Kundapura ಸಿದ್ಧಿ ವಿನಾಯಕ ವಸತಿ ಶಾಲಾ ಮಕ್ಕಳಿಂದ 2 ಗಿನ್ನೆಸ್‌ ದಾಖಲೆ

ರೂಬಿಕ್‌ ಕ್ಯೂಬ್‌ನಲ್ಲಿ ಅತಿದೊಡ್ಡ ದ್ವಿಮುಖ ಚಿತ್ರ, ಅತಿಹೆಚ್ಚು ಜನರು ರಚಿಸಿದ ಮೊಸಾಯಿಕ್‌ ಚಿತ್ರ

Team Udayavani, Dec 3, 2023, 11:00 PM IST

Kundapura ಸಿದ್ಧಿ ವಿನಾಯಕ ವಸತಿ ಶಾಲಾ ಮಕ್ಕಳಿಂದ 2 ಗಿನ್ನೆಸ್‌ ದಾಖಲೆ

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆ ರೂಬಿಕ್‌ ಕ್ಯೂಬ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸುವ ಮೂಲಕ ಗಿನ್ನೆಸ್‌ ಪುಸ್ತಕಕ್ಕೆ ಸೇರ್ಪಡೆಯಾಯಿತು. ರೂಬಿಕ್‌ ಕ್ಯೂಬ್‌ನಲ್ಲಿ ಅತಿದೊಡ್ಡ ದ್ವಿಮುಖ ಚಿತ್ರ ಹಾಗೂ ಅತಿಹೆಚ್ಚು ಮಂದಿ ಭಾಗವಹಿಸಿದ ರೂಬಿಕ್‌ ಕ್ಯೂಬ್‌ನ ಚಿತ್ರ ಬಿಡಿಸಿದ ದೇಶದ ಏಕೈಕ ಶಾಲೆಯಾಗಿ ಇತಿಹಾಸ ಬರೆಯಿತು.

ಗಿನ್ನೆಸ್‌ ಸಂಸ್ಥೆಯ ಎಡ್‌ಜ್ಯುಡಿಕೇಟರ್‌ ರಿಷಿನಾಥ್‌ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ರವಿವಾರ ಸಂಸ್ಥೆಯ ಕಾರ್ಯದರ್ಶಿ, ಪ್ರಾಂಶುಪಾಲ ಎಚ್‌. ಶರಣ ಕುಮಾರ ಅವರಿಗೆ ಗಿನ್ನೆಸ್‌ ವಿಶ್ವ ದಾಖಲೆಯ ಪ್ರಮಾಣ ಪತ್ರ ಹಸ್ತಾಂತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವೇ| ಮೂ| ಬಾಲಚಂದ್ರ ಭಟ್‌, ಆಡಳಿತಾಧಿಕಾರಿ ವೀಣಾರಶ್ಮಿ, ರಮಾದೇವಿ ಆರ್‌. ಭಟ್‌ ಹಾಗೂ ಗಿನ್ನೆಸ್‌ ದಾಖಲೆ ಮಾರ್ಗದರ್ಶಕ ಪೃಥ್ವೀಶ್‌ ಕೆ., ಉಪಪ್ರಾಂಶುಪಾಲ ರಾಮ ದೇವಾಡಿಗ ಉಪಸ್ಥಿತರಿದ್ದರು.

ಈಗಾಗಲೇ ಎರಡು ಗಿನ್ನೆಸ್‌ ದಾಖಲೆ ಮಾಡಿದ ಬ್ರಹ್ಮಾವರದ ಪೇತ್ರಿಯ ಪೃಥ್ವೀಶ್‌ ಕೆ. ಒಂದೇ ಕೈಯಲ್ಲಿ ರೂಬಿಕ್‌ ಕ್ಯೂಬ್‌ ಸವಾಲು ನಿರ್ವಹಿಸಿ ಗಮನ ಸೆಳೆದರು.

ಚರಿತ್ರೆಯ ಪುಟಗಳಲ್ಲಿ ದಾಖಲೆ
ಸಂಸ್ಥೆಯ ರಜತ ಮಹೋತ್ಸವ ವರ್ಷಾಚರಣೆ ಸಂದರ್ಭ ಗ್ರಾಮಾಂತರದ ಶಾಲಾ ವಿದ್ಯಾರ್ಥಿಗಳು ಮಾಡಿದ ಸಾಧನೆ ವಿಶ್ವಮಟ್ಟದಲ್ಲಿ ಚರಿತ್ರೆಯ ಪುಟಗಳಲ್ಲಿ ದಾಖಲೆ ಬರೆದಿದೆ. ರೊಟೇಟಿಂಗ್‌ ರೂಬಿಕ್‌ ಕ್ಯೂಬ್‌ನಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕ ಎಚ್‌. ರಾಮಚಂದ್ರ ಭಟ್‌ ಅವರ ಮೊಸಾಯಿಕ್‌ ಭಾವಚಿತ್ರ ರಚಿಸಲು 1,228 ಮಂದಿ ಭಾಗಿಯಾಗಿದ್ದರು.

ದೊಡ್ಡ ಚಿತ್ರ
1,228 ಮಂದಿ 1,300ರಷ್ಟು ಕ್ಯೂಬ್‌ಗಳಲ್ಲಿ 7.75×5.625 ಚ.ಅಡಿ ಉದ್ದಳತೆಯ 42.78 ಚ.ಅಡಿ ವಿಸ್ತೀರ್ಣದಲ್ಲಿ ಎಚ್‌. ರಾಮಚಂದ್ರ ಭಟ್‌ ಅವರ ಚಿತ್ರ ಮೂಡಿಸಲಾಯಿತು. ಯು.ಕೆ.ಯ ರೂಬಿಕ್ಸ್‌ ಬ್ರಾಂಡ್‌ ಲಿಮಿಟೆಡ್‌ 308 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮಾಡಿದ ರಚನೆಯ ದಾಖಲೆ ಇಲ್ಲಿ ಮುರಿದು ಬಿತ್ತು.

ಘೋಷಣೆ
ಕಳೆದ 4 ದಿನಗಳಿಂದ ಪ್ರತ್ಯಕ್ಷದರ್ಶಿಯಾಗಿದ್ದ ಗಿನ್ನೆಸ್‌ ಸಂಸ್ಥೆಯ ಎಡ್‌ಜ್ಯುಡಿಕೇಟರ್‌ ರಿಷಿನಾಥ್‌, ಸಾಧನೆಯ ಪರಿಶೀಲನೆ ನಡೆಸಿ, ಖಾಸಗಿ ಸರ್ವೆಯರ್‌ರಿಂದ ಅಳತೆ ಮಾಡಿಸಿ, ದಾಖಲೆ ಖಚಿತವಾದ ಬಳಿಕ, ನೂತನ ಗಿನ್ನೆಸ್‌ ವಿಶ್ವದಾಖಲೆಯ ಘೋಷಣೆ ಮಾಡಿದರು. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ 16 ಗಜೆಟೆಡ್‌ ಅಧಿಕಾರಿಗಳು, 16 ಮಂದಿ ಸಾಕ್ಷಿಗಳು ದೃಢೀಕರಿಸಿದರು.

ಸಂಭ್ರಮ
ಎರಡು ವಿಶ್ವ ದಾಖಲೆಯ ಗುರಿಯಲ್ಲಿ ಗುರುವಾರ ಗಣ್ಯರ ಉಪಸ್ಥಿತಿಯಲ್ಲಿ ಆರಂಭವಾದ ರೂಬಿಕ್‌ ಕ್ಯೂಬ್‌ ರಚನೆಯಲ್ಲಿ ಪಾಲ್ಗೊಂಡ ಸಹಪಾಠಿಗಳನ್ನು ಕ್ಷಣ ಕ್ಷಣಕ್ಕೂ ಉತ್ತೇಜಿಸುತ್ತಿದ್ದ ವಿದ್ಯಾರ್ಥಿಗಳು ನಿರೀಕ್ಷೆಯ ಅವಧಿಗಿಂತ ಮೊದಲೇ ಯಾವುದೇ ವೈಫಲ್ಯವಿಲ್ಲದೇ ದಾಖಲೆಯ ಗುರಿ ಮುಟ್ಟಿದಾಗ ಹಷೊìàದ್ಗಾರ ಮಾಡಿ ಜಯ ಘೋಷ ಹಾಕಿ ಕುಣಿದು ಸಂಭ್ರಮಿಸಿದರು.

ಮೊದಲ ದಾಖಲೆ
ಡಿ. 1ರಂದು 50 ವಿದ್ಯಾರ್ಥಿಗಳು 6,000 ಕ್ಯೂಬ್‌ಗಳನ್ನು ಬಳಸಿಕೊಂಡು 19.198 ಚ.ಮೀ ವಿಸ್ತೀರ್ಣದಲ್ಲಿ ದ್ವಿಮುಖ ಚಿತ್ರ ರಚಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದರು. ಒಂದು ಬದಿಯಲ್ಲಿ ಹಾಕಿ ಮಾಂತ್ರಿಕ ಮೇ| ಧ್ಯಾನಚಂದ್‌, ಇನ್ನೊಂದು ಬದಿಯಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರ ಚಿತ್ರ ರಚಿಸಿದ್ದರು. ಈ ಮೂಲಕ ಕಝಕಿಸ್ಥಾನದ ಝೆಂಗಿಸ್‌ ಐಟಾjನೋವ್‌ 5,100 ಕ್ಯೂಬ್‌ಗಳೊಂದಿಗೆ ನಿರ್ಮಿಸಿದ್ದ 15.878 ಚ.ಮೀ.ವಿಸ್ತಿರ್ಣದ ದಾಖಲೆ ಮುರಿದು ಬಿತ್ತು. ಪೃಥೀÌಶ್‌ ಅವರದ್ದು ಇದು 4ನೆಯ ದಾಖಲೆಯಾಗಿದೆ.

ಕಳೆದ ವರ್ಷ ನವಂಬರ್‌ನಿಂದ ಮಕ್ಕಳಿಗೆ ರೂಬಿಕ್‌ ಕ್ಯೂಬ್‌ ಸವಾಲು ಬಿಡಿಸಲು, ಜೂನ್‌ನಿಂದ ಚಿತ್ರ ಬಿಡಿಸಲು ತರಬೇತಿ ನೀಡಲಾಗುತ್ತಿತ್ತು. 7,500ರಷ್ಟು ಕ್ಯೂಬ್‌ಗಳನ್ನು ಸಮೀಪದ ಸರಕಾರಿ ಕನ್ನಡ ಶಾಲೆಗಳಿಗೆ ಉಚಿತವಾಗಿ ನೀಡಿ ಅವರಿಗೆ ತರಬೇತಿ ನೀಡಲಾಗುವುದು. ಮೊಬೈಲ್‌ನಿಂದ ದೂರ ಇರಿಸಲು, ಏಕಾಗ್ರತೆಗೆ, ಮನೋ ಸಾಮರ್ಥ್ಯ ವೃದ್ಧಿಗೆ ಇದು ಸಹಕಾರಿ ಎಂದು ಶರಣ ಕುಮಾರ್‌ ಹೇಳಿದರು.

ಎರಡು ದಾಖಲೆ
ಎಲ್ಲ ಮಕ್ಕಳು ಒಟ್ಟಾಗಿ 4 ದಿನಗಳ‌ಲ್ಲಿ ಎರಡು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸುವ ಮೂಲಕ ಭಾರತದ ಹೆಸರು ವಿಶ್ವಮಟ್ಟದಲ್ಲಿ ಮೂಡುವಂತೆ ಮಾಡಿದ ಸಂತೃಪ್ತಿ ಇದೆ.
ಎಚ್‌. ಶರಣ ಕುಮಾರ , ಪ್ರಾಂಶುಪಾಲರು, ಹಟ್ಟಿಯಂಗಡಿ
-ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ

ಟಾಪ್ ನ್ಯೂಸ್

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.