BJP ನಾಯಕ ರಂಜಿತ್ ಹತ್ಯೆ: 15 ಪಿಎಫ್ಐ ಸದಸ್ಯರು ದೋಷಿಗಳು
Team Udayavani, Jan 21, 2024, 12:10 AM IST
ಅಲಪ್ಪುಳ: 2021ರ ಡಿಸೆಂಬರ್ನಲ್ಲಿ ನಡೆದ ಬಿಜೆಪಿ ಒಬಿಸಿ ಘಟಕದ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆಗೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 15 ಕಾರ್ಯಕರ್ತರನ್ನು ಕೇರಳದ ಕೋರ್ಟ್ ಶನಿವಾರ ದೋಷಿಗಳೆಂದು ತೀರ್ಪು ನೀಡಿದೆ. ಮಾವೆಲಿಕ್ಕಾರಾದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದ್ದು, ಸೋಮವಾರ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸಲಿದೆ
. ಅಲಪ್ಪುಳದಲ್ಲಿ 2021ರ ಡಿ.18ರಂದು ಎಸ್ಡಿಪಿಐ ನಾಯಕ ಕೆ.ಎಸ್.ಶಾನ್ರನ್ನು ಗ್ಯಾಂಗ್ವೊಂದು ಹತ್ಯೆಗೈದಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ರಂಜಿತ್ ಮನೆಗೆ ನುಗ್ಗಿದ್ದ ಪಿಎಫ್ಐ, ಎಸ್ಡಿಪಿಐ ಗ್ಯಾಂಗ್ ಕುಟುಂಬದೆದುರೇ ಕೊಲೆಗೈದಿತ್ತು.