ವಿವಾದದ ಅಲೆ; ಫೇಸ್ಬುಕ್ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿದಾಸ್ ರಾಜೀನಾಮೆ
ಸಾರ್ವಜನಿಕ ಸೇವೆಗಳಲ್ಲಿ ಮುಂದುವರಿಯುವ ಸಲುವಾಗಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.
Team Udayavani, Oct 28, 2020, 10:17 AM IST
ನವದೆಹಲಿ: ದ್ವೇಷಪೂರಿತ ಭಾಷಣ’ ವಿವಾದದ ಅಲೆ ಕೊನೆಗೂ ಫೇಸ್ಬುಕ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿದಾಸ್ ಹುದ್ದೆ ಕಿತ್ತುಕೊಂಡಿದೆ. ಆಂಖಿದಾಸ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಸಂಸ್ಥೆ ಮಂಗಳವಾರ ಘೋಷಿಸಿದೆ.
ಭಾರತದಲ್ಲಿ ರಾಜಕೀಯ ನಾಯಕರ ದ್ವೇಷಪೂರಿತ ಭಾಷಣ ನಿಯಂತ್ರಿಸಲು ಫೇಸ್ ಬುಕ್ ವಿಫಲವಾಗಿದೆ ಎಂಬ ಗಂಭೀರ ಆರೋಪದ ನಡುವೆ ಆಂಖಿದಾಸ್ ಪದತ್ಯಾಗ ಮಾಡಿದ್ದಾರೆ.
ಸಾರ್ವಜನಿಕ ಸೇವೆಗಳಲ್ಲಿ ಮುಂದುವರಿಯುವ ಸಲುವಾಗಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಭಾರತದ ಆರಂಭದ ದಿನಗಳಲ್ಲಿ ಫೇಸ್ಬುಕ್ ಗೆ ಬುನಾದಿ ಹಾಕಿಕೊಡುವಲ್ಲಿ ಆಂಖೀ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಫೇಸ್ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಿಳಿಸಿದ್ದಾರೆ.
ಸಿಂಗಲ್ ಪೇರೆಂಟ್ ಪುರುಷ ನೌಕರರಿಗೆ ಸಿಸಿಎಲ್ ಸಿಹಿ
ಸರ್ಕಾರಿ ಉದ್ಯೋಗದಲ್ಲಿರುವ ಪುರುಷ ಸಿಂಗಲ್ ಪೇರೆಂಟ್ಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮಗುವಿನ ಆರೈಕೆಗೆ ವಿಶೇಷ ರಜೆ ಪಡೆಯುವ ಅವಕಾಶವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಲ್ಪಿಸಿದೆ.
ಮದುವೆಯಾಗದೆ ಮಗು ಹೊಂದಿದ ಪುರುಷ, ಪತ್ನಿಯನ್ನು ಕಳೆದುಕೊಂಡ ಗಂಡ ಮತ್ತು ವಿಚ್ಛೇದಿತನಿಗೆ ಮಕ್ಕಳ ಆರೈಕೆ ರಜೆ (ಸಿಸಿಎಲ್) ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದುವರೆಗೆ ಕೇವಲ ಮಹಿಳಾ ಸಿಬ್ಬಂದಿಗೆ ಮಾತ್ರವೇ 2 ವರ್ಷ ಸಂಭಾವನೆ ಸಹಿತ ಸಿಸಿಎಲ್ ಪಡೆಯಲು ಅವಕಾಶವಿತ್ತು. ಆದರೆ, ಈಗ ಪುರುಷ ಸಿಂಗಲ್ ಪೇರೆಂಟ್ ವ್ಯಕ್ತಿ ಮೊದಲ ವರ್ಷ ಮಗುವಿನ ಆರೈಕೆಗೆ ಶೇ.100 ಸಂಭಾವನೆಸಹಿತ ರಜೆ ಪಡೆಯಬಹುದು.
ಎರಡನೇ ವರ್ಷ ಶೇ.80 ಸಂಭಾವನೆಯೊಂದಿಗೆ ಸಿಸಿಎಲ್ ತೆಗೆದುಕೊಳ್ಳಬಹು ದಾಗಿದೆ. ವಿಕಲಾಂಗ ಮಗುವಿದ್ದರೆ 22 ವರ್ಷ ತುಂಬು ವವರೆಗೂ ಸಿಸಿಎಲ್ ಪಡೆಯಲು ಈ ಹಿಂದೆ ಅವಕಾಶವಿತ್ತು. ಈಗ ವಯೋಮಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ