ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್
Team Udayavani, Dec 4, 2021, 1:09 PM IST
ಕಲಬುರಗಿ: ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಹುರಿಯಾಳು ಶಿವಾನಂದ ಪಾಟೀಲ ಮರತೂರ್ ಅನುಭವಿಗಳು, ಪಂಚಾಯಿತಿ ಪ್ರಪಂಚದ ಎಲ್ಲ ವಿಚಾರಗಳನ್ನು ಸಮಪರ್ಕವಾಗಿ ಬಲ್ಲವರು. ಆದ್ದರಿಂದ ಅವರನ್ನು ಬೆಂಬಲಿಸಿ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಮತದಾರರಲ್ಲಿ ಮನವಿ ಮಾಡಿದರು.
ಜೇವರ್ಗಿ ತಾಲೂಕಿನ ಹಿಪ್ಪರಹಾ ಎಸ್.ಎನ್, ಮಂದೇವಾಲ, ರಂಜಣಗಿ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿಯಲ್ಲೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡದೇ ವಂಚಿಸಿದೆ. ಇದಕ್ಕೆಲ್ಲ ಪಾಠ ಕಲಿಸಬೇಕಾದರೆ ಪರಿಷತ್ನಲ್ಲಿ ನೀವೆಲ್ಲವೂ ಕೈ ಬಲಪಡಿಸಬೇಕು. ಶಿವಾನಂದ ಪಾಟೀಲರಿಗೆ ಪ್ರಥಮ ಪ್ರಾಶಸ್ತ್ಯ ಮತ ಹಾಕಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಸಿರಿ, ರುಕ್ಕುಂ ಪಟೇಲ್ ಇಜೇರಿ, ನೀಲಕಂಠ ಅವಂಟಿ, ರವಿ ಕೋಳಕೂರ, ಶಂಕರೆಪ್ಪಗೌಡ ಪಾಟೀಲ ಹರನೂರ,ಅನ್ನು ದೇಸಾಯಿ, ಬಹದ್ದೂರ್ ರಾಥೋಡ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಯುವ ಘಟಕದ ಅಧ್ಯಕ್ಷ ರಿಯಾಜ್ ಪಟೇಲ್, ಶಿವಲಿಂಗಪ್ಪ ಯರಗಲ್, ಶಿವಪುತ್ರಪ್ಪ ಕೋರಿ, ದತ್ತಪ್ಪ ಪುಜಾರಿ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ