Mandya Crime: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ
Team Udayavani, Dec 13, 2023, 3:46 PM IST
ಮಂಡ್ಯ: ಪತ್ನಿ ಮೇಲೆ ಅನೈತಿಕ ಸಂಬಂಧದ ಶಂಕೆಯಿಂದ ಪತಿ ಪತ್ನಿಯನ್ನು ಕೊಲೆಗೈದು ಮಗು ಜೊತೆ ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಧುಶ್ರೀ (32) ಕೊಲೆಯಾದ ಮಹಿಳೆ. ಮಹದೇವ(38) ಕೊಲೆ ಮಾಡಿದ ಕಿರಾತಕ ಪತಿ.
ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಗಂಡ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಪತ್ನಿ ಮೇಲೆ ಅನೈತಿಕ ಸಂಬಂಧದ ಶಂಕೆಯಿದ್ದ ಗಂಡ ಎನ್ನಲಾಗಿದ್ದು, ಅದೇ ವಿಚಾರಕ್ಕೆ ಆಗಾಗ ದಂಪತಿಗಳ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಗಂಡನ ಅನುಮಾನದ ಭೂತಕ್ಕೆ ಪತ್ನಿ ಮಧುಶ್ರೀ ಕೆಲ ತಿಂಗಳ ಹಿಂದೆ ತವರು ಮನೆ ಸೇರಿದ್ದು, ಎರಡು ತಿಂಗಳ ಹಿಂದೆಯಷ್ಟೆ ರಾಜಿ ಪಂಚಾಯತಿ ನಡೆಸಿ ಕುಟುಂಬಸ್ಥರು ಗಂಡನ ಮನೆಗೆ ವಾಪಸ್ಸು ಕಳುಹಿಸಿದ್ದರು.
ನಿನ್ನೆ ಮೊಬೈಲ್ ರೀಚಾರ್ಜ್ ವಿಚಾರವಾಗಿ ಮತ್ತೆ ದಂಪತಿಗಳ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕಬ್ಬಿಣದ ರಾಡ್ ನಿಂದ ಪತ್ನಿ ಮೇಲೆ ಮಹದೇವ್ ಹಲ್ಲೆ ನಡೆಸಿದ್ದ. ಘಟನೆಯಿಂದ ತೀವ್ರ ಹಲ್ಲೆಗೆ ಒಳಗಾದ ಮಧುಶ್ರೀ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಪತ್ನಿ ಸಾವನಪ್ಪುತ್ತಿದ್ದಂತೆ ಪತಿ ಮಗು ಜೊತೆ ಕಿರುಗಾವಲು ಪೊಲೀಸರಿಗೆ ಶರಣಾಗಿದ್ದಾನೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.