Cheetah: ದಪ್ಪ ತುಪ್ಪಳ ಬೆಳೆಸಿಕೊಳ್ಳದ ಚೀತಾ ಆಮದು
-ನಮೀಬಿಯ ಚೀತಾಗಳ ಸಾವಿಗೆ ಕಾರಣ ಪತ್ತೆ-ಭಾರತದ ಪರಿಸರಕ್ಕೆ ಹೊಂದುವ ಚೀತಾಗಳನ್ನು ತರಿಸಲು ಕ್ರಮ
Team Udayavani, Sep 16, 2023, 9:23 PM IST
ನವದೆಹಲಿ: ನಮೀಬಿಯದ ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಂದು ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗುತ್ತದೆ. ಅಲ್ಲಿಂದ ಬಂದ ಹಲವು ಚೀತಾಗಳು ಸಾವನ್ನಪ್ಪಿವೆ. ಇದರ ನಡುವೆಯೇ ಹೊಸತಾಗಿ ಚೀತಾಗಳನ್ನು ತರಿಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಯೋಜಿಸಿದೆ. ಈ ಬಾರಿ ಚಳಿಗಾಲದ ವೇಳೆ ದಪ್ಪ ತುಪ್ಪಳವನ್ನು ಬೆಳೆಸಿಕೊಳ್ಳದ ಚೀತಾಗಳನ್ನೇ ತರಿಸಿಕೊಳ್ಳಲಾಗುತ್ತದೆ! ಕಾರಣ ಇದುವರೆಗೆ ಸಾವನ್ನಪ್ಪಿರುವ ನಮೀಬಿಯ ಚೀತಾಗಳ ಪೈಕಿ ಮೂರು ದಪ್ಪ ತುಪ್ಪಳ ಬೆಳೆಸಿಕೊಂಡಿದ್ದರಿಂದಲೇ ಸಾವನ್ನಪ್ಪಿರುವುದು.
ಮುಂದಿನ ಬಾರಿ ದ.ಆಫ್ರಿಕಾದಿಂದ ತರಿಸಿಕೊಳ್ಳುವ ಚೀತಾಗಳನ್ನು ಮಧ್ಯಪ್ರದೇಶದ ಗಾಂಧಿಸಾಗರ ವನ್ಯಜೀವಿ ಧಾಮದಲ್ಲಿ ಬಿಡಲಾಗುತ್ತದೆ. ಕೆಲವನ್ನು ನೌರಾದೇಹಿಯಲ್ಲಿ ಬಿಡಲಾಗುತ್ತದೆ. ಕುನೋ ಪಾರ್ಕ್ನಲ್ಲಿ ಹೊಸ ಚೀತಾ ಬಿಡಲು ಅಗತ್ಯ ಜಾಗವಿಲ್ಲದಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.
ಸಾವಿಗೆ ಕಾರಣವೇನು?: ಆಫ್ರಿಕಾದ ಚಳಿಗಾಲವನ್ನು ಅನುಭವಿಸಿದ್ದ ನಮೀಬಿಯ ಚೀತಾಗಳು, ಭಾರತದಲ್ಲಿ ಬೇಸಿಗೆಯಿದ್ದರೂ ಆ ಸಮಯದಲ್ಲಿ ದಪ್ಪ ತುಪ್ಪಳವನ್ನು ಬೆಳೆಸಿಕೊಂಡಿದ್ದವು. ಎಂದಿನಂತೆ ಚಳಿಗಾಲದ ನಿರೀಕ್ಷೆಯಲ್ಲಿದ್ದ ಅವು ಇಲ್ಲಿ ದಪ್ಪಚರ್ಮ ಬೆಳೆಸಿಕೊಂಡಿದ್ದರಿಂದ, ತುರಿಕೆ ಶುರುವಾಯಿತು. ಅದರಿಂದ ತಮ್ಮ ಕತ್ತನ್ನು ಚೀತಾಗಳು, ಮರಕ್ಕೆ, ನೆಲಕ್ಕೆ ಎಲ್ಲೆಂದರಲ್ಲಿ ಉಜ್ಜತೊಡಗಿದವು. ಇದರಿಂದ ಸೋಂಕು ಉಂಟಾಗಿ ಅವು ಸಾವನ್ನಪ್ಪಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಎಸ್.ಪಿ.ಯಾದವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್