆ ನೀಡಿ ಖರೀದಿಸಬೇಕು. ಅವರ ಸಂಭ್ರಮ ಕೇವಲ ಹಬ್ಬಕ್ಕೆ ಸೀಮೀತವಾಗಿರಬಾರದು. ಪ್ರತಿಕ್ಷಣವೂ ಸರಕಾರಗಳು ರೈತರ ಹಿತಕಾಯಬೇಕು ಎಂದರು.

ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ತಾಪಂ ಸದಸ್ಯ ರಾಜಕುಮಾರ ಬಬಲಾದ, ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಮುಖಂಡರಾದ ನಾನಾಸಾಹೇಬ ಪೊಲೀಸ್‌ ಪಾಟೀಲ್‌, ಮಲ್ಲು ಕಿಣಗಿ, ಶರಣಗೌಡ ಉಡಚಣ ಇದ್ದರು.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.