Doping: ಕ್ರೀಡೆಗೆ ಮಾರಕ ಉದ್ದೀಪನದ್ರವ್ಯ ಸೇವನೆ


Team Udayavani, Aug 12, 2023, 11:43 PM IST

running

ಏಷ್ಯನ್‌ ಗೇಮ್ಸ್‌ನ ಹೊಸ್ತಿಲಲ್ಲಿ ಮತ್ತೆ ಉದ್ದೀಪನ ದ್ರವ್ಯ ಸೇವನೆಯ ಸದ್ದು ಕೇಳಿಸುತ್ತಿದೆ. ಈಗಾಗಲೇ ಕೆಲವು ಕ್ರೀಡಾಳುಗಳು ಇದರಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಬಾರಿ ಇದೇ ಮೊದಲ ಬಾರಿಗೆ ಭಾರತದ ಅತ್ಯಂತ ಕಿರಿಯ ಕ್ರೀಡಾಳುವೊಬ್ಬರು ಉದ್ದೀಪನ ದ್ರವ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು ತೀರಾ ಆತಂಕಕಾರಿ ವಿಷಯ.

5ಜಿ ಕಾಲದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಎಲ್ಲ ದರಲ್ಲೂ ಕ್ಷಿಪ್ರವಾಗಿ ಮತ್ತು ಸುಲ ಭವಾಗಿ ಗುರಿ ಸಾಧಿಸ ಬೇಕೆಂಬ ಚಪಲ ಹೆಚ್ಚಾಗುತ್ತಿದೆ. ಕೆಲವೊಂದು ವಿಷಯಗಳಲ್ಲಿ ಇದು ಸಾಧ್ಯವಾ ಗಬಹುದಾದರೂ ಇನ್ನು ಕೆಲವು ವಿಷಯಗಳಲ್ಲಿ ಇದು ಅತ್ಯಂತ ಅಪಾಯಕಾರಿ. ಕ್ರೀಡೆಯಲ್ಲಿಯೂ ಇಂತಹ ಧಾವಂತ ಕಂಡು ಬರತೊಡಗಿದ್ದು ಈ ಚಪಲ ತಮ್ಮ ಭವಿಷ್ಯಕ್ಕೆ ಕುತ್ತು ತಂದೊ ಡ್ಡಬಹುದು ಎಂಬ ಅರಿವಿದ್ದರೂ ಕ್ರೀಡಾಪಟುಗಳು ಇಂತಹ ವರ್ತನೆ ತೋರುತ್ತಿರುವುದು ಚಿಂತೆಗೆ ಕಾರಣವಾಗಿದೆ.

ನಿರಂತರ ಪ್ರಯತ್ನ, ದೃಢವಾದ ನಿರ್ಧಾರ, ಏಕಾಗ್ರತೆಯಿಂದ ಮೇರು ಕಿರೀಟ ಏರಿಸಿಕೊಳ್ಳಲು ಸಾಧ್ಯ ವಾಗುವಂತಹ ಕ್ರೀಡೆಯ ಲ್ಲಿಯೂ ಕೆಲವರು ಅಡ್ಡದಾರಿ ಹಿಡಿಯಲಾರಂಭಿಸಿದ್ದಾರೆ. ಇದು ಅವರಿಗೆ ಮಾತ್ರವಲ್ಲದೆ ದೇಶಕ್ಕೆ ಕೂಡ ಅಪಕೀರ್ತಿಯನ್ನು ತಂದೊ ಡ್ಡುತ್ತಿದೆ. ಕ್ರೀಡೆಯಲ್ಲಿನ ಸಾಧನೆಗೆ ಶಕ್ತಿ-ಸಾಮರ್ಥ್ಯ ಅಡಿಗಲ್ಲು, ಚಾಕಚಕ್ಯತೆ ಆಧಾರಸ್ತಂಭ. ಇವೆರಡೂ ಸುಲಭವಾಗಿ ದಕ್ಕುವುದಿಲ್ಲ. ಅದಕ್ಕಾಗಿ ದೊಡ್ಡ ತಪಸ್ಸೇ ಮಾಡಬೇಕಾಗುತ್ತದೆ. ಆದರೆ ಈಗಿನ ಕೆಲವು ಯುವಕರಿಗೆ ದಿನ ಬೆಳಗಾಗುವುದರ ಒಳಗೆ ಇವೆಲ್ಲವೂ ಸಿಗಬೇಕೆಂಬ ಅಭಿಲಾಷೆ. ಅದಕ್ಕಾಗಿ ಅವರು ಹಿಡಿದಿರುವ ದಾರಿ ಉದ್ದೀಪನ ದ್ರವ್ಯ ಸೇವನೆ ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ನಿಷೇಧಿತ ಡ್ರಗ್ಸ್‌ ಸೇವನೆ.
ಒಲಿಂಪಿಕ್ಸ್‌ ಹೊಸ್ತಿಲಲ್ಲಿ ಕಪ್ಪು ಚುಕ್ಕಿ

ಮುಂದಿನ ವರ್ಷ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾ ಕೂಟ ನಡೆಯಲಿದ್ದು, ಅದರ ಹೊಸ್ತಿಲಿನಲ್ಲಿಯೇ ಹಲವು ಕ್ರೀಡಾ ಪಟುಗಳು ಉದ್ದೀಪನ ಡ್ರಗ್ಸ್‌ ಸೇವನೆಯಲ್ಲಿ ಸಿಕ್ಕಿ ಬೀಳುತ್ತಿರುವುದು ಆತಂಕದ ವಿಷಯ. ಕಳೆದ ವರ್ಷ 17 ಮಂದಿ ನಿಷೇಷಧಕ್ಕೆ ಒಳಗಾ ಗಿದ್ದರೆ, ಈ ವರ್ಷ ಇದುವರೆಗೆ 71 ಮಂದಿ ನಿಷೇಧ ಕ್ಕೊಳಗಾಗಿದ್ದಾರೆ. ಇದಲ್ಲದೆ 36 ಮಂದಿ ಕ್ರೀಡಾಳುಗಳು ಪ್ರಸ್ತುತ ಅಮಾನತಿನಲ್ಲಿದ್ದು, ಅಂತಿಮ ನಿರ್ಧಾರ ಘೋಷಣೆಯಾಗಿಲ್ಲ. ಈ ರೀತಿ ಫೇಲ್‌ ಆದವರು ಕನಿಷ್ಠ 2 ವರ್ಷವಾದರೂ ನಿಷೇಧವನ್ನು ಎದುರಿಸುತ್ತಾರೆ. ಅಷ್ಟರಲ್ಲಿ ಒಲಿಂಪಿಕ್ಸ್‌ ಮುಗಿದಿರುತ್ತದೆ.

ಕಿರಿಯ ಕ್ರೀಡಾಳುವಿನಲ್ಲಿ ಪತ್ತೆ
ಅಚ್ಚರಿಯ ವಿಷಯ ಎಂದರೆ ಈ ಬಾರಿ ಅತ್ಯಂತ ಕಿರಿಯ ಕ್ರೀಡಾಳು ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಮುಂಬ ರುವ ಏಷ್ಯನ್‌ ಗೇಮ್ಸ್‌ನಿಂದ ಹೊರಬಿದ್ದಿರುವುದು. ಚೀನದಲ್ಲಿ ಸೆಪ್ಟಂಬರ್‌ 23ರಿಂದ ಅಕ್ಟೋಬರ್‌ 8ರ ವರೆಗೆ ಏಷ್ಯನ್‌ ಗೇಮ್ಸ್‌ ನಡೆ ಯಲಿದೆ. ಇದರಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಳುಗಳ ಆಯ್ಕೆ ಈಗಾಗಲೇ ನಡೆಯುತ್ತಿದೆ. ಇಂಥವರಿಗೆ ಉದ್ದೀಪನ ದ್ರವ್ಯ ಪರೀಕ್ಷೆ ಎಂಬುದು ಕಡ್ಡಾಯ. ಈಜು ತಂಡಕ್ಕೆ ಆಯ್ಕೆ ಯಾದವರಲ್ಲಿ ಇಬ್ಬರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದಾಗಿ ನಾಡಾ (ರಾಷ್ಟ್ರೀಯ ಉದ್ದೀಪನ ಔಷಧ ಸೇವನೆ ನಿಗ್ರಹ ಘಟಕ)ವು ತನ್ನ ಆಗಸ್ಟ್‌ ಮಾಹೆಯ ವರದಿಯಲ್ಲಿ ತಿಳಿಸಿದೆ. ಬಹಳಷ್ಟು ಆ್ಯತ್ಲೀಟ್‌ಗಳ ವರದಿ ಇನ್ನಷ್ಟೇ ಬರಬೇಕಿದೆ.

ಇಬ್ಬರಲ್ಲಿ ಓರ್ವ ಈಜುಪಟು 14 ವರ್ಷದೊಳಗಿನ ವಿಭಾಗ ದವರಾಗಿದ್ದರೆ, ಇನ್ನೋರ್ವರು 70 ಕೆ.ಜಿ. ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಲಡಾಖ್‌ ಮೂಲದ 23ರ ಹರೆಯದ ಓವಸಿಸ್‌ ಸರ್ವಾರ್‌ ಅಹೆಂಗರ್‌. ಅಹೆಂಗರ್‌ ಅವರು ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ 14 ಮಂದಿ ಈಜು ಗಾರರ ತಂಡದ ಸದಸ್ಯರಾಗಿದ್ದರು. ಪರೀಕ್ಷೆಯ ಬಳಿಕ ಅವರನ್ನು ತಂಡದಿಂದ ಹೊರಗಿರಿಸಲಾಗಿದೆ. ಅಹೆಂಗರ್‌ ಅವರು ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಈಜು ಸ್ಪರ್ಧೆಯ ಮಹಿಳೆಯರ ವಿಭಾಗದ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇವರಿಬ್ಬರು ತಂಡದಿಂದ ಹೊರಬಿದ್ದಿರು ವುದರಿಂದ ಬದಲಿ ಆಟಗಾರರ ಆಯ್ಕೆಯೂ ಸಾಧ್ಯವಿಲ್ಲದೆ ದೇಶ ನಿರಾಶೆ ಗೀಡಾಗಿದೆ.

14 ವರ್ಷದೊಳಗಿನ ಈಜು ಕ್ರೀಡಾಳುವಿನ ಹೆಸರನ್ನು ಪ್ರಕಟ ಗೊಳಿಸಿಲ್ಲ. ಆದರೆ ಇಷ್ಟೊಂದು ಕಿರಿಯ ಕ್ರೀಡಾಳು ಉದ್ದೀಪನ ಮದ್ದು ಸೇವಿಸಿರುವ ಬಗ್ಗೆ ಮಾತ್ರ ಎಲ್ಲೆಡೆ ಆಘಾತ ವ್ಯಕ್ತವಾಗಿದೆ. ಮೈನರ್‌ ಆಗಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಇದ್ದರೂ ಅವರ ಮುಂದಿನ ಸಾಧನೆಯ ಪಟ್ಟಿಯಲ್ಲಿ ಕಪ್ಪುಚುಕ್ಕೆಯಂತೂ ಇರುವುದು ಖಚಿತ.

ಡ್ರಗ್ಸ್‌ ಸೇವನೆ ಏಕೆ?
ಕ್ರೀಡಾಳುವಿನ ಆಸ್ತಿಯೇ ದೈಹಿಕ ಕ್ಷಮತೆ ಮತ್ತು ಸಾಮರ್ಥ್ಯ ಆಗಿದೆ. ಕೆಲವೊಂದು ಔಷಧ, ಸಿರಪ್‌, ಡ್ರಗ್ಸ್‌, ಜೂಸ್‌ ಸೇವನೆ ಯಿಂದ ಹೆಚ್ಚುವರಿ ಶಕ್ತಿ ಸಿಗುತ್ತದೆ. ಆಯಾಸ ನಿವಾರಣೆಯಾಗುತ್ತದೆ, ಕಠಿನ ಅಭ್ಯಾಸ ಸಾಧ್ಯವೆಂದು ಅವುಗಳನ್ನು ಸೇವಿಸುತ್ತಾರೆ. ತೀರಾ ನಿಷೇಧಿತ ವಸ್ತುಗಳು ಇರದಂತೆ ಕೆಲವರು ಜಾಗರೂಕತೆ ವಹಿಸಿ ದರೂ ಅವುಗಳಲ್ಲಿ ಸೇರಿರುವ ವಿವಿಧ ರಾಸಾಯನಿಕಗಳು ಅಪಾ ಯಕ್ಕೆ ಕಾರಣವಾಗುತ್ತವೆ. ಇದು ದ್ರವ್ಯ ಪರೀಕ್ಷೆಯ ವೇಳೆ ಪತ್ತೆ ಯಾಗಿ ನಿಷೇಧಕ್ಕೆ ಒಳಗಾಗುತ್ತಾರೆ.

ಪರಿಣಾಮಗಳೇನು?
ಡ್ರಗ್ಸ್‌ ಅಥವಾ ಔಷಧ ಸೇವನೆ ಕ್ರೀಡಾಳುವಿನ ಜೀವನವನ್ನೇ ನಾಶಪಡಿಸುತ್ತದೆ. ಒಂದೆಡೆ ಕ್ರೀಡಾ ಜೀವನ ಕೊನೆಗೊಂಡರೆ ಮತ್ತೂಂದೆಡೆ ವೈಯಕ್ತಿಕ ಆರೋಗ್ಯ ಕೂಡ ಅಪಾಯಕ್ಕೆ ಸಿಲು ಕುತ್ತದೆ. ಇದರಿಂದ ಹೃದಯ, ಲಿವರ್‌, ನರಸಂಬಂಧಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಸಣ್ಣ ಪ್ರಾಯದಲ್ಲಿಯೇ ಡ್ರಗ್ಸ್‌ ಸೇವಿಸಿದರೆ ಆತನ ಜೀವನವೇ ನರಕವಾಗಬಹುದು ಎಂಬ ಎಚ್ಚರಿಕೆಯನ್ನು ವಾಡಾ ನೀಡುತ್ತದೆ.

ಯಾವ ವಸ್ತುಗಳನ್ನು ಸೇವಿಸಬಾರದು?
ಹಾಗಾದರೆ ಕ್ರೀಡಾಳುಗಳು ಯಾವುದೇ ರೀತಿಯ ಔಷಧ ಅಥವಾ ಶಕ್ತಿ ಉತ್ತೇಜಕ ವಸ್ತುಗಳನ್ನು ಸೇವಿಸುವಂತೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹಾಗೇನಿಲ್ಲ, ಕೆಲವೊಂದು ಅಂಶಗಳಿರುವ ಡ್ರಗ್ಸ್‌, ಸಿರಪ್‌, ಮಾತ್ರೆ, ಜೂಸ್‌ಗಳನ್ನು ತೆಗೆದು ಕೊಳ್ಳುವಂತಿಲ್ಲ. ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ ಈ ಕುರಿ ತಾದ ಸ್ಪಷ್ಟ ಮಾಹಿತಿಯನ್ನು ಆಗಾಗ್ಗೆ ನೀಡುತ್ತಿದೆ. ತನ್ನ ವೆಬ್‌ಸೈಟ್‌ನಲ್ಲಿ ಅವುಗಳ ಪಟ್ಟಿಯನ್ನು ಹಾಕಿರುವುದಲ್ಲದೆ ಆಗಾಗ ಸೆಮಿನಾರ್‌, ವೆಬಿನಾರ್‌ಗಳ ಮೂಲಕ ಕ್ರೀಡಾಳುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ, ಕೋಚ್‌ಗಳಿಗೆ ಮಾಹಿತಿ ನೀಡುತ್ತಲೇ ಬರುತ್ತಿದೆ.

 ರಾಜೇಶ್‌ ಮೂಲ್ಕಿ

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.