Kerala: 84ಕ್ಕೆ ಕಾಲಿಟ್ಟ ಗಾನಗಂಧರ್ವ ಯೇಸುದಾಸ್- ಕೊಲ್ಲೂರಿಗೆ ಬಾರದ ಹಿರಿಯ ಗಾಯಕ
Team Udayavani, Jan 10, 2024, 9:49 PM IST
ಪ್ರತಿವರ್ಷ ತಮ್ಮ ಜನ್ಮದಿನದಂದು ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದ ಯೇಸುದಾಸ್
ತಿರುವನಂತಪುರ: ಸಂಗೀತ ಸ್ವರ ಸಾಮ್ರಾಟ ಯೇಸುದಾಸ್ ಅವರಿಗೆ ಬುಧವಾರ 83 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಗಾನಗಂಧರ್ವ ಎಂದೇ ಖ್ಯಾತರಾದ ಯೇಸುದಾಸ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವಾರು ಮಂದಿ ಶುಭಕೋರಿದ್ದಾರೆ.
ಪ್ರತಿವರ್ಷ ಯೇಸುದಾಸ್ ತಮ್ಮ ಜನ್ಮದಿನದಂದು ಕರ್ನಾಟಕದ ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಈ ವರ್ಷ ಕುಟುಂಬದೊಂದಿಗೆ ಅಮೆರಿಕದಲ್ಲಿರುವ ಹಿನ್ನೆಲೆಯಲ್ಲಿ ಕೊಲ್ಲೂರಿಗೆ ಆಗಮಿಸಲು ಸಾಧ್ಯವಾಗಿಲ್ಲವೆಂದೂ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.