ಕೇಂದ್ರದ ಯೋಜನೆಗಳು ಗಾಂಧಿ ಚಿಂತನೆಯ ಹೊಸ ಸ್ವರೂಪ
ಗಾಂಧಿ ಪುಣ್ಯ ತಿಥಿಯ ದಿನದಂದು ಕೇಂದ್ರ ಸಚಿವ ಅಮಿತ್ ಶಾ ಅಭಿಮತ
Team Udayavani, Jan 30, 2022, 10:45 PM IST
ಅಹ್ಮದಾಬಾದ್: “ಮಹಾತ್ಮ ಗಾಂಧಿಯವರ ಸ್ವದೇಶಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್ ಚಿಂತನೆಗಳ ಮೂಲಕ ಹೊಸ ಅರ್ಥ ನೀಡಿದ್ದಾರೆ..” ಹೀಗೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಅವರು ಅಹ್ಮದಾಬಾದ್ನ ಸಬರ್ಮತಿ ನದೀ ದಂಡೆಯ ಬಳಿ ಬೃಹತ್ ಗೋಡೆ ಚಿತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಪುಣ್ಯತಿಥಿಯ ಹಿನ್ನೆಲೆಯಲ್ಲಿ 100 ಚದರ ಮೀ. ಅಗಲದ ಅಲ್ಯುಮಿನಿಯಮ್ ಫಲಕದಲ್ಲಿ 2,975 ಮಣ್ಣಿನ ಪಾತ್ರೆಗಳನ್ನು ಬಳಸಿ ಭಿತ್ತಿಚಿತ್ರ ರಚಿಸಲಾಗಿದೆ. ಇದಕ್ಕೆ ದೇಶಾದ್ಯಂತ 75 ಕುಶಲಕರ್ಮಿಗಳು ನೆರವಾಗಿದ್ದಾರೆ.
ಈ ಗೋಡೆಚಿತ್ರದ ಉದ್ಘಾಟನೆ ವೇಳೆ ಮಾತನಾಡಿದ ಅಮಿತ್ ಶಾ, ಗಾಂಧಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಹೇಗೆ ಮರುನಿರ್ಮಾಣ ಮಾಡಬೇಕು ಎಂಬುದಕ್ಕೆ ಹಲವು ಮಾರ್ಗಗಳನ್ನೂ ಹಾಕಿಕೊಟ್ಟರು. ಸ್ವದೇಶಿ, ಸತ್ಯಾಗ್ರಹ, ಸ್ವಭಾಷೆ, ಸಾಧನ ಶುದ್ಧಿ, ಅಪರಿಗ್ರಹ (ವಸ್ತುಗಳನ್ನು ಸಂಗ್ರಹಿಸದಿರುವುದು), ಪ್ರಾರ್ಥನೆ, ಉಪವಾಸ, ಸರಳತೆಗಳೆಲ್ಲ ಅವರು ತೋರಿದ ಮಾರ್ಗಗಳು.
ವಿಪರ್ಯಾಸವೆಂದರೆ ಇವನ್ನೆಲ್ಲ ಮರೆಯಲಾಗಿದೆ. ಮೋದಿ ಪ್ರಧಾನಿಯಾದ ನಂತರ ಇವಕ್ಕೆಲ್ಲ ಹೊಸಜೀವವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…