ಚೆಲ್ಸಿಯಾ ಪುಟ್ಟ ನಗರದಲ್ಲಿ ಸೋಂಕಿತರ ಪ್ರತ್ಯೇಕಿಸುವ ಸವಾಲು


Team Udayavani, Apr 27, 2020, 2:50 PM IST

ಚೆಲ್ಸಿಯಾ ಪುಟ್ಟ ನಗರದಲ್ಲಿ ಸೋಂಕಿತರ ಪ್ರತ್ಯೇಕಿಸುವ ಸವಾಲು

ಚೆಲ್ಸಿಯಾ: ಇಂಗ್ಲೆಂಡ್‌ನ‌ ಮ್ಯಾಸಚೂಸೆಟ್ಸ್‌ನ ಒಂದು ಪುಟ್ಟ ನಗರ ಚೆಲ್ಸಿಯಾ. ದಕ್ಷಿಣಕ್ಕೆ ಥೇಮ್ಸ… ನದಿಯಿಂದ ಸುತ್ತುವರಿದಿದೆ. ನದಿಯ ಮುಂಭಾಗವು ಚೆಲ್ಸಿಯಾ ಸೇತುವೆಯಿಂದ ಚೆಲ್ಸಿಯಾ ಒಡ್ಡು, ಚೆಯೆನ್‌ ವಾಕ್‌, ಲಾಟ್ಸ್‌ ರಸ್ತೆ ಮತ್ತು ಚೆಲ್ಸಿಯಾ ಬಂದರಿನ ಉದ್ದಕ್ಕೂ ಸಾಗುತ್ತದೆ. ಜನನಿಬಿಡ ನಗರವಾದ ಇಲ್ಲಿ ವಲಸಿಗರೇ ಹೆಚ್ಚಿದ್ದು, ಅಮೆರಿದಲ್ಲಿನ ನಿವಾಸಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ವಾಸಿಸುವ ಶೇ. 6.53ರಷ್ಟು ಮಂದಿ ಜನಿಸಿದ್ದು ಅಮೆರಿಕದಲ್ಲಿ. ಅವರ ಕುಟುಂಬ ಇಲ್ಲಿ ನೆಲೆಸಿದೆ. ಈಗ ಕೋವಿಡ್‌ 19ನಿಂದ ಜರ್ಝರಿತವಾಗಿದೆ.

ಈ ನಗರವನ್ನು ವೈರಸ್‌ನಿಂದ ರಕ್ಷಿಸಲು ಅಧಿಕಾರಿಗಳು ತೀವ್ರ ಶ್ರಮಿಸುತ್ತಿದ್ದಾರೆ. ಆದರೆ ಸಣ್ಣದೊಂದು ಆಶಾಕಿರಣ ಬಿಟ್ಟರೆ ಬೇರ್ಯಾವ ಸಾಧ್ಯತೆಯೂ ತೋರುತ್ತಿಲ್ಲ. ಇಲ್ಲಿನ ಹೌಸಿಂಗ್‌ ಸೊಸೈಟಿಯೊಂದು ಅಮೆರಿಕದ ವಲಸಿಗರಿಂದಲೇ ತುಂಬಿದ್ದು, ಅಲ್ಲಿ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ ಅವರನ್ನು ಪ್ರತ್ಯೇಕಿಸಲು ಸಾಧ್ಯವಾಗದೆ ಇಡೀ ನಗರ ಭೀತಿಯಿಂದ ಇದೆ. ದೊಡ್ಡ ಸಮಸ್ಯೆಯಾಗಿ ತಲೆದೋರಿರುವುದೂ ಇದೇ ಎಂದು ವರದಿ ಮಾಡಿದೆ ದಿ ನ್ಯೂಯಾರ್ಕ್‌ ಟೈಮ್ಸ್‌.

ಮ್ಯಾಸಚೂಸೆಟ್ಸ್‌ನಲ್ಲಿ ಸೋಂಕಿನ ಪ್ರಮಾಣ ಕಳೆದ ವಾರ ಒಂದು ಲಕ್ಷಕ್ಕೆ 3,841ಕ್ಕೆ ತಲುಪಿತ್ತು. ಇದು ರಾಜ್ಯವ್ಯಾಪಿ ಸರಾಸರಿಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದ್ದು, ವೈರಸ್‌ನ ಭೀತಿ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಚೆಲ್ಸಿಯಾ ಎಂಬ ಎರಡು ಚದರ ಮೈಲಿಗಿಂತಲೂ ಕಡಿಮೆ ಪ್ರದೇಶವಿರುವ ಪುಟ್ಟ ನಗರದಲ್ಲಿ 40,000 ಜನರಿದ್ದು, ಇಲ್ಲಿ ಸುಮಾರು 1,447 ಸೋಂಕಿತರಿರುವುದು ದೃಢಪಟ್ಟಿದೆ. ಈ ಜನದಟ್ಟಣೆಯೇ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಲು ತೀರಾ ಕಷ್ಟವಾಗಿದೆ. ಯಾಕೆಂದರೆ ಒತ್ತೂತ್ತಾಗಿ ನಿವಾಸಿಗಳು ಇರಬೇಕಾದ ಅನಿವಾರ್ಯತೆ ಉದ್ಭವಿಸಿದೆ.

ಇಲ್ಲಿನ ವಸತಿ ಪ್ರಾಧಿಕಾರದ ನಿರ್ದೇಶಕ ಪಾಲ್‌ ನೋವಿಕಿ ಎಂಬವರು ಜನರನ್ನು ಸೋಂಕಿನಿಂದ ರಕ್ಷಿಸಲು ಹಾಗೂ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತೀವ್ರ ಹೆಣಗಾಡುತ್ತಿದ್ದಾರೆ. ಕೆಲವು ಸೋಂಕಿತರು ಯಾವ ಮನೆಯಲ್ಲಿÉದ್ದಾರೆ, ಅವರನ್ನು ಹೇಗೆ ಗುರುತಿಸುವುದು ಹಾಗೂ ಪ್ರತ್ಯೇಕಿಸುವುದು ಎಂದೇ ತಿಳಿಯದ ಸ್ಥಿತಿ ನೆಲೆಸಿದೆಯಂತೆ.

ಅಪಾರ್ಟ್‌ಮೆಂಟ್‌ನಲ್ಲಿರುವ ಕೆಲವರಿಗೆ ಸೋಂಕಾಗಿದ್ದು, ಅವರು ಯಾರು ಎಂಬುದನ್ನು ತಿಳಿಯಲಾಗದೇ ಆಡಳಿತವೂ ಕಂಗಾಲಾಗಿದೆ. ಯಾರನ್ನು ಎಲ್ಲಿ ಪ್ರತ್ಯೇಕಿಸುವುದು ಎಂಬುದೇ ತಿಳಿಯದೇ ಗೊಂದಲಕ್ಕೀಡಾಗಿದೆ.

ಇಲ್ಲಿ ಅಮೆರಿಕದವರು ಹೆಚ್ಚಿದ್ದು, ಅವರ ಮೂಲಕವೇ ವೈರಸ್‌ ಹರಡುತ್ತಿದೆ ಎಂಬ ಆರೋಪಕ್ಕೂ ಗುರಿಯಾಗಬೇಕಿದೆ. ಆದರೆ ಇಲ್ಲಿ ವೈದ್ಯಕೀಯ ಗೌಪ್ಯತೆಯನ್ನು ಕಾಪಾಡುವುದರಿಂದ ಸೋಂಕಿತರನ್ನು ಪತ್ತೆ ಮಾಡುವುದು ಬಾವಿಯಿಂದ ಸಣ್ಣ ಕಡ್ಡಿಯನ್ನು ಪ್ರತ್ಯೇಕಿಸಿದಂತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದ್ದರಿಂದ ಅಮೆರಿಕವು ಅನಾರೋಗ್ಯ ಪೀಡಿತರನ್ನು ಕುಟುಂಬದಿಂದ ಸ್ವಯಂಪ್ರೇರಣೆಯಿಂದ ಬೇರ್ಪಡಿಸಲು ಸಹಕರಿಸಬೇಕು ಎಂಬ ಆಗ್ರಹವೂ ಬಲವಾಗಿ ಕೇಳಿಬರುತ್ತಿದೆ.

ಹೀಗೆ ಸೋಂಕು ಕಂಡು ಬಂದವರಿಗೆ ನಗರದ ಅಧಿಕಾರಿಗಳು ಒಂದು ಸಲಹೆ ನೀಡಿದ್ದರು. ಕುಟುಂಬದವರು ಹಾಗೂ ಆಸುಪಾಸಿನವರಿಗೆ ಸೋಂಕು ಹರಡುವುದನ್ನು ತಡೆಯಲು ಸೋಂಕಿತರು ರವೇರಾದಲ್ಲಿರುವ 157 ಕೊಠಡಿಗಳಿಗೆ ತೆರಳುವಂತೆ ಕೇಳಿಕೊಂಡರು. ಆದರೆ 10 ದಿನಗಳ ಅವಧಿಯಲ್ಲಿ ಚೆಲ್ಸಿಯಾದ ಕೇವಲ 14 ಜನರು ಮಾತ್ರ ಆ ಹೊಟೇಲಿಗೆ ಸ್ಥಳಾಂತರಗೊಂಡಿದ್ದಾರಂತೆ. ಸೋಂಕಿನ ಅಪಾಯದ ಬಗ್ಗೆ ತಿಳಿದಿದ್ದರೂ ಹೆಚ್ಚಿನವರು ಮನೆಯಲ್ಲಿಯೇ ಇರುತ್ತಾರೆ ಎನ್ನುತ್ತದೆ ಸ್ಥಳೀಯ ಆಡಳಿತ. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವೇ ಆಗುತ್ತಿಲ್ಲ. ತಾನು ನಡೆಸುತ್ತಿರುವ ಹೊಟೇಲೊಂದರ ಕಾರ್ಮಿಕನೂ ಈ ಬಗ್ಗೆ ತನ್ನ ಮಾತನ್ನು ಕೇಳುತ್ತಿಲ್ಲ ಎನ್ನುತ್ತಾರೆ.

ಸ್ಥಳೀಯ ಆಡಳಿತದ ಮುಖ್ಯಸ್ಥರು. ಈಗಿನ ಹವಾಮಾನ ಕೂಡ ವೈರಸ್‌ ಹರಡಲು ಪೂರಕವಾಗಿದೆ ಎಂಬ ಆತಂಕ ಸ್ಥಳೀಯರದ್ದು.

ಸೋಂಕಿನ ಲಕ್ಷಣವಿಲ್ಲ
ಕಳೆದ ವಾರ ಮ್ಯಾಸಚೂಸೆಟ್ಸ್‌ನ ಜನರಲ್‌ ಆಸ್ಪತ್ರೆಯ ಸಂಶೋಧಕರು ಚೆಲ್ಸಿಯಾದ ಸುಮಾರು 200 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂವರಲ್ಲಿ ಒಬ್ಬರಿಗೆ ಸೋಂಕಿರುವುದು ತಿಳಿದು ಬಂದಿದೆ. ಅವರೆಲ್ಲರೂ ಆರೋಗ್ಯವಂತರಾಗಿಯೇ ಇದ್ದರು. ಆದರೆ ಅವರ್ಯಾರಿಗೂ ಸೋಂಕಿನ ಲಕ್ಷಣವೇ ಅನುಭವಕ್ಕೆ ಬಂದಿರಲಿಲ್ಲವಂತೆ! ಇವರು ತಮ್ಮ ಸುತ್ತಮುತ್ತಲಿನವರಿಗೆ ಸೋಂಕು ಹರಡಲಿದ್ದಾರೆ ಎಂದು ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಜಾನ್‌ ಐಫ್ರೆಟ್‌ ಹೇಳಿದ್ದು, ಇಲ್ಲಿ ಸೋಂಕು ನಿಯಂತ್ರಣ ದೊಡ್ಡ ಸವಾಲಿನ ಕೆಲಸ ಎಂದಿದ್ದಾರೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.