ಕಾಂಬೋಡಿಯ: ಕೆಲಸ ಕಳೆದುಕೊಂಡ ಕಾರ್ಮಿಕರು
Team Udayavani, Jun 19, 2020, 12:54 PM IST
ಕಾಂಬೋಡಿಯ: ಜವಳಿ ಉದ್ಯಮಕ್ಕೆ ಪ್ರಸಿದ್ಧಿ ಪಡೆದ ಕಾಂಬೋಡಿಯಾದಲ್ಲಿ ಕೋವಿಡ್ ವೈರಸ್ನಿಂದಾಗಿ ಹಲವಾರು ಉಡುಪು ತಯಾರಿಸುವ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಕಾಂಬೋಡಿಯದ ನೊಮ್ ಪೆನ್ನ ಹೊರವಲಯದಲ್ಲಿರುವ ಜವಳಿ ಉದ್ಯಮಗಳಲ್ಲಿ ನೂರಾರು ಕಾರ್ಮಿಕರನ್ನು ಶಿಪ್ಟ್ಗಳಲ್ಲಿ ದುಡಿಸಲಾಗುತ್ತಿದೆ. ಇನ್ನು ಹಲವಾರು ಮಂದಿಯನ್ನು ಉದ್ಯೋಗದಿಂದ ಕೈಬಿಡಲಾಗಿದೆ.
ಕೋವಿಡ್ ವೈರಸ್ ತಡೆಯುವ ಕ್ರಮವಾಗಿ ಹೇರಲಾದ ನಿರ್ಬಂಧಗಳ ಹಿನ್ನೆಲೆಯಲ್ಲಿ ವ್ಯಾಪಾರ – ವ್ಯವಹಾರ ನಡೆಯದೆ ಹಲವು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕೆಲವು ಕಾರ್ಖಾನೆಗಳು ಮುಚ್ಚಲ್ಪಟಿವೆ. ಇದರಿಂದ ಅನೇಕ ಕಾರ್ಮಿಕರು ಉದ್ಯೋಗ ನಷ್ಟ ಹೊಂದುವಂತಾಗಿದೆ.
ಕಾಂಬೋಡಿಯಾದ ಜವಳಿ ಉದ್ಯಮವು ಸುಮಾರು 8,50,000 ಉದ್ಯೋಗಗಿಗಳನ್ನು ಹೊಂದಿದ್ದು, ದೇಶದ ಆರ್ಥಿಕತೆಗೆ 7 ದಶಲಕ್ಷ ಆದಾಯ ಒದಗಿಸುತ್ತಿತ್ತು. ಕೋವಿಡ್ -19ನಿಂದಾಗಿ ಪ್ರಮುಖ ಪಾಶ್ಚಿಮಾತ್ಯ ಚಿಲ್ಲರೆ ವ್ಯಾಪಾರಿಗಳು ತಮ್ಮ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಇನ್ನು ಕೆಲವರು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವಂತೆ ಕೋರಿದ್ದಾರೆ. ಇದರಿಂದ ಇಲ್ಲಿನ 600 ಉಡುಪು ಕಾರ್ಖಾನೆಗಳಲ್ಲಿ ಆರ್ಥಿಕ ನಷ್ಟ ಸಂಭವಿಸಿದ ಮೂರನೇ ಒಂದು ಭಾಗದಷ್ಟು ಮುಚ್ಚಲ್ಪಟ್ಟಿವೆ. ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರು, 20 ವರ್ಷ ವಯಸ್ಸಿನೊಳಗಿನವರು ಅನೇಕರಿದ್ದು, ಅವರೆಲ್ಲ ದಿನ ನಿತ್ಯದ ಆಹಾರಕ್ಕಾಗಿ ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್