ಅಭಿವೃದ್ಧಿಯೇ ಮೂಲ ಮಂತ್ರ: ಪಾಟೀಲ್
Team Udayavani, Jan 11, 2022, 12:02 PM IST
ಅಫಜಲಪುರ: ಅಧಿಕಾರ ಶಾಶ್ವತವಲ್ಲ ಹೀಗಾಗಿ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ತಾಲೂಕಿನ ಮಾಶಾಳ ಗ್ರಾಮದಲ್ಲಿ 2021-22ನೇ ಸಾಲಿನ 4.702 ಯೋಜನೆ ಅಡಿಯಲ್ಲಿ ಮಾಶಾಳ ದಿಕ್ಸಂಗಾ ಹಾಗೂ ಅಫಜಲಪುರ ಎಪಿಎಂಸಿ ಯಿಂದ ಬಳ್ಳೂಂಡಗಿ ಮುಖ್ಯ ಕಾಲುವೆಗೆ ಸಂಪರ್ಕಿಸುವ 2.2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನಗೆ ಅಧಿಕಾರ ನೀಡಿದ ಜನರ ಬೇಡಿಕೆಗಳನ್ನು ಈಡೇರಿಸುವ ಕೆಲಸದಲ್ಲಿ ತೊಡಗಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರ ಸೇವೆ ಮಾಡುತ್ತೇನೆ. ಈಗ ಅಧಿಕಾರ ನೀಡಿರುವ ಜನರ ನಂಬಿಕೆ ಉಳಿಸಿಕೊಳ್ಳುವುದಲ್ಲದೆ ತಾಲೂಕಿನಾದ್ಯಂತ ಅವಧಿ ಮುಗಿಯುದರೊಳಗಾಗಿ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಜನರ ಋಣ ತೀರಿಸುತ್ತೇನೆ ಎಂದರು.
ಮಾಜಿ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಞಾನೇಶ್ವರಿ ಪಾಟೀಲ್ ಮಾತನಾಡಿದರು. ಮುಖಂಡರಾದ ರಾಜು ಬಬಲಾದ, ಮಹಾದೇವಗೌಡ ಕರೂಟಿ, ಶಿವಾನಂದ ಗಾಡಿಸಾಹುಕಾರ, ಶಿವು ಪಾರಗೊಂಡ, ಬಾಬಾಸಾಹೇಬಗೌಡ ಪಾಟೀಲ್, ಶರಣು ಕುಂಭಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂ. 30ರಂದು ವಿಶ್ವಾಸಮತ ಸಾಬೀತುಪಡಿಸಲು ಸೂಚನೆ
ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್ ಮಹತ್ವದ ಮಾತುಕತೆ
ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ
ಪಿಎನ್ಬಿ ಹಗರಣದ ಆರೋಪಿ ನೀರವ್ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ
ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ