ವಾಡಿ: ಹೆಚ್ಚಿನ ದರ ಪಡೆದ ಖಾಸಗಿ ವಾಹನಗಳು

ವಾಡಿ-ಯಾದಗಿರಿ ಮಧ್ಯೆ ಪ್ರಯಾಣ ದರ 50ರೂ.ಗಳನ್ನು ಸರ್ಕಾರವೇ ನಿಗದಿಪಡಿಸಿದೆ.

Team Udayavani, Apr 8, 2021, 6:08 PM IST

Bus

ವಾಡಿ: ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ನೌಕರರು ಬುಧವಾರದಿಂದ ಮುಷ್ಕರ ಹಮ್ಮಿಕೊಂಡಿದ್ದರಿಂದ ಖಾಸಗಿ ವಾಹನಗಳ ದರ್ಬಾರ್‌ ಹೆಚ್ಚಿತ್ತು. ಪಟ್ಟಣದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಮೇಲೆ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಸ್ಥಗಿತವಾಗಿತ್ತು. ಹೀಗಾಗಿ ಖಾಸಗಿ ವಾಹನಗಳ ಪ್ರಯಾಣ ದರ ಸಾಮಾನ್ಯವಾಗಿ ಗಗನಕ್ಕೇರಿತ್ತು.

ಬಸ್‌ಗಳು ನಿಲ್ಲುತ್ತಿದ್ದ ಸ್ಥಳದಲ್ಲಿ ಕ್ರೂಸರ್‌, ಆಟೋ, ಕಾರುಗಳ ದರ್ಭಾರ್‌ ಕಂಡು ಬಂತು. ಕಲಬುರಗಿ, ಯಾದಗಿರಿ ನಗರಗಳಿಗೆ ಹೋಗಲು ಅಣಿಯಾಗಿದ್ದ ನೂರಾರು ಪ್ರಯಾಣಿಕರು, ಖಾಸಗಿ ವಾಹನಗಳ ದರ ಕೇಳಿ ಧಂಗಾಗಿ ಹೋದರು.

ಪ್ರತಿದಿನದಂತೆ ನಿಗದಿತ ಸಾರಿಗೆ ವೆಚ್ಚ ಪಡೆಯಬೇಕಾದ ಕ್ರೂಸರ್‌ ಚಾಲಕರು, ದುಪ್ಪಟ್ಟು ಹಣಕ್ಕೆ ಬೇಡಿಕೆಯಿಡುತ್ತಿದ್ದರು. 45 ಕಿ.ಮೀ ಅಂತರದ ವಾಡಿ-ಕಲಬುರಗಿ, ವಾಡಿ-ಯಾದಗಿರಿ ಮಧ್ಯೆ ಪ್ರಯಾಣ ದರ 50ರೂ.ಗಳನ್ನು ಸರ್ಕಾರವೇ ನಿಗದಿಪಡಿಸಿದೆ. ಆದರೆ ಬುಧವಾರ ಕ್ರೂಸರ್‌ ಚಾಲಕರು ವಾಡಿ-ಕಲಬುರಗಿಗೆ ತಲುಪಿಸಲು 100ರೂ. ಪೀಕಿದರು.

ದೇವರಿಗೆ ಬಂದವರು ದಾರಿ ಕಾಣದಾದರು: ಈ ಭಾಗದ ಪ್ರತಿಷ್ಠಿತ ಭಕ್ತಿ ಕೇಂದ್ರಗಳಾದ ಬಳವಡಗಿ ಏಲಾಂಬಿಕೆ, ಕೊಂಚೂರು ಶ್ರೀ ಹನುಮಾನ, ನಾಲವಾರದ ಶ್ರೀ ಕೋರಿಸಿದ್ಧೇಶ್ವರ, ರಾವೂರ ಶ್ರೀ ಸಿದ್ಧಲಿಂಗೇಶ್ವರ, ಸನ್ನತಿಯ ಶ್ರೀ ಚಂದ್ರಲಾಂಬಿಕೆ, ಲಾಡ್ಲಾಪುರದ ಹಾಜಿ ಸರ್ವರ್‌, ಹಳಕರ್ಟಿಯ ಶ್ರೀ ವೀರಭದ್ರೇಶ್ವರ ದೇವರ ದರ್ಶನಕ್ಕಾಗಿ ವಿವಿಧೆಡೆಯಿಂದ ಬಂದಿದ್ದ ಭಕ್ತರು ಸಾರಿಗೆ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವಂತೆ ಆಯಿತು. ಬಳವಡಗಿ ಏಲಾಂಬಿಕೆ ದರ್ಶನಕ್ಕಾಗಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮಂಗಳವಾರವೇ ಆಗಮಿಸಿದ್ದ ಶಿವಗಂಗಾ, ಇಮಲಾಬಾಯಿ ಎನ್ನುವವರು ಬುಧವಾರ ವಾಪಸ್‌ ಊರಿಗೆ ಹೊರಡಲು ಬಸ್‌ ಇಲ್ಲ ಎನ್ನುವುದನ್ನು ಅರಿತು ಪರದಾಡಿದರು. ಕ್ರೂಸರ್‌ ಏರಿದವರು ಪ್ರಯಾಣ ದರ ಕೇಳಿ ಕೆಳಗಿಳಿದರು.

ಕರ್ನಾಟಕದಲ್ಲಿ ಬಸ್‌ ಬಂದ್‌ ಇರ್ತಾವ ಅಂತ ಗೊತ್ತಿರಲಿಲ್ಲ. ಪಾದುಕೆ ಕಟ್ಟಿಕೊಂಡವರು ನಾವು. ಬಳವಡಗಿ ಯಲ್ಲಮ್ಮನ ಬಳಿ ಬಂದಿದ್ದೆವು. ಬಸ್‌ ಬಂದ್‌ ಅವಾ ಅಂದ್ರ 10ರಿಂದ 20ರೂ. ಹೆಚ್ಚಿಸಬೇಕು. ನೂರು ರೂ. ಕೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಬಹುತೇಕ ವ್ಯಾಪಾರಿಗಳು, ಕಾಲೇಜು ವಿದ್ಯಾರ್ಥಿಗಳು ಕಲಬುರಗಿಗೆ ಹೋಗುವುದನ್ನೇ ಕೈಬಿಟ್ಟರು. ಬಸ್‌ ಬಂದ್‌ ದಿನವನ್ನು ಖಾಸಗಿ ವಾಹನಗಳು ಸುಲಿಗೆ ದಿನವನ್ನಾಗಿ ಆಚರಿಸಿದ್ದು ಸ್ಪಷ್ಟವಾಗಿ ಗೋಚರಿಸಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.