ಅಭಿಮಾನಿಗಳಿಗೆ ಕೈಕೊಡಲು ಭಯ ಆಗ್ತಿದೆ…


Team Udayavani, Mar 5, 2020, 3:06 AM IST

abhimanigali

ವಿಧಾನ ಪರಿಷತ್ತು: ಹೊಸದಾಗಿ ಮಂತ್ರಿಯಾಗಿ ಕ್ಷೇತ್ರಕ್ಕೆ ಹೋದ್ರೆ, ಭೇಟಿಗೆ ಬರುವ ಅಭಿಮಾನಿಗಳಿಗೆ ಕೈಕುಲುಕಲು ಭಯ ಆಗುತ್ತಿದೆ. ಒಂದು ವೇಳೆ ಹಸ್ತಲಾಘವ ಮಾಡದಿದ್ದರೆ, “ಮಂತ್ರಿ ಆದ್ಮೇಲೆ ನಮ್ಮ ನಾಯಕನಿಗೆ ಎಷ್ಟು ಸೊಕ್ಕು ಬಂತು ನೋಡಿ’ ಅಂದುಕೊಳ್ತಾರೆ. ಆದರೆ, ನನ್ನ ಸಂಕಟ ಅವರಿಗೆ ಗೊತ್ತಾಗ್ತಿಲ್ಲ…!

ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ ಬಗ್ಗೆ ಸ್ವತಃ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಆತಂಕ ವ್ಯಕ್ತಪಡಿಸಿದ ರೀತಿ ಇದು. ಸಚಿವರ ಈ ಆತಂಕವೇ ಬುಧವಾರ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆಗೂ ವೇದಿಕೆಯಾಯಿತು.

ಕಳೆದ ಭಾನುವಾರ ನಾನು ನನ್ನ ಕ್ಷೇತ್ರಕ್ಕೆ ಹೋಗಿದ್ದೆ. ಸಚಿವನಾಗಿ ಬಂದಿದ್ದೇನೆಂದು ಕಾರ್ಯಕರ್ತರು, ಅಭಿಮಾನಿಗಳೆಲ್ಲಾ ಬಂದು ಹಸ್ತಲಾಘವ ಮಾಡಲು ಮುಗಿಬೀಳುತ್ತಿದ್ದರು. ಪ್ರತಿಯಾಗಿ ನಾನೂ ಕೈಕೊಡುವಾಗ ಕೊರೊನಾ ವೈರಸ್‌ ನೆನಪಾಗಿ ಭಯ ಆಗುತ್ತಿತ್ತು. ತಕ್ಷಣ ಹಿಂತೆಗೆದುಕೊಳ್ಳುತ್ತಿದ್ದೆ. ಇದೇ ಸ್ಥಿತಿಯನ್ನು ವಿಧಾನಸೌಧದಲ್ಲಿ ಅಭಿಮಾನಿಗಳ ಭೇಟಿ ವೇಳೆಯೂ ಎದುರಿಸಿದ್ದೇನೆ. ಕೈಕೊಡದಿದ್ದರೆ ನನಗೆ ಸೊಕ್ಕು ಬಂದಿದೆ ಅಂತ ಅಂದುಕೊಳ್ಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೈಕೊಟ್ಟವರಾ ಕೈಬಿಟ್ಟವರಾ?: ಕೈಕುಲುಕದಿರು ವುದರಿಂದ “ಸೊಕ್ಕು ಬಂತು’ ಅಂದುಕೊಳ್ಳ ದಿರಲೆಂದು “ನಾನು ಕೈ ಪಕ್ಷ ಬಿಟ್ಟಿದ್ದೇನೆ. ಆದ್ದ ರಿಂದ ಕೈ ಕೊಡುವುದಿಲಪ್ಪ’ ಎಂದು ಹೇಳುತ್ತಿರುವುದಾಗಿ ಪ್ರತಿ ಪಕ್ಷದ ಕಾಲೆಳೆದರು. ಆಗ, ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ, “ನೀವು ಕೈ ಪಕ್ಷ ಬಿಟ್ಟವರಲ್ಲ, ಕೈಕೊಟ್ಟವರು’ ಎಂದು ತಿರುಗೇಟು ನೀಡಿದರು.

ತಕ್ಷಣ ಎದ್ದುನಿಂತ ತೇಜಸ್ವಿನಿಗೌಡ, “ಕೈಕೊಟ್ಟವರಲ್ಲ; ನೀವು ಕೈಬಿಟ್ಟವರು ಅವರು (ಬಿ.ಸಿ. ಪಾಟೀಲ್‌)’ ಎಂದು ಟಾಂಗ್‌ ಕೊಟ್ಟರು. ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, “ಎಷ್ಟಾದರೂ ನಮ್ಮ ಎತ್ತು. ಎಲ್ಲಿ ಮೇಯ್ದರೆ ಏನು” ಎಂದು ಚಟಾಕಿ ಹಾರಿಸಿದರು. ಆಗ ಸದನದಲ್ಲಿ ನಗೆ ಬುಗ್ಗೆ ಚಿಮ್ಮಿತು.

ಹೆಂಡ್ತಿ ಕಾಲ್‌ ಮಾಡಿ ಕೇಳ್ತಿದಾಳೆ…: “ಬೆಂಗಳೂರಿನಲ್ಲೂ ಕೊರೊನಾ ವೈರಸ್‌ ಬಂದಿದೆ ಅಂತಲ್ಲಾರೀ ಹುಷಾರು’ ಎಂದು ಊರಲ್ಲಿರುವ ನನ್ನ ಹೆಂಡ್ತಿ ಫೋನ್‌ ಮಾಡಿ ಹೇಳುತ್ತಿದ್ದಾಳೆ. ನನಗೆ ಮಾತ್ರವಲ್ಲ; ಸಾಮಾನ್ಯರಿಗೂ ಇಂತಹ ಹಲವು ಗೊಂದಲ ಮತ್ತು ಆತಂಕಗಳು ಮನೆಮಾಡಿವೆ ಎಂದು ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಅರುಣ್‌ ಶಹಾಪುರ ದನಿಗೂಡಿಸಿದರು.

“ದುಬೈನಲ್ಲಿ ಕನ್ನಡ ಸಂಘದವರು ಕನ್ನಡದ ಸಮ್ಮೇಳನಕ್ಕೆ ಆಹ್ವಾನ ನೀಡಿದ್ದಾರೆ. ಆದರೆ, ನಿನ್ನೆ ಸೋಂಕು ಪತ್ತೆಯಾದ ಟೆಕ್ಕಿ ಬಂದಿದ್ದು ಕೂಡ ದುಬೈದಿಂದಲೇ. ಹಾಗಾಗಿ, ಅಲ್ಲಿಗೆ ಹೋಗ್ಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ’ ಎಂದು ಬಸವರಾಜ ಹೊರಟ್ಟಿ ಕೂಡ ಆತಂಕ ಹೊರಹಾಕಿದರು.

ಆಗ, ಸದಸ್ಯ ಧರ್ಮಸೇನ ನನಗೆ ಸೀನಲಿಕ್ಕೂ ಭಯ ಆಗುತ್ತಿದೆ ಎಂದರು. ಮತ್ತೂಂದು ತುದಿಯಲ್ಲಿದ್ದ ಸದಸ್ಯೆ ಜಯಮ್ಮ, ಮೊಬೈಲ್‌ ಮುಟ್ಟಿದರೂ ಈ ವೈರಸ್‌ ಬರುತ್ತಾ ಸರ್‌ ಎಂದು ಕೇಳುವ ಮೂಲಕ ಗಮನಸೆಳೆದರು. ಇದೆಲ್ಲದಕ್ಕೂ ಸಚಿವ ಡಾ.ಸುಧಾಕರ್‌ ಉತ್ತರ ನೀಡುವ ಮೂಲಕ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.