ಕಾಪು ತಾಲೂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಮಳೆ ಅಡ್ಡಿ
Team Udayavani, Nov 4, 2021, 5:58 PM IST
ಕಾಪು : ಕಾಪು ತಾಲೂಕಿನಾದ್ಯಂತ ದೀಪಾವಳಿಯ ಸಂಭ್ರಮಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದೆ. ಗುರುವಾರ ಸಂಜೆ 4.30 ರಿಂದ ನಿರಂತರ ಮಳೆ ಸುರಿಯುತ್ತಿದ್ದು ಗದ್ದೆ, ರಸ್ತೆ, ಚರಂಡಿಗಳಲ್ಲಿ ಮಳೆ ನೀರು ಕೃತಕ ನೆರೆಯಂತೆ ಹರಿಯಲಾರಂಭಿಸಿದೆ.
ಕಾಪು ಪೇಟೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ಹೂವು, ತರಕಾರಿ, ಪಟಾಕಿ ವ್ಯಾಪಾರ ಒಮ್ಮೆಲೆ ಸ್ತಬ್ಧಗೊಂಡಿದ್ದು, ಜನ ಸಂಚಾರವಿಲ್ಲದೇ ಪೇಟೆ ಬಿಕೋ ಎನ್ನುತ್ತಿದೆ.
ಮಳೆ, ಮೋಡ ಮತ್ತು ಗುಡುಗು, ಸಿಡಿಲಿನಿಂದಾಗಿ 5 ಗಂಟೆಯಿಂದಲೇ ಕತ್ತಲಾರಂಭಿಸಿದ್ದು, ವಿದ್ಯುತ್ ಕೂಡಾ ಕೈ ಕೊಟ್ಟಿದ್ದರಿಂದ ಜನ ಪರದಾಡುವಂತಾಗಿದೆ.
ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗಿದ್ದು ಸಾಂಪ್ರದಾಯಿಕವಾಗಿ ನಡೆಯುವ ಬಲೀಂದ್ರ ಪೂಜೆ, ಸೊಡರ ಹಬ್ಬ, ತುಳಸಿ ಪೂಜೆ ಸಹಿತ ಇನ್ನಿತರ ಸಂಭ್ರಮಾಚರಣೆಗೆ ತೊಡಕುಂಟಾಗಿದೆ.
ಇದನ್ನೂ ಓದಿ : ಕಾಪು ಪೇಟೆಯಲ್ಲಿ ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ, ವಹಿವಾಟು
ಗದ್ದೆಗಳಲ್ಲಿ ನೀರು ತುಂಬಿ ಕೊಂಡಿದ್ದು ಬಲೀಂದ್ರ ಪೂಜೆಗೂ ಅಡ್ಡಿಯುಂಟಾಗಿದೆ. ಭರ್ಜರಿಯಾಗಿ ಪಟಾಕಿ ಮಾರಾಟ ನಡೆದಿದ್ದರೂ, ಪಟಾಕಿ ಬಿಡುವುದಕ್ಕೂ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ.
ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ವ್ಯವಸ್ಥೆಯಲ್ಲೂ ವೃತ್ಯಯವುಂಟಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ