ಅರಣ್ಯ ಕೃಷಿ ಪ್ರೋತ್ಸಾಹಕ್ಕೆ ಸಸಿ ವಿತರಣೆ
Team Udayavani, Jun 10, 2020, 5:33 AM IST
ಪಿರಿಯಾಪಟ್ಟಣ: ರಾಜ್ಯ ಸರ್ಕಾರ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆ ತಾಲೂಕಿನ ಕಂಪಲಾಪುರ ಮತ್ತು ಇಂಗಲ ಗೆರೆಯ ಸಸ್ಯ ಕ್ಷೇತ್ರಗಳಲ್ಲಿ ರೈತರಿಗೆ ವಿತರಿಸಲು 3 ಲಕ್ಷ ಸಸಿ ಬೆಳೆಸಲಾಗಿದೆ.
ಯಾವ್ಯಾವ ಸಸಿಗಳು: ಈಗಾಗಲೇ ತಂಬಾಕು ಬೆಳೆ ಯುವ ರೈತರಿಗೆ ತಲಾ 10ರಂತೆ 30 ಸಾವಿರ ಸಸಿ ವಿತರಿ ಸಲಾಗಿದೆ. ಇನ್ನು 3 ಲಕ್ಷ ಸಸಿಗಳಿದ್ದು, 1.50 ಲಕ್ಷ ಸಿಲ್ವರ್, ಹೆಬ್ಬೇವಿನ ಸಸಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದಕಾರಣ ಇದರ ಬದಲಿಗೆ ಶ್ರೀಗಂಧ, ಮಹಾ ಗಾನಿ, ಬೀಟೆ, ಬಿದಿರು, ಶಿವಾನಿ, ಹಲಸು, ಕರಿಬೇವು, ಹೊನ್ನೆ, ನೇರಳೆ, ಹುಣಸೆ, ತಾರೇ ಗಸಗಸೆ, ಸೀಬೆ, ನುಗ್ಗೆ,
ನಿಗ್ಗೆ ಬೇವು ಸೇರಿದಂತೆ ಇತರ ಸಸಿ ಬೆಳೆಸಲಾಗಿದೆ. ರಸ್ತೆ ಬದಿ ಹಾಗೂ ಇತರೆ ಸರ್ಕಾರಿ ಜಾಗಗಳಲ್ಲಿ ನೆಡಲು 30 ಸಾವಿರ ಸಸಿ ಬೆಳೆಸಿದ್ದು, ಆಲ, ಅರಳಿ, ಬೇವು, ಬಿಲ್ವಾರ, ಹತ್ತಿ, ಮಹಾಘನಿ, ಗೋನಿ, ಅಂಟವಾಳ ಇತ್ಯಾದಿ ಸಸಿಗಳನ್ನು ಪೋಷಿಸಲಾಗುತ್ತಿದೆ. ರೈತರಿಗೆ ಶ್ರೀಗಂಧದ ಮರ ಬೆಳೆಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ 5 ಸಾವಿರ ಸಸಿಗಳನ್ನು ಬೆಳೆಸಲಾಗಿದೆ.
ಹಣ್ಣಿನ ಗಿಡಗಳು: ರೈತರಿಗೆ ಉರುವಲು ಅಥವಾ ಇತರೆ ವಾಣಿಜ್ಯ ಉದ್ದೇಶದ ದಾಳಿಂಬೆ, ಸಪೋಟ, ನುಗ್ಗೆ, ಸೀಬೆ, ಹಲಸು ಮುಂತಾದ ಹಣ್ಣಿನ ಗಿಡಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಹೊಂಗೆ, ಬೇವು ಇತ್ಯಾದಿ ಗಿಡ ವಿತರಿಸಲಾಗುತ್ತದೆ. ಸಸಿ ಪಡೆಯಲು 10 ರೂ.ಗಳೊಂ ದಿಗೆ 2 ಪೋಟೊ, ಆಧಾರ್ ಕಾರ್ಡ್, ಆರ್ಟಿಸಿ ಗುರುತಿನ ಪತ್ರಗಳನ್ನು ನೀಡಿ ನೋಂದಣಿ ಆಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ