Cars: ವಿದೇಶಗಳಲ್ಲಿ ಭಾರತೀಯ ನಿರ್ಮಿತ “ಕಾರು”ಬಾರು- ಭಾರತದ ವಾಹನಗಳಿಗೆ ಹೆಚ್ಚಿದ ಬೇಡಿಕೆ
- ಕಳೆದ ವರ್ಷ 2.61 ಲಕ್ಷ ಕಾರುಗಳು ರಫ್ತು
Team Udayavani, Jan 7, 2024, 9:45 PM IST
ಮುಂಬಯಿ: ಭಾರತದ ಕಾರು ಮಾರುಕಟ್ಟೆಯು ವಿದೇಶಗಳಲ್ಲೂ ಹವಾ ಎಬ್ಬಿಸುತ್ತಿದ್ದು, ಮೇಡ್ ಇನ್ ಇಂಡಿಯಾ ಕಾರುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ.
ಟೊಯೊಟಾ, ವೊಕ್ಸ್ವ್ಯಾಗನ್, ಹ್ಯುಂಡೈ, ಮಹೀಂದ್ರಾ, ಟಾಟಾ ಮೋಟಾರ್ಸ್, ಹೋಂಡಾ ಮತ್ತು ಸ್ಕೋಡಾ ಕಂಪೆನಿಯ ಕಾರುಗಳ ರಫ್ತು 2023ರಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಾರು ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿ ಕಳೆದ ವರ್ಷ ಬರೋಬ್ಬರಿ 2,61,700 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
2023ರಲ್ಲಿ ಭಾರತದಿಂದ ಒಟ್ಟು 6,71,384 ಕಾರುಗಳು ರಫ್ತಾಗಿದ್ದು, 2022ಕ್ಕೆ ಹೋಲಿಸಿದರೆ ಇದು ಶೇ. 4ರಷ್ಟು ಏರಿಕೆ ಕಂಡಿದೆ ಎಂದು ಜಾಟೋ ಡೈನಾಮಿಕ್ಸ್ನ ದತ್ತಾಂಶ ತಿಳಿಸಿದೆ. ಭಾರತದಿಂದ ರಫ್ತಾದ ಒಟ್ಟು ಕಾರುಗಳ ಪೈಕಿ ಶೇ. 40ರಷ್ಟು ಮಾರುತಿ ಸುಜುಕಿಯದ್ದು ಎಂದಿದೆ.
ಆಟೋಮೊಬೈಲ್ ಮತ್ತು ಬಿಡಿಭಾಗಗಳ ಉದ್ದಿಮೆಗಳಿಗೆ ಭಾರತ ಸರಕಾರ ಘೋಷಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ (ಪಿಎಲ್ಐ) ಯೋಜನೆಯಿಂದಾಗಿ ವಿದ್ಯುತ್ಚಾಲಿತ ವಾಹನಗಳ ತಯಾರಿಕೆಗೆ ಉತ್ತೇಜನ ಸಿಕ್ಕಿದ್ದು ಕೂಡ ರಫ್ತು ಹೆಚ್ಚಳವಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಇದೇ ವೇಳೆ 2023ರ ಒಳಗಾಗಿ ದೇಶದಲ್ಲಿ ತಯಾರಾಗುವ ಪ್ರಯಾಣಿಕ ವಾಹನಗಳ ಪೈಕಿ ಶೇ. 50ರಷ್ಟು ರಫ್ತಾಗುವಂತೆ ಗುರಿ ಹಾಕಿಕೊಳ್ಳಿ ಎಂದು ಆಟೋಮೊಬೈಲ್ ಸಂಸ್ಥೆಗಳಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಕರೆ ನೀಡಿದ್ದಾರೆ.
ಬೇಡಿಕೆ ಹೆಚ್ಚಲು ಕಾರಣ?
– ಭಾರತದಲ್ಲಿ ಉತ್ಪಾದನೆ ವೆಚ್ಚ ಕಡಿಮೆ
– ಕೌಶಲಯುತ ಮಾನವ ಸಂಪನ್ಮೂಲ
– ಕಾರ್ಮಿಕ ವೆಚ್ಚವೂ ಕಡಿಮೆ
– ವಿಶ್ವ ದರ್ಜೆಯ ಪೂರೈಕೆದಾರರ ಲಭ್ಯತೆ
2023ರಲ್ಲಿ ರಫ್ತಾದ ಕಾರುಗಳ ಸಂಖ್ಯೆ ಕಂಪೆನಿ ಕಾರುಗಳು ಶೇಕಡಾವಾರು ಹೆಚ್ಚಳ
ಮಾರುತಿ ಸುಜುಕಿ 2,61,700 1
ಹ್ಯುಂಡೈ 1,64,950 11
ವೋಕ್ಸ್ವ್ಯಾಗನ್ 40,920 29
ಹೋಂಡಾ 25,527 9
ಟೊಯೊಟಾ 16,000 5.9
ಮಹೀಂದ್ರಾ 12,555 28
ಟಾಟಾ ಮೋಟಾರ್ಸ್ 2,194 57
ಸ್ಕೋಡಾ 1,530 431
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ