ಮಲೆನಾಡಿನ ಸುಂದರ ಹಳ್ಳಿ; ಸೋಮೇಶ್ವರನ ದಿವ್ಯಕ್ಷೇತ್ರ ಕಾಸರವಳ್ಳಿ

ದೇವಸ್ಥಾನ ಪೂರ್ವಕ್ಕೆ ಮುಖ ಮಾಡಿದ್ದು, ಬೆಳಗಿನ ಪ್ರಥಮ ಕಿರಣ ಲಿಂಗದ ಮೇಲೆ ಬೀಳುವುದು ವಿಶೇಷ

Team Udayavani, Aug 4, 2020, 11:02 AM IST

ಮಲೆನಾಡಿನ ಸುಂದರ ಹಳ್ಳಿ; ಸೋಮೇಶ್ವರನ ದಿವ್ಯಕ್ಷೇತ್ರ ಕಾಸರವಳ್ಳಿ

ಮಲೆನಾಡಿನ ಒಂದು ಸುಂದರ ಹಳ್ಳಿಯನ್ನು ನಿಮಗೆ ಪರಿಚಯಿಸಬೇಕೆಂಬ ಆಸಕ್ತಿ ನನ್ನದು. ಕೆಲವೊಮ್ಮೆ ನಾವು ದೂರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿರುತ್ತೇವೆ ಅಥವಾ ನೋಡಲು ಆಸಕ್ತಿ ಇರುತ್ತದೆ. ಆದರೆ ನಮ್ಮ ಹತ್ತಿರವಿರುವ ಸುಂದರ ಪ್ರಾಕೃತಿಕ ತಾಣಗಳನ್ನು ನಾವು ನೋಡಿರುವುದಿಲ್ಲ.

ಇದರಲ್ಲಿ ಕಾಸರವಳ್ಳಿ ಒಂದು. ಕಾಸರವಳ್ಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶೃಂಗೇರಿ ಹೆದ್ದಾರಿಯಲ್ಲಿ ತೀರ್ಥಹಳ್ಳಿಯಿಂದ 22ಕಿ.ಮೀ.ದೂರದಲ್ಲಿ ಬರುತ್ತದೆ. ಇಲ್ಲಿಯ ಸೋಮೇಶ್ವರ ದೇವಸ್ಥಾನ ಜಗತ್ಪ್ರಸಿದ್ಧವಾಗಿದ್ದು, ಸುಮಾರು 400 ವರ್ಷಗಳ ಹಿಂದೆ ಕೆಳದಿಯ ಅರಸರಾದ ಸೋಮ ಶೇಖರ ನಾಯ್ಕನಿಂದ ಕಟ್ಟಿಸಲ್ಪಟ್ಟಿತು.

ಭಗವಾನ್ ಶಿವ ವೈರಾಗ್ಯ ಮೂರ್ತಿ, ಲೋಕದ ಹಿತಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿಕೊಂಡವನು, ತಾನು ಸರ್ವ ಸಂಗ ಪರಿತ್ಯಾಗಿಯಾದರೂ ತನ್ನ ಸುತ್ತಲಿನ ಪರಿಸರವನ್ನು ಪ್ರಕೃತಿಯನ್ನು ಸುಂದರವಾಗಿಸಿದವನು. ಪರಶಿವನ ಯಾವುದೇ ತಾಣಗಳನ್ನು ನಾವು ಗಮನಿಸಿದಾಗ ಹೆಚ್ಚಿನವು ಸುಂದರ ಪರಿಸರದಲ್ಲಿ ನದಿಯ ದಂಡೆಯಲ್ಲಿ ಇರುವುದನ್ನು ಗಮನಿಸಬಹುದು. ಅಂದರೆ ನಾವು ಪ್ರಕೃತಿಯನ್ನು ಭಗವಂತನ ರೂಪದಲ್ಲಿ ಆರಾಧಿಸುತ್ತೇವೆ.

ಆಗ ಸುಂದರವಾದ ಪ್ರಕೃತಿ ಮತ್ತು ಭಗವಂತನ ಮೇಲಿನ ನಂಬಿಕೆ ಮೇಳೈಸಿದಾಗ ಅದೊಂದು ಸುಂದರ ರೂಪವಾಗಿ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ದೇವಸ್ಥಾನ ಪೂರ್ವಕ್ಕೆ ಮುಖ ಮಾಡಿದ್ದು, ಬೆಳಗಿನ ಪ್ರಥಮ ಕಿರಣ ಲಿಂಗದ ಮೇಲೆ ಬೀಳುವುದು ವಿಶೇಷ, ತುಂಗೆ ದೇವಸ್ಥಾನದ ಎದುರಿಗೆ ವಿಶಾಲವಾದ ಭೂಮಿಕೆಯಲ್ಲಿ ಸೌಮ್ಯ ಹರಿವಿನಿಂದ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಾಳೆ. ಶೃಂಗೇರಿಯ ಸಮೀಪ ಗಂಗಾ ಮೂಲದಲ್ಲಿ ಹುಟ್ಟುವ ತುಂಗೆ ಇಲ್ಲಿ ಹರಿದು ಬೃಹತ್ ಪಾತ್ರದಲ್ಲಿ ಮುಂದುವರಿಯುತ್ತಾಳೆ.

ಈ ಹಳ್ಳಿ ಗತಕಾಲದ ವೈಭವವನ್ನು ತೋರಿಸುತ್ತದೆ, ಬಿದನೂರಿನ ಅರಸರ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ, ಮಲೆನಾಡಿನ ಈ ಒಂದು ಹಳ್ಳಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡನಾಡಿಗೆ ಮಾದರಿಯಾಗಿತ್ತು, ಕೆಳದಿಯ ನಾಯಕರ ಕಾಲದ ಸಾಂಸ್ಕೃತಿಕ ರಾಯಭಾರಿಯಾಗಿತ್ತು. ಅರಸರ ಕಾಲದಲ್ಲಿ ಮಲೆನಾಡಿನ ಹೆಸರನ್ನು ದೂರದವೆಗೂ ಪಸರಿಸಿತ್ತು.

ಸ್ಥಳೀಯರು ಹೇಳುವ ಹಾಗೇ ಇಲ್ಲಿ ಅರಸರ ಕಾಲದಿಂದ ಇತ್ತೀಚಿನವರೆಗೂ ಜಾತ್ರೆ, ದೀಪೋತ್ಸವ ಮತ್ತು ನವರಾತ್ರಿ ಉತ್ಸವಗಳು ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದವು.ಇದಕ್ಕೆ ಪೂರಕವೆಂಬಂತೆ ಅಗ್ರಹಾರ ಮನೆಗಳು, ಪಡಸಾಲೆಗಳು, ದೊಡ್ಡ, ದೊಡ್ಡ ಮರದ ದಿಮ್ಮಿಗಳಲ್ಲಿ ಕೆತ್ತಿದ ಕೆತ್ತನೆಗಳು ಅವರ ಕಲಾ ನಿಪುಣತೆಯನ್ನು ದೈವಭಕ್ತಿ ಮತ್ತು ಆಸ್ತಿಕ ಮನೋಭಾವನೆಗೆ ಒಂದು ನಿದರ್ಶನ. ಬಿದನೂರಿನ ಇತಿಹಾಸದ ಪ್ರಕಾರ ಭೋಗಲಿಂಗವನ್ನು ಕಾಶಿಯಿಂದ ತರಲಾಯಿತು. ದೇವಸ್ಥಾನದ ಓಲಗದ ಮಂಟಪ, ಅಗ್ರಹಾರವನ್ನು, ತುಂಗೆಯ ತಟವನ್ನು ಹೊಂದಿರುವ ಕಾಸರವಳ್ಳಿ ಅರಸರ ಸಾಂಸ್ಕೃತಿಕ ಸೊಬಗಿನ ತವರೂರು.

ಮಲೆನಾಡಿನ ಕೇಂದ್ರ ಭಾಗದಲ್ಲಿರುವ ಈ ಹಳ್ಳಿ ಅಡಿಕೆ, ಕಾಫಿ, ಭತ್ತದ ಬೆಳೆಗಳಿಂದ ಶ್ರೀಮಂತವಾಗಿದೆ, ಎಲ್ಲೆಂದರಲ್ಲಿ ತುಂಗೆಯ ನೀರಿನ ಸೌಕರ್ಯವಿದೆ. ತುಂಗಾ ನದಿಗೆ ಸೋಪಾನಗಳಿದ್ದು ಅಲ್ಲಿಗೆ ಹೋದರೆ ಸ್ವಲ್ಪ ವಿರಮಿಸೋಣ ಎನ್ನಿಸುತ್ತದೆ, ಸುಂದರ ಪ್ರಕೃತಿಯಲ್ಲಿ ನಮ್ಮನ್ನೆ ನಾವು ಮರೆಯುತ್ತೇವೆ, ಸುತ್ತಲಿನ ಪರಿಸರ ಇಳೆಗೆ ಹಸಿರಿನ ಚಾದರವನ್ನು ಹೊದಿಸಿದ ಹಾಗೆ ಅತ್ಯಂತ ಸುಂದರವಾಗಿದೆ.

ಹೊಳೆಯ ಮಧ್ಯದಲ್ಲಿ ಕೂಡಿಟ್ಟ ಹಾಗಿರುವ ಸಾಲಂಕೃತ ಬಂಡೆಗಳು ಬಹು ಸುಂದರವಾಗಿವೆ, ಕಾರ್ತಿಕ ಮಾಸದಲ್ಲಿ ಈ ಬಂಡೆಗಳ ಮೇಲೆ ಹಣತೆಗಳನ್ನು ಹಚ್ಚಿಟ್ಟರೆ ನಕ್ಷತ ಲೋಕವೇ ಇಳೆಗೆ ಬಂದಂತೆ ಕಾಣುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಳಗಳು ಶ್ರದ್ದಾ ಭಕ್ತಿಗಳ ಕೇಂದ್ರಗಳು, ಸಮಾಜ ಎಷ್ಟೇ ವೇಗದಲ್ಲಿದ್ದರೂ ಇವುಗಳು ಆಸ್ತಿಕರ ನಂಬಿಕೆಯ ಕೇಂದ್ರಗಳಾಗಿವೆ.

ಒಮ್ಮೆ ಸಂಸಾರ ಸಮೇತ ಇಲ್ಲಿಗೆ ಭೇಟಿ ಕೊಡಿ ಸ್ಹೇಹಿತರೇ.

*ಸತೀಶ್ ಚಂದ್ರ ಅಡಿಗ

ಅರಳಸುರಳಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.