ಚಾತುರ್ಮಾಸ್ಯ ಏಕಾದಶಿಯ ಹರಿವಾಣ ನೃತ್ಯ ಸೇವೆ!
Team Udayavani, Jul 3, 2020, 6:12 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಸ್ವಾಮೀಜಿ ಮತ್ತು ಉಡುಪಿಯ ಸ್ವಾಮೀಜಿಯವರು ಎಲ್ಲಿ ಮೊಕ್ಕಾಂ ಇರುತ್ತಾರೋ ಅಲ್ಲಿ ಪ್ರಥಮ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿವರೆಗೆ ಚಾತುರ್ಮಾಸ್ಯದ ನಾಲ್ಕು ತಿಂಗಳ ಪ್ರತೀ ಏಕಾದಶಿಯಂದು ರಾತ್ರಿ ಸ್ವಾಮೀಜಿಯವರು ಹರಿವಾಣ ನೃತ್ಯ ಸೇವೆಯನ್ನು ನಡೆಸುತ್ತಾರೆ.
ರಾತ್ರಿ ಪೂಜೆಯಾದ ಬಳಿಕ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿಯವರು ಕೃಷ್ಣನ ಗರ್ಭಗುಡಿ ಹೊರಗಿನ ಚಂದ್ರಶಾಲೆಯಲ್ಲಿ ಕುಳಿತಿರುತ್ತಾರೆ. ಆಗ ಸೂರ್ಯವಾದ್ಯವೇ ಮೊದಲಾದ ನಾಲ್ಕು ಬಗೆಯ ವಾದ್ಯೋಪಕರಣಗಳನ್ನು ಕಲಾವಿದರು ನುಡಿಸುತ್ತಾರೆ. ಅನಂತರ ಸಂಕೀರ್ತನೆ ನಡೆಯುತ್ತದೆ. ಭಾಗವತರು ಪದ್ಯಗಳನ್ನು ಹಾಡುತ್ತಾರೆ. ಪುರಾಣ ಹೇಳುವವರು ಸಾಂಕೇತಿಕವಾಗಿ ಪುರಾಣ ಪ್ರವಚನ ಮಾಡುತ್ತಾರೆ.
ತೀರ್ಥಮಂಟಪದೆದುರು ಬಂದು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ. ಆಗ ಭಾಗವತರು “ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ…|’ ದಾಸರ ಹಾಡನ್ನು ಹಾಡುತ್ತಾರೆ. ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಹೂವುಗಳನ್ನು ಹರಿವಾಣದಲ್ಲಿರಿಸಿ ಹರಿವಾಣವನ್ನು ತಲೆ ಮೇಲೆ ಹೊತ್ತು ಸ್ವಾಮೀಜಿ ಸರಳವಾಗಿ ನರ್ತಿಸುತ್ತಾರೆ.
ಏಕಾದಶಿ ದಿನ ನಿರ್ಜಲ ಉಪವಾಸದಲ್ಲಿದ್ದು ರಾತ್ರಿ ಪೂಜೆ ಯಾದ ಬಳಿಕ ಪಾಂಡುರಂಗ ಈ ಜಗಕ್ಕೆ ಮುಖ್ಯಸ್ಥನೆಂಬುದು ಅನುಸಂಧಾನ ಮಾಡಿ ಸಾರುವುದು ಹಾಡಿನ ಸಾರ. ರಾತ್ರಿ ಪುರಾಣ ಪ್ರವಚನ, ಸಂಕೀರ್ತನ, ನರ್ತನದಿಂದ ಜಾಗರಣೆ ಇರಬೇಕೆಂಬ ಸಂಕೇತಾರ್ಥದಲ್ಲಿ ಈ ಆಚರಣೆಗಳು ಚಾಲ್ತಿಗೆ ಬಂದಿವೆ. ಮರುದಿನ ದ್ವಾದಶಿಯಾದ ಕಾರಣ ಮುಂಜಾನೆ 2 ಗಂಟೆಗೆ ಸ್ವಾಮೀಜಿ ಎದ್ದು ಎಲ್ಲ ಪೂಜೆಗಳನ್ನು ಬೇಗ ನೆರವೇರಿಸುತ್ತಾರೆ. ಹೀಗಾಗಿ ಏಕಾದಶಿ ರಾತ್ರಿ ಹೆಚ್ಚುc ಕಡಿಮೆ ನಿದ್ದೆ ಪ್ರಮಾಣ ಕಡಿಮೆ ಅಂದರೆ ಜಾಗರಣೆ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ