ದಶಕದ ಹಿಂದೆ ಭೂ ಮಾಫಿಯಾದಿಂದ ಒತ್ತುವರಿಯಾಗಿದ್ದ ಗೌಡನಕೆರೆಯ 5.17 ಎಕರೆ ಜಮೀನು ತೆರವು
Team Udayavani, Sep 17, 2020, 1:38 PM IST
ಕೆಜಿಎಫ್: ನಗರದ ಗೌತಮನಗರದ ಗೌಡನಕೆರೆಯಲ್ಲಿ ಒತ್ತುವರಿಯಾಗಿದ್ದ 5.17 ಎಕರೆ ಜಮೀನನ್ನು ಬುಧವಾರ ಜಿಪಂ, ಕಂದಾಯ, ನಗರಸಭೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದರು.
11.17 ಎಕರೆ ವಿಸ್ತೀರ್ಣವುಳ್ಳ ಗೌಡನಕೆರೆ ಪುರಾತನವಾಗಿದ್ದು, ಕೆರೆಯ ಒಂದು ಬದಿಯಲ್ಲಿ ಕರಗ ಮಹೋತ್ಸವ ಮತ್ತು ಶಕ್ತಿ ದೇವತೆಗಳ ಆರಾಧನೆಗೆ ಸ್ಥಳವನ್ನಾಗಿ ಬಳಸಲಾಗುತ್ತಿತ್ತು. ಕೆಲವು ಭೂ ಮಾಫಿಯಾಗಳು ದಶಕದ ಹಿಂದೆಕೆರೆ ಒತ್ತುವರಿ ಮಾಡಿಕೊಂಡು ಕೆರೆಯ ಸ್ವರೂಪ ಬದಲಾಯಿಸಿದ್ದರು.
ಅಧಿಕಾರಿಗಳು ಪೊಲೀಸರ ಸಹಕಾರದಿಂದ ಒತ್ತುವರಿಯಾಗಿದ್ದ5.17 ಎಕರೆ ಜಮೀನನ್ನು ಮರಳಿ ವಶಕ್ಕೆ ಪಡೆದುಕೊಂಡರು. ಅಕ್ರಮವಾಗಿ ನಿರ್ಮಾಣಮಾಡಿದ್ದ ಎರಡು ರಸ್ತೆಗಳನ್ನು ಹಳ್ಳ ತೋಡಿ ಮುಚ್ಚಿದರು.
ತಹಶೀಲ್ದಾರ್ ಕೆ.ರಮೇಶ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಷಾದ್ರಿ, ಕೆಡಿಎ ಆಯುಕ್ತ ಜಹೀರ್ ಅಬ್ಟಾಸ್, ಜಿಪಂ ಸಹಾಯಕ ಎಂಜಿನಿಯರ್ಗಳಾದ ಶ್ರೀನಿವಾಸ್, ರವಿಚಂದ್ರನ್, ಪ್ರದೀಪ್, ಸರ್ಕಲ್ ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್, ಸಬ್ ಇನ್ಸ್ಪೆಕ್ಟರ್ ಆನಂದಬಾಬು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
MUST WATCH
ಹೊಸ ಸೇರ್ಪಡೆ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!