ಬಡ ಕುಟುಂಬಕ್ಕೆ ಉಚಿತವಾಗಿ ಶೌಚಾಲಯ ನಿರ್ಮಾಣ
ರೆಖ್ಯ: ಆದರ್ಶ ಮೆರೆದ ಗಾರೆ ಕೆಲಸಗಾರ
Team Udayavani, Jul 7, 2020, 6:36 AM IST
ಬೆಳ್ತಂಗಡಿ: ಶೌಚಾಲಯವಿಲ್ಲದ ಬಡ ಕುಟುಂಬವೊಂದಕ್ಕೆ ಉಚಿತವಾಗಿ ಶೌಚಾಲಯ ನಿರ್ಮಿಸಿ ಕೊಟ್ಟು ಗಾರೆ ಕೆಲಸಗಾರರೊಬ್ಬರು ಆದರ್ಶ ಮೆರೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೆಲೆಂಜಿಲೋಡಿ ಎಂಬ ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬವೊಂದು ಶೌಚಾಲಯವಿಲ್ಲದೆ ಸಂಕಷ್ಟದಲ್ಲಿತ್ತು. ಇದನ್ನು ಗಮನಿಸಿ ಪಂಚಾಯತ್ ಸದಸ್ಯರೊಬ್ಬರು ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಟ್ಟಿದ್ದರೂ ಗಾರೆ ಕೆಲಸದವರಿಗೆ ವೇತನ ನೀಡಲೂ ಸಾಧ್ಯವಾಗದೆ ಸಂಕಷ್ಟ ಉಂಟಾಗಿತ್ತು.
ವಿಷಯ ತಿಳಿದ ಅದೇ ಊರಿನ ನಾರಾಯಣ ಗೌಡ ಮತ್ತವರ ತಂಡ ಕೂಡಲೇ ಕಾರ್ಯಪ್ರವೃತ್ತವಾಗಿ ಶೌಚಾ ಲಯ ನಿರ್ಮಿಸಿಕೊಟ್ಟಿದೆ. ನಾರಾಯಣ ಗೌಡ ವೃತ್ತಿಯಲ್ಲಿ ಗಾರೆ ಕೆಲಸದವರು. ಬೆಳ್ತಂಗಡಿ ತಾಲೂಕು ವಿಪತ್ತು ನಿರ್ವಹಣ ಘಟಕದ ಸದಸ್ಯರೂ ಆಗಿದ್ದಾರೆ. ಇತ್ತೀಚೆಗಷ್ಟೆ ತರಬೇತಿ ಮುಗಿಸಿದ್ದರು. ಇದೀಗ ತನಗೆ ತಿಳಿದಿರುವ ಕೌಶಲದ ಮುಖಾಂತರ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಲೆಹೊರೆಯಲ್ಲಿ ಎರಡು ಕಿ.ಮೀ. ಕಚ್ಚಾ ವಸ್ತು ಸಾಗಣೆ!
ಶೌಚಾಲಯ ನಿರ್ಮಿಸಬೇಕಾಗಿದ್ದ ಮನೆ ಗ್ರಾಮಾಂತರ ಪ್ರದೇಶದಲ್ಲಿದ್ದು, ಯಾವುದೇ ವಾಹನ ಬರಲಾರದಷ್ಟು ದುರ್ಗಮ ಸ್ಥಳದಲ್ಲಿತ್ತು. ಹಾಗಾಗಿ ಎರಡು ಕಿಲೋ ಮೀಟರ್ ದೂರದಿಂದ ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲಿ ಸಾಗಿಸಬೇಕಾದ ಅನಿವಾರ್ಯವಿತ್ತು. ಅದು ವೆಚ್ಚದಾಯಕವಾದ್ದರಿಂದ ಬಡ ಕುಟುಂಬ ಇಲ್ಲಿಯವರೆಗೆ ಶೌಚಾಲಯ ನಿರ್ಮಿಸಲು ಹೋಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್