ಕೇರಳ ದೇಗುಲಕ್ಕೆ ಇ-ಆನೆ; ಇರಿಂಜಾಲಪ್ಪಿಲಿ ಶ್ರೀಕೃಷ್ಣ ದೇಗುಲದಲ್ಲಿ ಹೊಸ ಪ್ರಯೋಗ
ಭಕ್ತರ ದೇಣಿಗೆಯಿಂದ ನಿರ್ಮಾಣ; 26ರಂದು ಅನಾವರಣ
Team Udayavani, Feb 21, 2023, 7:25 AM IST
ತಿರುವನಂತಪುರ : ದೇವಸ್ಥಾನಗಳ ಸಮಾರಂಭಗಳಲ್ಲಿ ಆನೆಗಳ ಉಪಸ್ಥಿತಿ ಸರ್ವೇಸಾಮಾನ್ಯ. ಅದೇ ರೀತಿ ಅವುಗಳ ಖರೀದಿ, ನಿರ್ವಹಣೆಗೆ ಆಗುವ ವೆಚ್ಚವೂ ಅಪಾರ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳದ ದೇಗುಲವೊಂದು ಹೊಸ ಕಾರ್ಯಕ್ಕೆ ಕೈ ಹಾಕಿದ್ದು, ಇ-ಆನೆಯನ್ನು ಖರೀದಿಸಿದೆ.
ತ್ರಿಶ್ಶೂರ್ ಜಿಲ್ಲೆಯ ಇರಿಂಜಾಲಕ್ಕುಡ ಸಮೀಪವಿರುವ ಇರಿಂಜಾಡಪ್ಪಿಲ್ಲಿ ಶ್ರೀ ಕೃಷ್ಣ ದೇವಸ್ಥಾನ, ಇಲೆಕ್ಟ್ರಾನಿಕ್ ಆನೆಯನ್ನು ಖರೀದಿಸಿದೆ. 11 ಅಡಿ ಎತ್ತರವಿರುವ ಈ ಆನೆಯನ್ನು ಉಕ್ಕಿನಿಂದ ತಯಾರಿಸಲಾಗಿದ್ದು, ಮೇಲೆ ರಬ್ಬರ್ ಚರ್ಮದ ಹೊದಿಕೆಯನ್ನು ಹೊಂದಿದೆ. ಅಲ್ಲದೇ, ಥೇಟ್ ನಿಜವಾದ ಆನೆಯಂತೆ ಇ-ಆನೆ ತಲೆ ಆಡಿಸಲು ಮೋಟಾರ್ಗಳನ್ನು ಅಳವಡಿಸಲಾಗಿದೆ. 4 ಮಂದಿಯನ್ನು ಹೊತ್ತು ಆನೆ ಸಾಗಬಲ್ಲದ್ದಾಗಿದ್ದು, ಕಾಲಿಗೆ ಚಕ್ರಗಳನ್ನು ಅಳವಡಿಸಲಾಗಿದೆ.
800 ಕೆಜಿ ತೂಕವಿರುವ ಆನೆಯನ್ನು ಭಕ್ತರು ನೀಡಿದ ದೇಣಿಗೆ ಹಾಗೂ ಪ್ರಾಣಿ ಕಲ್ಯಾಣ ಸಂಘಗಳು ನೀಡಿದ ಸಹಾಯಧನದಿಂದ ಅಭಿವೃದ್ಧಿಪಡಿಸಲಾಗಿದ್ದು, 5 ಲಕ್ಷ ರೂ.ವೆಚ್ಚವಾಗಿದೆ. ಫೆ. 26ರಂದು ದೇಗುಲದಲ್ಲಿ ಇ-ಆನೆಯ ಅನಾವರಣವಾಗಲಿದೆ. ಅದಕ್ಕೆ ಆನೆಗೆ ಇರಿಂಜಾಡಪ್ಪಿಲ್ಲಿ ರಾಮನ್ ಎಂದು ಹೆಸರನ್ನಿಡಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ