ವಿದೇಶಿ ನೆಲದಲ್ಲಿ ಕಲಿಕೆಯ ಆಸೆಗೆ ಕೋವಿಡ್‌ ಸೋಂಕಿನ ಕರಿನೆರಳು


Team Udayavani, Jun 11, 2020, 1:58 PM IST

ವಿದೇಶಿ ನೆಲದಲ್ಲಿ ಕಲಿಕೆಯ ಆಸೆಗೆ ಕೋವಿಡ್‌ ಸೋಂಕಿನ ಕರಿನೆರಳು

ಮಣಿಪಾಲ: ವಿದೇಶದಲ್ಲಿ ಕಲಿಯುವುದು ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಂದು ಕನಸು. ಇದನ್ನು ನನಸು ಮಾಡುವತ್ತ ಅವರು ಪ್ರಯತ್ನಿಸಿಯೂ ಇರುತ್ತಾರೆ. ಕೋರ್ಸ್‌ ವಿಚಾರ ತಿಳಿದುಕೊಂಡು ನಿರ್ದಿಷ್ಟ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿ, ಕಲಿಕೆಗೆ ಸಾಲ ಪಡೆದು ಎಲ್ಲವನ್ನೂ ಮಾಡುವಷ್ಟರಲ್ಲಿ ಕೋವಿಡ್‌ ಸೋಂಕಿನ ಮಹಾಮಾರಿ ಈ ಕನಸನ್ನೇ ಅಲುಗಿಸಿ ಬಿಟ್ಟಿದೆ. ಹೋಗುವುದು ಹೇಗೆ ಎಂಬ ಚಿಂತೆ ಮತ್ತು ಭವಿಷ್ಯ ಅತಂತ್ರವಾದರೆ ಎಂಬ ಆತಂಕವೂ ಕಾಡಿದೆ.

ಸದ್ಯದ ಪರಿಸ್ಥಿತಿ
ಸದ್ಯ ವಿದೇಶಗಳ ಎಲ್ಲ ಪ್ರಮುಖ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ದೈಹಿಕ ಹಾಜರಾತಿಯನ್ನು ಅಷ್ಟಾಗಿ ಬಯಸುತ್ತಿಲ್ಲ. ವಿವಿಧ ವಿಶ್ವವಿದ್ಯಾಲಯಗಳು ಕೋವಿಡ್‌ ವಿಚಾರದಲ್ಲಿ ವಿವಿಧ ನಿಯಮಗಳನ್ನು ಹೊಂದಿವೆ. ಆದರೆ ಹೆಚ್ಚಿನವುಗಳು ಆನ್‌ಲೈನ್‌ ತರಗತಿಗಳನ್ನು ನೆಚ್ಚಿಕೊಂಡಿವೆ. ವಿದ್ಯಾರ್ಥಿಗಳಿಗೆ ಸ್ಟಡಿ ಟೂಲ್‌ಗ‌ಳನ್ನೂ ಇವುಗಳ ಮೂಲಕವೇ ಒದಗಿಸಿಕೊಡುತ್ತಿವೆ. ಆನ್‌ಲೈನ್‌ ಲೈಬ್ರರಿಯಲ್ಲೇ ಓದಿಗೆ ಹೆಚ್ಚು ಅವಕಾಶವನ್ನೂ ನೀಡಲಾಗಿದೆ. ಆದರೆ ಕೋವಿಡ್‌ ಮುಂದುವರಿದು, ಸದ್ಯ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹಣಕಟ್ಟಿದ ವಿದ್ಯಾರ್ಥಿಗಳಿಗೆ ನೀವೂ ಆನ್‌ಲೈನ್‌ನಲ್ಲೇ ಪಾಠ ಕೇಳಿಸಿಕೊಳ್ಳಿ ಎಂದರೆ? ಎಂಬ ಚಿಂತೆ ಇದೆ.

ನಿರ್ದಿಷ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸು, ಅಲ್ಲಿನ ಬೋಧಕ ವರ್ಗ, ಲೈಬ್ರರಿ ಸಂಪರ್ಕ ಇತ್ಯಾದಿಗಳು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಮತ್ತು ಕಲಿಕೆಗೆ ಅದು ಪ್ರತ್ಯೇಕ ಬೆಂಬಲ ನೀಡುತ್ತದೆ. ಆದರೆ ಆನ್‌ಲೈನ್‌ನಲ್ಲೇ ಪಾಠ ಕೇಳಿಸಿಕೊಳ್ಳಿ ಅಂದರೆ ಅಷ್ಟೇನೂ ಚೆನ್ನಾಗಿರದು ಎನ್ನುವುದು ವಿದ್ಯಾರ್ಥಿಗಳ ನುಡಿ.

ಭಾರತ ದ್ವಿತೀಯ
ವಿದೇಶಿ ವಿವಿಗಳಲ್ಲಿ ಅತಿ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಹೊಂದಿರುವ ದೇಶಗಳಲ್ಲಿ ಚೀನದ ಅನಂತರದ ಸ್ಥಾನ ಭಾರತದ್ದು. ವಿದೇಶಾಂಗ ಇಲಾಖೆ ಪ್ರಕಾರ, ಜು.2019ರ ವೇಳೆಗೆ 10.9 ಲಕ್ಷ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಬ್ರಿಟನ್‌ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿವಿಯನ್ನೇ ತೆಗೆದುಕೊಂಡರೆ, ಅಲ್ಲಿ 2020-21ನೇ ಸಾಲಿನಲ್ಲಿ ಮುಖತಃ ನಡೆಸುವ ಎಲ್ಲ ತರಗತಿಗಳನ್ನು ರದ್ದುಪಡಿಸಲಾಗಿದೆ. ಇದರ ಬದಲಿಗೆ ವರ್ಚುವಲ್‌ ತರಗತಿ ಮತ್ತು ಆನ್‌ಲೈನ್‌ ಸ್ಟ್ರೀಮಿಂಗ್‌ ಬಗ್ಗೆ ಯೋಜಿಸಿದೆ. ಇದು 2021ರ ಬೇಸಗೆ ವರೆಗೆ ಚಾಲ್ತಿಯಲ್ಲಿರಲಿದೆ. ಇಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ.

ಕೋವಿಡ್‌ನಿಂದಾಗಿ ಸಮಸ್ಯೆ
ಶೈಕ್ಷಣಿಕ ಮಾರುಕಟ್ಟೆ ಕುರಿತ ಸರ್ವೇ ಒಂದರಲ್ಲಿ ಶೇ.50.89ರಷ್ಟು ಮಂದಿ ಕೋವಿಡ್‌ನಿಂದಾಗಿ ನಮ್ಮ ವಿದೇಶಿ ಕಲಿಕೆ ಆಸೆಗೆ ತಣ್ಣೀರು ಬಿದ್ದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಾಗೆಯೇ ಶೇ.49.2ರಷ್ಟು ಮಂದಿ ಹಾಗೇನೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಹೆಚ್ಚಿನ ಮುಂದೆ ಭವಿಷ್ಯ ಏನು ಎಂಬುದರ ಬಗ್ಗೆ ತಿಳಿದಿಲ್ಲ ಎಂದೇ ಹೇಳಿದ್ದಾರಂತೆ.

ಭವಿಷ್ಯದ ಬಗ್ಗೆ ಗೊಂದಲ
ಇನ್‌ಸ್ಟಿಟ್ಯೂಷನ್ಸ್‌ ಎಜುಕೇಶನ್‌.ಕಾಮ್‌ ವೆಬ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಕೋವಿಡ್‌ನಿಂದಾಗಿ ನಾವು ವಿದೇಶದಲ್ಲಿ ಕಲಿಕೆಯ ಯೋಜನೆಯನ್ನೇ ರದ್ದುಪಡಿಸುತ್ತೇವೆ ಎಂದಿದ್ದು ಶೇ.5.4ರಷ್ಟು ಮಂದಿ ಮಾತ್ರ. ಶೇ.42.3ರಷ್ಟು ಮಂದಿ ಇನ್ನೂ ಆಶಾವಾದಿಗಳಾಗಿದ್ದು, ಕಲಿಕೆಯನ್ನು ಮುಂದೂಡುತ್ತೇವೆ ಎಂದಿದ್ದಾರಂತೆ. ಶೇ.13.5ರಷ್ಟು ಮಂದಿ ಮುಂದುವರಿಸುತ್ತೇವೆ ಎಂದು ಹೇಳಿದ್ದರೆ, ಶೇ.38.8ರಷ್ಟು ಮಂದಿ ನಮಗೆ ಈ ವಿಚಾರದಲ್ಲಿ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರಂತೆ.

ವಿದ್ಯಾರ್ಥಿಗಳಲ್ಲಿ ಉದ್ವೇಗ, ಆತಂಕ
ಭಾರತೀಯ ವಿದ್ಯಾರ್ಥಿಗಳು ಅನೇಕರು ಕೋವಿಡ್‌ನಿಂದಾಗಿ ಉದ್ವೇಗ, ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಹಲವರು ಇತ್ತೀಚೆಗೆ ತವರಿಗೆ ಮರಳಿದ್ದಾರೆ. ಅತ್ತ ತರಗತಿಗಳೂ ಇಲ್ಲ, ವೀಸಾ ಅವಧಿ ಮುಗಿಯುತ್ತಿದೆ. ಇನ್ನು ಉಳಿದುಕೊಳ್ಳುವುದಕ್ಕೆ ಇರುವ ಹಾಸ್ಟೆಲ್‌, ಮನೆ ಬಾಡಿಗೆ ಇತ್ಯಾದಿಗಳ ಒಪ್ಪಂದಗಳೂ ಮುಗಿಯುತ್ತಿವೆ. ಕೋವಿಡ್‌ ತೀವ್ರಗೊಂಡಾಗ ಎಲ್ಲರೂ ಬಚಾವಾದರೆ ಸಾಕು ಎಂದು ತವರಿಗೆ ಮರಳಿದ್ದರು. ಈಗ ಅಲ್ಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ ಒಂದು ವೇಳೆ ಕಾಲೇಜುಗಳು ಶುರುವಾದರೆ ಪ್ರಯಾಣಿಸುವ ಬಗ್ಗೆ ಮರಳಿ ವಸತಿಯನ್ನು ಪಡೆಯುವ ಬಗ್ಗೆ ಚಿಂತೆ ಹೊಂದಿದ್ದಾರೆ.

ಆನ್‌ಲೈನ್‌ಗೆ ಕಲಿಕೆಗೆ ಆಸಕ್ತಿ ಕಡಿಮೆ
ವಿದೇಶಗಳಲ್ಲಿ ಕಲಿಯುವ ಉದ್ದೇಶ ಹೊಂದಿದ ಹೆಚ್ಚಿನ ವಿದ್ಯಾರ್ಥಿಗಳು ತರಗತಿಯ ಪಾಠಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇದು ವಿವಿಧ ಸರ್ವೆಗಳಲ್ಲಿ ಸಾಬೀತಾಗಿದೆ. ಶೇ.54.8ರಷ್ಟು ಮಂದಿ ಆನ್‌ಲೈನ್‌ ಕಲಿಕೆಗೆ ಒಲವಿಲ್ಲ ಎಂದಿದ್ದಾರೆ. ಶೇ.45.2ರಷ್ಟು ಮಂದಿ ಒಲವಿದೆ ಎಂದಿದ್ದಾರೆ. ವಿದ್ಯಾರ್ಥಿಗಳು ಆನ್‌ಲೈನ್‌ಗೆ ಬೆಂಬಲ ನೀಡದೇ ಇರಲು ಕಾರಣವೆಂದರೆ, ವಿದೇಶಗಳಲ್ಲಿ ಕಲಿಕೆಯ ಅನುಭವ. ಅಲ್ಲಿನ ಪಠ್ಯಕ್ರಮದ ರೀತಿ, ಪಾಠಮಾಡುವ ವಿಧಾನ, ಜೀವನ ವಿಧಾನ, ಶಿಸ್ತಿನ ಕಲಿಕೆ, ಓದುವ ಸಲಕರಣೆಗಳ ಲಭ್ಯತೆ ಇತ್ಯಾದಿಗಳ ಆಧಾರದ ಮೇಲೆ ಅಲ್ಲಿಯೇ ಕಲಿಯಬೇಕೆನ್ನುವ ಇಚ್ಛೆಯನ್ನು ಹೊಂದಿದ್ದಾರೆ.

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.