ರಾಜ್ಯದ ವಿವಿದೆಡೆ ಗಾಳಿ-ಮಳೆ: ವೃದ್ಧೆ ಸಾವು
Team Udayavani, Apr 24, 2019, 6:00 AM IST
ಬೆಂಗಳೂರು / ಉಡುಪಿ/ ಮಂಗಳೂರು: ಕರಾವಳಿ, ಮೈಸೂರು ಸಹಿತ ಮಲೆನಾಡಿನ ಹಲವು ಕಡೆ ಮಂಗಳವಾರ ಗಾಳಿ ಸಹಿತ ಮಳೆಯಾಗಿದ್ದು, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿಯಲ್ಲಿ ಗುಡಿಸಲಿನ ಶೀಟ್ ಬಿದ್ದು ದೊಡ್ಡತಾಯಮ್ಮ (70) ಮೃತ ಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಮತ್ತು ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನ ವಿವಿಧೆಡೆ ಸಂಜೆ ವೇಳೆ ರಭಸವಾಗಿ ಗಾಳಿ ಬೀಸಿ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಯಿತು. ಗಾಳಿಯಿಂದ ಅಲ್ಲಲ್ಲಿ ಮರ ಉರುಳಿ ಹಾನಿಯುಂಟಾಗಿದೆ. ಕೆಲವು ಕಡೆ ಹೆಂಚು ಹಾರಿ ಹೋಗಿವೆ.
ಮಳೆ ಸಾಧ್ಯತೆ
ಉತ್ತರ ಒಳನಾಡಿನಲ್ಲಿ ಉಂಟಾದ ಕಡಿಮೆ ಒತ್ತಡದ ತಗ್ಗು (ಟ್ರಫ್) ಹಾಗೂ ಒಡಿಶಾದಿಂದ ಕರಾವಳಿಯವರೆಗಿನ ಮೇಲ್ಮೆ„ ಸುಳಿಗಾಳಿಯಿಂದಾಗಿ ಹಲವೆಡೆಗಳಲ್ಲಿ ಭಾರೀ ಮಳೆಯಾಗಿದೆ. ಬುಧವಾರದ ವೇಳೆಗೆ ಮೇಲ್ಮೆ„ ಸುಳಿಗಾಳಿಯ ತೀವ್ರತೆ ಕಡಿಮೆಯಾಗಲಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.