ಶ್ರೀಕೃಷ್ಣಮಠದ ಪಲ್ಲಕಿಗೆ ಕಾಶ್ಮೀರದ ಚಿನ್ನ


Team Udayavani, Jan 17, 2022, 5:45 AM IST

ಶ್ರೀಕೃಷ್ಣಮಠದ ಪಲ್ಲಕಿಗೆ ಕಾಶ್ಮೀರದ ಚಿನ್ನ

ಉಡುಪಿ: ಉಡುಪಿ ಶ್ರೀಕೃಷ್ಣನ ಉತ್ಸವ ಮೂರ್ತಿ ಹೊತ್ತೂಯ್ಯುವ ಚಿನ್ನದ ಪಲ್ಲಕಿಯ ಚಿನ್ನ ಕಾಶ್ಮೀರದ್ದು. ಇದು ಕಾಶ್ಮೀರದಿಂದ ಬಂದದ್ದು 1880ರಲ್ಲಿ. ಇದಕ್ಕೂ ಹಿಂದಿನ ಇತಿಹಾಸ ತಿಳಿಯುವುದಿಲ್ಲ. ಇದು ಮೂಲದಲ್ಲಿ ಸುವರ್ಣದ ಅಲಂಕಾರದಿಂದ ಕೂಡಿದ ಮನುಷ್ಯರನ್ನು ಹೊರುವ ಗಜದಂತದ ಪಲ್ಲಕಿ. ಅನಂತರ ಸುವರ್ಣ
ಬೇರೆಯಾಗಿ ದೇವರನ್ನು ಹೊತ್ತೂಯ್ಯುವ ಪಲ್ಲಕಿಯಾಯಿತು. ಸುವರ್ಣ ಬೇರೆ ಯಾದ ಬಳಿಕ ಕೇವಲ ಗಜದಂತದ ಪಲ್ಲಕಿ ಸ್ವಾಮಿಗಳನ್ನು ಪರ್ಯಾಯ ಮೆರವಣಿಗೆಯಲ್ಲಿ ಕರೆದೊಯ್ಯುವ ಪಲ್ಲಕಿಯಾಯಿತು. 19ನೆಯ ಶತಮಾನದಲ್ಲಿ ಆಗಿ ಹೋದ ಅದ್ಭುತ ವ್ಯಕ್ತಿ ಜಮಖಂಡಿ ವಾದಿರಾಜ ಆಚಾರ್ಯರೇ (27-7-1842ರಿಂದ 5-9-1896) ಇದಕ್ಕೆ ಕಾರಣಕರ್ತರು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಜಮಖಂಡಿಯವರು. ಅವರ ಹುಟ್ಟಿಗೆ ಉಡುಪಿ, ಸೋಂದಾ ಕ್ಷೇತ್ರದ ಅನುಗ್ರಹವಿದ್ದ ಕಾರಣ ಇವೆರಡೂ ಕ್ಷೇತ್ರಗಳಿಗೆ ವಿಶೇಷ ಸೇವೆ ಸಲ್ಲಿಸಿದ್ದರು.

ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ (1808-1881) ಶಿಷ್ಯರು ವಾದಿರಾಜ ಆಚಾರ್ಯರು. ಆಚಾರ್ಯರು 1879, 1880, 1884ರಲ್ಲಿ ಮೂರು ಸಲ ಬದರಿಯಾತ್ರೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿದ್ವಾಂಸರೊಂದಿಗೆ ಗೋಷ್ಠಿಯಲ್ಲಿ ಜಯಪತಾಕೆ ಗಳಿಸಿದರು. ಅವರ ವಿದ್ವತ್‌ಗೆ ಮೆಚ್ಚಿದ ಕಾಶ್ಮೀರದ ರಾಜ ಸುವರ್ಣಾಲಂಕೃತ ಗಜದಂತದ ಪಲ್ಲಕಿಯನ್ನು ಜಯಪತಾಕೆಯೊಂದಿಗೆ ಸಮರ್ಪಿಸಿದ. ಪಲ್ಲಕಿಯನ್ನು ಆಗ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ತೆರಳಿದ ವಿದ್ಯಾಗುರು ಶ್ರೀ ವಿದ್ಯಾಧೀಶ ತೀರ್ಥರಿಗೆ ಸಮರ್ಪಿಸಿದರು. ಇದು ನಡೆದದ್ದು 1881ರಲ್ಲಿ. ಇದರ ಬಗೆಗೆ ಸಂಸ್ಕೃತ, ಆಂಗ್ಲ ಭಾಷೆಯಲ್ಲಿ ದಾಖಲೆಗಳಿವೆ.

ಶ್ರೀ ವಿದ್ಯಾಧೀಶ ತೀರ್ಥರು ಹಿಂದಿರುಗಿ ಬರುವಾಗ ಬೆಂಗಳೂರಿನಲ್ಲಿ ನಿರ್ಯಾಣ ಹೊಂದಿದರು. ಪಲ್ಲಕಿ ಅವರ ಶಿಷ್ಯ ಶ್ರೀ ವಿದ್ಯಾಪೂರ್ಣತೀರ್ಥರಿಗೆ ಬಂತು. ಶ್ರೀಪಾದರು ಪಲ್ಲಕಿಯಲ್ಲಿದ್ದ ಚಿನ್ನ ಮತ್ತು ತಮ್ಮ ಮಠದ ಚಿನ್ನವನ್ನೂ ಸೇರಿಸಿ ಶ್ರೀಕೃಷ್ಣನಿಗೆ ಸುವರ್ಣ ಪಲ್ಲಕ್ಕಿ ಮಾಡಿ ಸಮರ್ಪಿಸಿದರು.

ಶ್ರೀವಿದ್ಯಾಪೂರ್ಣತೀರ್ಥರು (1881ರಿಂದ 1935ರವರೆಗೆ ಅಧಿಪತಿಗಳಾಗಿದ್ದರು) ತಮ್ಮ ಎರಡನೆಯ ಪರ್ಯಾಯದಿಂದ (1910-12) ಮೂರನೆಯ ಪರ್ಯಾಯದ (1926-28) ಅವಧಿಯಲ್ಲಿ ಚಿನ್ನದ ಪಲ್ಲಕಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು.

ವಾದಿರಾಜ ಆಚಾರ್ಯರು ದಾಸರೂ, ವಿದ್ವಾಂಸರೂ, ಆಂಗ್ಲ ಭಾಷೆ ಬಲ್ಲವರೂ ಆಗಿದ್ದರು. ಮಾನವಾತೀತ ಶಕ್ತಿಯನ್ನು ಅನೇಕ ಬಾರಿ ತೋರಿಸಿದ್ದರು. ಅನೇಕ ವಿಶೇಷಗಳಿದ್ದರೂ ಮಧುಕರಿ ವೃತ್ತಿಯನ್ನು (ಭಿಕ್ಷೆಯಿಂದ ಆಹಾರ ಸ್ವೀಕಾರ) ಬಿಟ್ಟಿರಲಿಲ್ಲ.

ಆಕರ್ಷಕ ಕುಸುರಿ ಕಲೆ
ಚಿನ್ನವನ್ನು ಬೇರ್ಪಡಿಸಿದ ಅನಂತರ ಗಜದಂತದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣಾಪುರ ಮಠಾಧೀಶರು ಪರ್ಯಾಯ ಮೆರವಣಿಗೆಯಲ್ಲಿ ಕುಳಿತುಕೊಂಡು ಬರುತ್ತಿದ್ದರು. ಇದು 2006ರವರೆಗೂ ನಡೆದುಬಂತು. ಶಿಥಿಲಾವಸ್ಥೆಗೆ ಬಂದ ಕಾರಣ ಅದನ್ನು ಬಿಟ್ಟು ಬೇರೆ ಪಲ್ಲಕಿಯನ್ನು ಮಾಡಿಸಲಾಯಿತು. ಪಲ್ಲಕಿ ಯಲ್ಲಿ ಗಜದಂತದಲ್ಲಿ ಮಾಡಿದ ಕುಸುರಿಕಲೆಗಳು ಆಕರ್ಷಕ ವಾಗಿವೆ. ಇದನ್ನು ಕೋಣೆಯಿಂದ ಹೊರತರಲು ಹತ್ತು ಕಟ್ಟು ಮಸ್ತಾದ ವ್ಯಕ್ತಿಗಳು ಬೇಕು.

 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.