ಎರಡು ಸಾವಿರ ದವಸ ಧಾನ್ಯ ಕಿಟ್ ಹಸ್ತಾಂತರ
Team Udayavani, Apr 22, 2020, 10:50 AM IST
ಸೇಡಂ: ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಬಡವರಿಗಾಗಿ ಎರಡು ಸಾವಿರ ದವಸ ಧಾನ್ಯಗಳ ಕಿಟ್ನ್ನು ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಹಸ್ತಾಂತರಿಸಿದರು.
ಸೇಡಂ: ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಬಡವರಿಗೆ ಎರಡು ಸಾವಿರ ದವಸ, ಧಾನ್ಯಗಳ ಕಿಟ್ ಗಳನ್ನು ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಮಂಗಳವಾರ ಹಸ್ತಾಂತರಿಸಿದ್ದಾರೆ. ಸೇಡಂ ವಿಧಾನಸಭಾ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಇಲ್ಲದ 1900 ಕುಟುಂಬಗಳಿಗೆ ತಲುಪಿಸುವಂತೆ ಅವರು ಇದೇ ವೇಳೆ ತಾಲೂಕು ಆಡಳಿತಕ್ಕೆ ಕೋರಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೇಡಂ ತಾಲೂಕು ವ್ಯಾಪ್ತಿಯಲ್ಲಿ 1720 ಹಾಗೂ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ವ್ಯಾಪ್ತಿಯ 180 ಜನರನ್ನು ಗುರುತಿಸಲಾಗಿದ್ದು, ಅವರಿಗೆ ನೆರವಾಗಲೆಂದು 7 ಕೆ.ಜಿ ಅಕ್ಕಿ, 1 ಕೆಜಿ ಬೇಳೆಯ ಕಿಟ್ ನೀಡಲಾಗಿದೆ. ಇದಲ್ಲದೆ ಸರ್ಕಾರದ ವತಿಯಿಂದಲೂ ನೆರವು ನೀಡಲಾಗುತ್ತಿದೆ ಎಂದರು. ಲಾಕಡೌನ್ನಿಂದ ಕೋವಿಡ್ ಹತೋಟಿಗೆ ತರಬಹುದು. ಆದರೆ ನಿರಂತರ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ತೊಲಗಿಸಬಹುದು. ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲೆಗೆ 400 ಐಸೊಲೇಷನ್ ವಾರ್ಡ್ ಹಾಗೂ ಕನಿಷ್ಟ 200 ವೆಂಟಿಲೇಟರ್ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ವಿಳಂಬವಾಗುತ್ತಿದ್ದು, ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.
ಚಿತ್ತಾಪುರ, ಚಿಂಚೋಳಿ ಹಾಗೂ ಸೇಡಂ ವ್ಯಾಪ್ತಿಯಲ್ಲಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಪ್ರತಿಯೊಬ್ಬರಿಗೆ 2000
ನಗದು ನೀಡುವ ತೀರ್ಮಾನವಾಗಿದೆ. ಬಹುತೇಕರಿಗೆ ಇನ್ನೂ ಹಣ ತಲುಪಿಲ್ಲ. ಕಿರಾಣಿ ಅಂಗಡಿಗಳಲ್ಲಿ ಹಾಗೂ ಪಡಿತರ ಕೇಂದ್ರಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಹಾಯಕ ಆಯುಕ್ತರು ಕಠಿಣ ಕ್ರಮ ಜರುಗಿಸಬೇಕೆಂದರು.
ಹಾಪಕಾಮ್ಸ್ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ್ ಮಾಲಿಪಾಟೀಲ, ಸುದರ್ಶನರೆಡ್ಡಿ ಪಾಟೀಲ, ವಿಶ್ವನಾಥರೆಡ್ಡಿ ಪಾಟೀಲ, ಗಫೂರ, ನಾಜಿಮೋದ್ದಿನ್, ರಾಜು ಹಡಪದ, ಸಂಪತಕುಮಾರ ಭಾಂಜಿ, ಸಂತೋಷ ತಳವಾರ, ರಶೀದ ರಂಜೋಳ, ರಾಘವೇಂದ್ರ ಮುಸ್ತಾಜರ್, ದತ್ತಾತ್ರೇಯ ಐನಾಪೂರ, ಹಾಜಿ ನಾಡೇಪಲ್ಲಿ, ಸತ್ತಾರ ನಾಡೇಪಲ್ಲಿ, ವಿಲಾಸಗೌತಂ ನಿಡಗುಂದ, ಪ್ರಶಾಂತ ಸೇಡಂಕರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು