Fraud: ಕೆಲಸ, ವೀಸಾ ಕೊಡಿಸುವುದಾಗಿ ಹಣ ಪಡೆದು ವಂಚನೆ
Team Udayavani, Dec 15, 2023, 10:16 PM IST
ಮಂಗಳೂರು: ಜಿದ್ದಾದಲ್ಲಿ ಕೆಲಸ, ವೀಸಾ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಮೊಹಮ್ಮದ್ ಶಮ್ಲಾನ್ ಆಲಿ ಆರೋಪಿ. ಅಸ್ತರ್ ಆಲಿ ವಂಚನೆಗೊಳಗಾದವರು. 3 ಲ.ರೂ. ನೀಡಿದರೆ ಜಿದ್ದಾದಲ್ಲಿ ಲೈನ್ಸೇಲ್ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಅಧಿಕ ಸಂಬಳ ಸಿಗುವ ಕೆಲಸ ಕೊಡಿಸುವುದಾಗಿಯೂ, ವೀಸಾ ಮತ್ತು ಟಿಕೆಟ್ ಕಳುಹಿಸುವುದಾಗಿಯೂ ಮೊಹಮ್ಮದ್ ಶಮ್ಲಾನ್ ಹೇಳಿದ್ದ. ಆತನ ಮಾತು ನಂಬಿ ಅಸ್ತರ್ ಆಲಿ ತನ್ನ ಚಿನ್ನಾಭರಣ ಮಾರಾಟ ಮಾಡಿ ಆ.9ರಂದು 2 ಲ.ರೂ. ನೀಡಿದ್ದರು. ಬಳಿಕ ಆರೋಪಿ ಮೊಹಮ್ಮದ್ ಶಮ್ಲಾನ್ ಜಿದ್ದಾಗೆ ಹೋಗಿ ಮತ್ತೆ 1 ಲ.ರೂ. ನೀಡುವಂತೆ ಹೇಳಿದ್ದ. ಅದರಂತೆ ಅಸ್ತರ್ ಆಲಿ ಸಾಲ ಪಡೆದು 1 ಲ.ರೂಗಳನ್ನು ನೀಡಿದ್ದರು. ಆದರೆ 1 ತಿಂಗಳಾದರೂ ಟಿಕೆಟ್ ಮತ್ತು ವೀಸಾ ಕಳುಹಿಸಿರಲಿಲ್ಲ.
ಕರೆ ಮಾಡಿದಾಗ ಜಿದ್ದಾಗೆ ಬರುವಂತೆ ತಿಳಿಸಿದ್ದ. ಸೆ.12ರಂದು 20,300 ರೂ. ಖರ್ಚು ಮಾಡಿ ಜಿದ್ದಾಗೆ ಹೋದಾಗ ಅಲ್ಲಿ ಕೆಲಸ ಕೊಡದೆ ರೂಮಿನಲ್ಲಿ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ರೂಮಿನಿಂದ ಹೊರಗೆ ಹೋದರೆ 10 ವರ್ಷ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ವಾಪಸ್ ಕಳುಹಿಸುವಂತೆ ಕೇಳಿಕೊಂಡಾಗ ಆರೋಪಿ ಮೊಹಮ್ಮದ್ ಶಮ್ಲಾನ್ 69,000 ರೂ. ಪಡೆದುಕೊಂಡಿದ್ದಾನೆ ಎಂಬುದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ
B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು
Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
MUST WATCH
ಹೊಸ ಸೇರ್ಪಡೆ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ