70 ವರ್ಷ ದಾಟಿದ ಮರಗಳಿಗೂ ಪಿಂಚಣಿ ಘೋಷಣೆ !
Team Udayavani, Oct 8, 2023, 12:51 AM IST
ಚಂಡೀಗಢ: ಹರಿಯಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲ್ಲು ಗಾವಲು ಸುಡುವ ಪ್ರಕರಣ ಹೆಚ್ಚುತ್ತಿದ್ದು, ಇದರಿಂದ ವಾಯು ಮಾಲಿನ್ಯವೂ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮರಗಳನ್ನು ರಕ್ಷಿಸುವ ಮೂಲಕ ಸಮಸ್ಯೆ ಬಗೆಹರಿಸಲು ಸರಕಾರ ಮುಂ ದಾಗಿದೆ. ಇದಕ್ಕಾಗಿ 70 ವರ್ಷ ಮೇಲ್ಪಟ್ಟ ಮರಗಳನ್ನು ಪೋಷಿ ಸುವವರಿಗೆ 2,750 ರೂ.ಗಳ ಪಿಂಚಣಿ ಯನ್ನು ಘೋಷಿಸಿದೆ.
ಹೌದು, ಪ್ರಾಣವಾಯು ದೇವತಾ ಪಿಂಚಣಿ ಯೋಜನೆಯನ್ನು ನವೆಂ ಬರ್ 1ರಿಂದ ಆರಂಭಿಸುವುದಾಗಿ ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್ಪಾಲ್ ಗುರ್ಜರ್ ತಿಳಿಸಿದ್ದಾರೆ. ರಾಜ್ಯದಲ್ಲಿ 70 ವರ್ಷ ದಾಟಿದ 4 ಸಾವಿರ ಮರಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂಥ ಮರಗಳನ್ನು ಪೋಷಿಸುವವರಿಗೆ ವಾರ್ಷಿಕವಾಗಿ 2,750 ರೂ. ಪಿಂಚಣಿ ನೀಡಲಾಗುತ್ತದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ಉಪಕ್ರಮ ಆರಂಭಿಸಲಾಗುತ್ತಿದ್ದು, ದೇಶದಲ್ಲಿ ಇಂಥ ಪಿಂಚಣಿ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯವೆಂಬ ಖ್ಯಾತಿಯೂ ಹರಿಯಾಣಕ್ಕೆ ಸೇರಲಿದೆ. ಯಾವುದೇ ನಿವಾಸಿಗಳ ಮನೆಯ ವ್ಯಾಪ್ತಿಯಲ್ಲಿ 70 ವರ್ಷ ದಾಟಿದ ಮರವಿದ್ದರೆ ಅದರ ಪಿಂಚಣಿ ಅವರಿಗೆ, ಹೊಲದಲ್ಲಿದ್ದರೆ ಆ ಹೊಲದ ರೈತರನಿಗೆ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದ್ದರೆ ಅರಣ್ಯ ಇಲಾಖೆಯೂ ಫಲಾನುಭವಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ