ಕೃಷಿಕನ ಜೀವನಾಧಾರ ರಬ್ಬರ್ ಮರಕ್ಕೆ ಮೆಸ್ಕಾಂ ಕೊಡಲಿ ಏಟು
ಮಾಹಿತಿ ನೀಡದೆ 14 ವರ್ಷದ ಮರ ಕಡಿದ ಹಿರಿಯಡ್ಕ ಮೆಸ್ಕಾಂ ಇಲಾಖೆ
Team Udayavani, Apr 10, 2020, 1:14 PM IST
ಬೆಳ್ತಂಗಡಿ: ರಬ್ಬರ್ ಮರ ಕೊಂಬೆಯೊಂದು ಎಚ್.ಟಿ. ಲೈನ್ ವಿದ್ಯುತ್ ತಂತಿಗೆ ಸ್ಪರ್ಶಿಸುತ್ತದೆ ಎಂಬ ನೆಪದಲ್ಲಿ ಕೃಷಿಕರೊಬ್ಬರ 40 ರಬ್ಬರ್ ಮರಗಳನ್ನು ಯಾವುದೇ ಮಾಹಿತಿ ನೀಡದೆ ಹಿರಿಯಡ್ಕ ಕೆಪಿಟಿಸಿಎಲ್ ಸಂಸ್ಥೆಯ ಸಿಬಂದಿಗಳು ಕಡಿದು ಹಾಕಿದ ಅಮಾನವೀಯ ಘಟನೆ ನಾರಾವಿ ಗ್ರಾಮದಲ್ಲಿ ನಡೆದಿದೆ.
ನಾರಾವಿ ಗ್ರಾಮದ ಭೂತಗುಡ್ಡೆ ಎಂಬಲ್ಲಿ ಎನ್.ಶ್ರೀನಿವಾಸ್ ವಿ.ಕಿಣಿ ಎಂಬವರಿಗೆ ಸೇರಿದ ಸ.ನಂ. 456ರಲ್ಲಿ 3.22 ಎಕರೆ ಜಮೀನಿನಲ್ಲಿ ಫಲವತ್ತಾದ ರಬ್ಬರ್ ಕೃಷಿ ಮಾಡಿದ್ದರು. ಎ.8 ಏಕಾಏಕಿ ಕೆಪಿಟಿಸಿಎಲ್ ಹಿರಿಯಡ್ಕ ಶಾಖೆಯ ಸಿಬಂದಿಗಳು ಅಕ್ರಮ ಪ್ರವೇಶಗೈದು 14 ವರ್ಷ ಪ್ರಾಯದ 38 ಮರಗಳನ್ನು ಯಾವುದೇ ಮಾಹಿತಿ ನೀಡದೆ ಕಡಿದುರುಳಿಸಲಾಗಿದೆ.
ಲೈನ್ ಕೆಳಭಾಗ ಎರಡು ಬದಿ 11*11 ಒಟ್ಟು 22 ಅಡಿ ಸ್ಥಳವಕಾಶ ಬಿಟ್ಟಿದ್ದ ಮರಗಳನ್ನು ಕಡಿದು ಹಾಕಲಾಗಿದೆ. ಕೇವಲ ಟ್ರಿಮ್ಮಿಂಗ್ ಮಾಡಬೇಕಿದ್ದ ಮರಗಳನ್ನು ಕಡಿಯಲಾಗಿದೆ. ಕಷ್ಟಪಟ್ಟು ಬೆಳೆದ ಫಲವತ್ತಾದ ರಬ್ಬರ್ ಗಿಡಗಳನ್ನು ಏಕಾಏಕಿ ಕೃಷಿಯನ್ನು ಈ ರೀತಿ ನಾಶ ಮಾಡಿದರೆ ಹೇಗೆ ಎಂದು ಶ್ರೀನಿವಾಸ್ ಕಿಣಿ ಪ್ರಶ್ನಿಸಿದ್ದಾರೆ.
ಈ ಕುರಿತು ಮೆಸ್ಕಾಂ ಇಲಾಖೆಗೆ ಪ್ರಶ್ನಿಸಿದರೆ ಕಾನೂನು ಬದ್ಧವಾಗಿ ಕಡಿದಿದ್ದೇವೆ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಕೃಷಿಕರಿಗೆ ಮಾಹಿತಿ ನೀಡದಿರುವ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಈ ಕುರಿತು ಜಾಗದ ಕೃಷಿಕರು ವೇಣೂರು ಪೊಲೀಸ್ ಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ