ಯುಗಾದಿ ಹಬ್ಬದ ಸಂಭ್ರಮ ಕಸಿದ ಕೋವಿಡ್ ಮಹಾಮಾರಿ
Team Udayavani, Apr 15, 2020, 10:55 AM IST
ಉಡುಪಿ/ಕುಂದಾಪುರ/ಮಲ್ಪೆ : ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬ ಯುಗಾದಿ. ಈ ಬಾರಿ ಕೋವಿಡ್ ಮಹಾಮಾರಿ ವಕ್ಕರಿಸಿದ್ದರಿಂದ ಹಬ್ಬವು ಕಳೆಗುಂದಿದೆ. ಜನರು ಮನೆಯಿಂದ ಹೊರಗೆ ಹೋಗಲಾರದ ಸ್ಥಿತಿಯಲ್ಲಿ ಹಬ್ಬದ ಸಂಭ್ರಮ ಕಳೆದುಕೊಂಡಿದೆ.
ಸಾಮಾನ್ಯವಾಗಿ ಮನೆಮಕ್ಕಳು, ಸಂಬಂಧಿಕರು ಒಟ್ಟಿಗೆ ಸೇರಿಕೊಂಡು ಆಚರಿಸುವ ಹಬ್ಬವಾಗಿದ್ದು, ಈ ಬಾರಿ ಒಬ್ಬರನ್ನೊಬ್ಬರು ಭೇಟಿಯಾಗದಂತೆಯೂ ಮಾಡಿದೆ. ಪೇಟೆಯಲ್ಲಿ ಅಂಗಡಿಗಳು ಮುಚ್ಚಿದ್ದರಿಂದ ಹೊಸ ವರ್ಷಕ್ಕೆ ಯಾವುದೇ ವಿಶೇಷ ಖರೀದಿಗಳಿಲ್ಲ. ಜನರು ದೇವಸ್ಥಾನಗಳಿಗೆ ತೆರಳಿ ದರ್ಶನವೂ ಪಡೆಯದಂತಾಗಿದೆ. ಹಾಗಾಗಿ ಜನರು ಮನೆಯಲ್ಲಿ ಸರಳ ಹಬ್ಬ ಆಚರಿಸಿದರು.
ಮೀನು ಹಿಡಿಯುವ ಸಂಪ್ರದಾಯ ಇಲ್ಲ
ಕರಾವಳಿ ಸಂಪ್ರದಾಯಗಳ ನಾಡು, ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆಯೂ ಒಂದೊಂದು ನಂಬಿಕೆಯಿರುತ್ತದೆ. ಮಲ್ಪೆ ತೊಟ್ಟಂ ಸಮೀಪದ ಕುಮೆಕೆರೆಯಲ್ಲಿ ಪ್ರತಿವರ್ಷ ಸೌರಮಾನ ಯುಗಾದಿಯಂದು ಊರಿ ನವರೆಲ್ಲರೂ ಸೇರಿ ಬಲೆ ಬೀಸಿ ಮೀನು ಹಿಡಿಯುವ ಸಂಪ್ರದಾಯ ಇತ್ತು. ಆದರೆ ಈ ಬಾರಿ ಲಾಕ್ಡೌನ್ನಿಂದಾಗಿ ಜನರು ಮನೆಯಿಂದ ಹೊರಗೆ ಬಾರದೇ ಹಲವಾರು ವರ್ಷಗಳ ಸಂಪ್ರದಾಯವನ್ನೆ ಕೈಬಿಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ