ಸಂತೋಷವೆಂಬ ಸಂಪತ್ತು…


Team Udayavani, Apr 19, 2022, 6:15 AM IST

ಸಂತೋಷವೆಂಬ ಸಂಪತ್ತು…

ಸಂಪತ್ತು ಎಂದಾಕ್ಷಣ ನಮಗೆ ನೆನಪಾಗುವುದು ಜಗತ್ತಿನಲ್ಲಿ ಅತೀ ಹೆಚ್ಚು ಬೆಲೆ, ಪ್ರಾಮುಖ್ಯವನ್ನು ಹೊಂದಿರುವ ಹಣ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಹಣ ಮಾತ್ರವೇ ತಮ್ಮ ಸಂಪತ್ತು ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಆರೋಗ್ಯ, ಸ್ನೇಹ, ಸಂಬಂಧ, ನಂಬಿಕೆ, ವಿಶ್ವಾಸ, ಪ್ರೀತಿ, ವಿದ್ಯೆ, ಸಂತೋಷ ಮೊದಲಾದವುಗಳು ನಮ್ಮ ಸಂಪತ್ತೆಂದರೆ ತಪ್ಪಾಗಲಾರದು. ಹಾಗಾಗಿ ನಮ್ಮ ಸಂಪತ್ತಿನಲ್ಲಿ ಇತರರ ಸಂತೋಷವೂ ಕೂಡ ಒಂದು ಭಾಗವಾಗಿದೆ. ಕಾಡಲ್ಲಿರುವ ಕೆಲವು ಪ್ರಾಣಿಗಳು ಒಣಹುಲ್ಲು , ನದಿಯ ನೀರು ಸೇವಿಸಿ ಅತ್ಯಂತ ಬಲಿಷ್ಠವಾಗಿ ಮೆರೆಯುತ್ತವೆ. ಋಷಿ-ಮುನಿಗಳು ಗೆಡ್ಡೆ ,ಗೆಣಸು, ಹಣ್ಣು – ಹಂಪಲುಗಳನ್ನು ಸೇವಿಸುತ್ತಾ ಜೀವನ ಸಾಗಿಸುತ್ತಾರೆ. ಇವನ್ನೆಲ್ಲ ಗಮನಿಸಿದಾಗ ಸಂತೋಷವೆಂಬುದು ಸಣ್ಣ ಸಣ್ಣ ವಿಷಯಗಳಲ್ಲಿ ಅಡಗಿವೆ ಎಂಬುದು ಅರಿವಾಗುತ್ತದೆ.

ಹಲವಾರು ಜನರು ಸುಖ- ಸಂತೋಷ ಒಂದೇ ಎಂದು ತಿಳಿದುಕೊಂಡಿ ರುತ್ತಾರೆ. ಆದರೆ ಸುಖ ಮತ್ತು ಸಂತೋಷ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿಕೊಡುತ್ತವೆ. ಒಬ್ಬ ತನಗೆ ದೊರಕಿದ ಹಣ್ಣನ್ನು ತಾನೊಬ್ಬನೇ ಯಾರಿಗೂ ತಿಳಿಯದಂತೆ ತಿಂದರೆ ಆತನಿಗೆ ಸುಖ ಸಿಗುತ್ತದೆ. ಆದರೆ ಮತ್ತೂಬ್ಬ ತನಗೆ ಸಿಕ್ಕ ಹಣ್ಣನ್ನು ಇತರರಿಗೆ ಕೊಟ್ಟು ಹಂಚಿ ತಿಂದಾಗ ಆತನಿಗೆ ಸಂತೋಷವಾಗುತ್ತದೆ. ಇಲ್ಲಿ ಹಂಚಿಕೆಯ ಮೂಲ ಸಂತೋಷ, ಮೊದಲನೆಯವನು ತನ್ನ ಸ್ವಪ್ರ ಯೋಜನವನ್ನು ಗುರಿಯಾಗಿಸಿಟ್ಟು ಕೊಂಡಿದ್ದರೆ ಆತನಿಗೆ ಸುಖ ಸಿಗು ತ್ತದೆಯೇ ಹೊರತು ಸಂತೋಷವಲ್ಲ. ತನಗೆ ಮಾತ್ರ ಪ್ರಯೋಜನವಾಗಲಿ ಎಂದುಕೊಳ್ಳುವುದು ಸುಖ. ಅದೇ ಸುಖವನ್ನು ಇತರ ಜನರೊಂದಿಗೆ ಹಂಚಿಕೊಂಡು ಅಥವಾ ಸಮಯ ಬಂದಾಗ ಅದನ್ನು ಬಿಟ್ಟುಕೊಟ್ಟು ಸುಖೀಸುವುದೇ ಸಂತೋಷ.

ಸ್ವಾರ್ಥ ಎಂಬುದು ತನ್ನಲ್ಲಿರುವುದೆಲ್ಲ ತನ್ನದೇ ಎಂದು ಬೀಗುತ್ತಾ ತಾನೊಬ್ಬನೇ ಸುಖ ಪಡುವಂಥದ್ದು. ಒಂದು ಮನೆಯ ಸಂಪತ್ತು ಸಂತೋಷ. ಆ ಸಂತೋಷ ಒಬ್ಬನಾಗಿದ್ದರೆ ಅದು ಆ ಮನೆಯ ಸಂತೋಷವೆಂದೆನಿಸಿಕೊಳ್ಳುವುದಿಲ್ಲ.

ಒಂದು ಮನೆಯ ಸಂತೋಷವೆಂದರೆ ಅದು ಕೇವಲ ಆ ಮನೆಯ ಯಜಮಾನನ ಖುಷಿಯಲ್ಲ ಆ ಮನೆಯ ಸದಸ್ಯರ ಒಗ್ಗಟ್ಟಿನಲ್ಲಿ ಆ ಸಂತೋಷವಿರುತ್ತದೆ. ಆಗ ನಮಗೆ ಈ ಜೀವನದ ನಿಜವಾದ ಸಂತೋಷದ ಅರಿವು ಉಂಟಾಗುತ್ತದೆ.

ನಮಗೆಲ್ಲರಿಗೂ ರಾಜಕುಮಾರ ಸಿದ್ದಾರ್ಥ ಬುದ್ಧನಾದ ಕತೆ ತಿಳಿದಿದೆ. ಸಿದ್ದಾರ್ಥನಿಗೆ ಜೀವನದಲ್ಲಿ ಸುಖದ ಕೊರತೆಯೇ ಇರಲಿಲ್ಲ. ಆತ ಬೆಳೆದದ್ದು ರಾಜ ವೈಭವದಲ್ಲಿಯೇ. ದುಃಖ, ನೋವು ಎಂದರೆ ಏನೆಂಬುದೇ ಆತನಿಗೆ ತಿಳಿದಿರಲಿಲ್ಲ, ಆದರೆ ವಿಧಿಯು ಆ ಸುಖವನ್ನು ಶಾಶ್ವತವಾಗಿ ನೀಡಲಿಲ್ಲ. ತನ್ನೊಬ್ಬನ ಪಾಲಿಗೆ ಮಾತ್ರ ಇದ್ದ ಆ ಸುಖದಲ್ಲಿ ಅವನ ಮನಸ್ಸಿಗೆ ನೆಮ್ಮದಿ ತರುವ ಸಂತೋಷ ಲಭಿಸಲಿಲ್ಲ. ತಾನೊಬ್ಬನೇ ಸುಖದ ನಡುವೆ ಇದ್ದರೇನಾಯಿತು? ಅದರಿಂದ ಬೇರೆಯವರಿಗೆ ಪ್ರಯೋಜನವಿಲ್ಲ ಎಂಬುದನ್ನು ಅರಿತನು. ಎಲ್ಲರೂ ಸುಖ ಪಡುವಂತಾದರೆ ಅಥವಾ ದುಃಖದಿಂದ ಪಾರಾಗುವುದಾದರೆ ಅದು ಸಂತೋಷದ ವಿಷಯವೆಂದು ತಿಳಿದು ಸಂತೋಷದ ಅನ್ವೇಷಣೆಗಾಗಿ ಇದ್ದ ಸುಖವನ್ನು ತ್ಯಾಗ ಮಾಡಿ ಹೊರಟು ಸಾಧನೆ ಮಾಡಿ ಬುದ್ಧನೆಂದು ಕರೆಸಿಕೊಂಡು ಸಂತೋಷದ ನೆಲೆಯನ್ನು ಕಂಡ. ಆ ಸಂತೋಷದ ಅನುಭವವನ್ನು ಲೋಕಕ್ಕೇ ತಿಳಿಸಿದ.

ಯಾವುದೇ ಧರ್ಮ ಅಥವಾ ಮಹಾನ್‌ ವ್ಯಕ್ತಿಗಳು ಸುಖವೇ ದೊಡ್ಡ ಸಾಧನೆ ಎಂದು ಹೇಳಲಿಲ್ಲ. ಸುಖದ ತ್ಯಾಗದಿಂದ ಸಿಗುವ ಸಂತೋಷವೇ ಸಾಧನೆಯೆಂದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಿಳಿಸಿಕೊಟ್ಟಿದೆ. ಆ ವಿಚಾರ ರಾಮ-ಸೀತೆ, ದ್ರೌಪದಿ – ಪಾಂಡವರ ಜೀವನದಲ್ಲಿ ಅಳವಡಿಕೆಯಾಗಿದೆ. ಹಾಗಾಗಿ ಸಂತೋಷಂ ಜನಯೇತ್‌ ಪ್ರಾಜ್ಞಃ ತದೇವೇಶ್ವರ ಪೂಜನಮ್‌’ ಎಂಬಂತೆ ಯಾವುದೇ ವಿಷಯದಲ್ಲೂ ನಾವು ಮಾತ್ರ ಸಂತೋಷ ಪಡದೆ ಇತರರಿಗೂ ಸಂತೋಷವಾಗುವಂತೆ ನಡೆದುಕೊಳ್ಳಬೇಕು.

- ಸೌಮ್ಯಾ, ಕಾರ್ಕಳ

ಟಾಪ್ ನ್ಯೂಸ್

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.