ಐಎಸ್‌ಕೆಪಿ ಸೇರಲು ಸಿದ್ಧನಿದ್ದ ಬೆಂಗಳೂರಿನ ಯುವಕ

ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದವನ ಬಂಧನ ; ಜಾಲತಾಣಗಳ ಮೂಲಕ ಉಗ್ರರ ಸಂಪರ್ಕ

Team Udayavani, Aug 6, 2021, 2:07 PM IST

isis

ಸಾಂದರ್ಭಿಕ ಚಿತ್ರ.

ಬೆಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಆ್ಯಪ್‌ ಗಳು ಮೂಲಕ ಐಸಿಸ್‌ ಸಂಘಟನೆಯ ಸದಸ್ಯರನ್ನು ಸಂಪರ್ಕಿಸಿ, ಐಎಸ್‌-ಕೆಪಿ ಸಂಘಟನೆ ಸೇರಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಾಗಿದ್ದ ಬೆಂಗಳೂರಿನ ಮತ್ತೊಬ್ಬ ಶಂಕಿತನನ್ನು ಎನ್‌ಐಎ ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಮಾದೇಶ್‌ ಪೆರುಮಾಳ್‌(26) ಬಂಧಿತ. ವೈಟ್‌ ಫೀಲ್ಡ್‌ನ ನಿವಾಸಿ ಮಾದೇಶ್‌ ಪೆರುಮಾಳ್‌ ಪಿಯುಸಿ ಅನುತ್ತೀರ್ಣವಾಗಿದ್ದಾನೆ. ಆದರೆ, ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಮಾದೇಶ್‌, ಐಸಿಸ್‌ ಬಗ್ಗೆ ಒಲವು ಹೊಂದಿದ್ದ. ಈ ನಡುವೆ ಟೆಲಿಗ್ರಾಂ, ಸಿಗ್ನಲ್‌ ಮತ್ತು ಇತರೆ ಆ್ಯಪ್‌ ಗಳು ಹಾಗೂ ಯುಟ್ಯೂಬ್‌ ಚಾನೆಲ್‌ಗ‌ಳ ಮೂಲಕ ದೇಶ-ವಿದೇಶದಲ್ಲಿರುವ ಐಸಿಸ್‌ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದ. ಈ ವೇಳೆ ಅವಕಾಶ ಕೊಟ್ಟರೆ, ದೇಶ-ವಿದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಐಎಸ್‌ಕೆಪಿ ಸೇರಲು ಸಿದ್ಧತೆ: ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆಯ ಸದಸ್ಯರನ್ನು ಸಂಪರ್ಕಿಸಿದ್ದ ಮಾದೇಶ್‌, ಅಫ್ಘಾನಿಸ್ತಾನದ ಉಗ್ರಸಂಘಟನೆ ಇಸ್ಲಾಮಿಕ್‌ ಸ್ಟೇಟ್‌-ಕೊರಸನ್‌ ಪ್ರಿವೆಟ್‌ (ಐಎಸ್‌-ಕೆಪಿ) ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದ.
ತಮ್ಮ ಸಂಘಟನೆ ಸಿದ್ಧಾಂತಗಳು ತನಗೆ ಇಷ್ಟವಾಗಿದೆ.

ಹೀಗಾಗಿ ಸಂಘಟನೆಯಲ್ಲಿ ತನ್ನನ್ನು ಸದಸ್ಯನ್ನಾಗಿಮಾಡಿಕೊಳ್ಳಿ ಎಂದು ಕೋರಿದ್ದ. ಆದರೆ, ಹಿಂದೂ ಆಗಿದ್ದರೂ ಯಾವ ಕಾರಣಕ್ಕೆ ಈತ ಇಸ್ಲಾಂ ಬಗ್ಗೆ ಒಲವು ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತಪಡಿಸಿದ್ದ ಸಂಘಟನೆ ಸದಸ್ಯರು, ಹಲವು ಬಾರಿ ಈತ ಒತ್ತಾಯಿಸಿದ್ದರೂ ರಾಜ್ಯ ಮತ್ತು ದೇಶದಲ್ಲಿರುವ ಸಂಘಟನೆ ಸದಸ್ಯರ ನೇರ ಭೇಟಿಗೆ ನಿರಾಕರಿಸಿದ್ದರು. ಅನಂತರ ಈತನೇ ಸಾಮಾಜಿಕ ಜಾಲತಾಣ ಮೂಲಕ ಸಂಘಟನೆ ಸದಸ್ಯರಿಗೆ ತಾನು ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಿದ್ದೇನೆ. ಯಾವುದೇ ಕೆಲಸ ಕೊಟ್ಟರು ಮಾಡುತ್ತೇನೆ ಎಂದು ಭರವಸೆ ನೀಡಿದ್ದ
ಎಂದು ಮೂಲಗಳು ತಿಳಿಸಿವೆ.

ಹಣ ಕೊಟ್ಟಿರಲಿಲ್ಲ!: ಐಎಸ್‌-ಕೆಪಿ ಸಂಘಟನೆ ಬಗ್ಗೆ ಒಲವು ಹೊಂದಿದ್ದ ಮಾದೇಶ್‌, ತಾನು ವಿದೇಶಕ್ಕೆ ಹೋಗಿ ಹಣ ಸಂಪಾದಿಸುತ್ತೇನೆ. ತೆರಳಲು ಹಣ ನೀಡಿ ಎಂದು ತಂದೆ ಬಳಿ ಕೇಳಿದ್ದ. ಆದರೆ, ಅವರು ಹಣ ಕೊಟ್ಟಿರಲಿಲ್ಲ. ಅದರಿಂದ ಈತ ಅಸಮಾಧಾನಗೊಂಡಿದ್ದ. ಮತ್ತೊಂದೆಡೆ ಉಗ್ರ ಸಂಘಟನೆ ಸದಸ್ಯರ ಬಳಿಯೂ ಅಫ್ಘಾನಿಸ್ತಾನ ಅಥವಾ ಸಿರಿಯಾಗೆ ಬರಲು ತನಗೆ ಆರ್ಥಿಕ ಸಹಾಯ ಮಾಡಿ ಎಂದು ಕೋರಿದ್ದ. ಆದರೆ, ಶಂಕಿತರು ಸಹಾಯ ಮಾಡದೆ ಅಲ್ಲಿಯೇ ಟಾಸ್ಕ್ ಕೊಡುವುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

3 ವರ್ಷಗಳಿಂದ ಉಗ್ರರಜತೆ ಮಾದೇಶ ಸಂಪರ್ಕ
ಕಳೆದ ಮೂರು ವರ್ಷಗಳಿಂದ ಸಂಘಟನೆ ಸದಸ್ಯರಜತೆಆನ್‌ಲೈನ್‌ ಮೂಲಕ ಸಂಪರ್ಕದಲ್ಲಿರುವ ಮಾದೇಶ್‌,ಈ ಮಧ್ಯೆ ಆಫ್ಘಾನಿಸ್ತಾನ-ಸಿರಿಯಾಗೆಬರಲು ಅವಕಾಶ ನೀಡದಿದ್ದರೆ, ಭಾರತದ ಯಾವುದೇಭಾಗದಲ್ಲಿವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿದ್ದೇನೆ.ಈ ಮೂಲಕ
ತನ್ನ ಸಾಮರ್ಥ್ಯ ತೋರಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟನೆ ಸದಸ್ಯರಬಳಿ ಹೇಳಿಕೊಂಡಿದ್ದ.ಈ ಮಾಹಿತಿ ಸಂಗ್ರಹಿಸಿದ ದೆಹಲಿಎನ್‌ಐಎ ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ನಡೆಸಿಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.