Hunsur: ಮಕರ ಸಂಕ್ರಾಂತಿ; ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಮೆರವಣಿಗೆ
Team Udayavani, Jan 15, 2024, 2:41 PM IST
ಹುಣಸೂರು: ಧನುರ್ಮಾಸದ ಕೊನೆ ದಿನದ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಮೆರವಣಿಗೆ ನಡೆಸಿದರು.
ನಗರದ ವಿವಿಧ ಬಡಾವಣೆಗಳ ಶ್ರೀ ರಾಮ ಮಂದಿರಗಳಿಂದ ಲಕ್ಷಣತೀರ್ಥ ನದಿ ತಟದ ಅಶ್ವತ್ಥ ಕಟ್ಟೆಗೆ ಹೊತ್ತು ತಂದಿದ್ದ ಅಲಂಕೃತ ಪಲಕ್ಕಿಯಲ್ಲಿ ಶ್ರೀ ರಾಮದೇವರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದ ನಂತರ ರಾಮನಾಮ ಜಪ ಮಾಡುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆ ಮನೆ ಬಳಿಗೆ ಬಂದ ವೇಳೆ ಪೂಜೆ ಸಲ್ಲಿಸಿದರು. ರಸ್ತೆಯಲ್ಲಿ ಈಡುಗಾಯಿ ಒಡೆದು ಧನ್ಯತಾ ಭಾವ ಮೆರೆದರು.
ಆನಂತರ ರಾಮ ಮಂದಿರಗಳಲ್ಲಿ ಭಜನೆ ನಡೆಸಿ ಮಹಾ ಮಂಗಳಾರತಿ ನಂತರ ಕೋಸಂಬರಿ, ಮಜ್ಜಿಗೆ, ಪಾನಕ, ಸಿಹಿ, ಖಾರ ಪೊಂಗಲ್ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ