Politics: ಸಮಾನ ತೆರಿಗೆ ಪಾಲಿಗಾಗಿ ಪ್ರತ್ಯೇಕ ರಾಷ್ಟ್ರ ಬೇಡಿಕೆ: ಡಿಕೆಶಿ
Team Udayavani, Feb 3, 2024, 10:54 PM IST
ಕಲಬುರಗಿ: ಕೇಂದ್ರ ಸರಕಾರದ ತೆರಿಗೆ ಪಾಲನ್ನು ಸಮನಾಗಿ ಮತ್ತು ನ್ಯಾಯಯುತವಾಗಿ ಹಂಚಿಕೆ ಮಾಡುತ್ತಿಲ್ಲ. ಇದರಿಂದ ಅಸಮಾನತೆ ಉಂಟಾಗುತ್ತಿದೆ. ಅಲ್ಲದೆ ಒಗ್ಗಟ್ಟಿನ ಭಾವನೆಗಿಂತ ಒಡೆದಾಳುವ ಭಾವ ಹೆಚ್ಚಾಗುತ್ತಿದೆ. ಅದಕ್ಕಾಗಿ ಸಂಸದ ಡಿ.ಕೆ.ಸುರೇಶ ಪ್ರತ್ಯೇಕತೆ ಧ್ವನಿ ಎತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಭಾರತವನ್ನು ಒಗ್ಗಟ್ಟಾಗಿ ಇಡಬೇಕು, ದೇಶದ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಹಿತದಿಂದ ಧ್ವನಿ ಎತ್ತಿದ್ದಾರೆ. ಕೇಂದ್ರದಿಂದ ಬರಬೇಕಾಗಿರುವ ನಮ್ಮ ಪಾಲು ಕೇಳುವುದರಲ್ಲಿ ಮತ್ತು ಅದು ನ್ಯಾಯಯುತವಾಗಿ ಸಿಗದೇ ಇದ್ದಾಗ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷ ಭಾರತವನ್ನು ಸದಾ ಒಗ್ಗಟ್ಟಾಗಿ ಇರಿಸಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ಬಿಜೆಪಿಗರಿಗೆ ಮರ್ಯಾದೆ ಇದೆಯಾ?
ನಮ್ಮ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರಿಗೆ ಮಾನ, ಮರ್ಯಾದೆ ಇದೆ ಅನ್ನಿಸುತ್ತದೇನು? ನಮ್ಮ ತೆರಿಗೆ ಪಾಲು ನಮಗೆ ಕೊಡಲು ಮೀನಮೇಷ ಎಣಿಸುವ ಕೇಂದ್ರದ ಧೋರಣೆ ಪ್ರಶ್ನಿಸುವ ಅಥವಾ ಕೊನೆ ಪಕ್ಷ ಪ್ರಧಾನಿ ಬಳಿ ಹೋಗಿ ನೀವು ತೆರಿಗೆ ಪಾಲು ಕೊಡದಿದ್ದರೆ ಕನ್ನಡಿಗರಿಗೆ ಅನ್ಯಾಯ ಆಗುತ್ತದೆ. ಈ ವರ್ಷ ಬರಗಾಲ ಬೇರೆ ಬಿದ್ದಿದೆ. ಹಣ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳುವಷ್ಟು ಧೈರ್ಯವೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ ಎಂದರು.
ಬಿಜೆಪಿಗರಿಗೆ ಮರ್ಯಾದೆ ಇದೆಯಾ?
ನಮ್ಮ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರಿಗೆ ಮಾನ, ಮರ್ಯಾದೆ ಇದೆ ಅನ್ನಿಸುತ್ತದೇನು? ನಮ್ಮ ತೆರಿಗೆ ಪಾಲು ನಮಗೆ ಕೊಡಲು ಮೀನಮೇಷ ಎಣಿಸುವ ಕೇಂದ್ರದ ಧೋರಣೆ ಪ್ರಶ್ನಿಸುವ ಅಥವಾ ಕೊನೆ ಪಕ್ಷ ಪ್ರಧಾನಿ ಬಳಿ ಹೋಗಿ ನೀವು ತೆರಿಗೆ ಪಾಲು ಕೊಡದಿದ್ದರೆ ಕನ್ನಡಿಗರಿಗೆ ಅನ್ಯಾಯ ಆಗುತ್ತದೆ. ಈ ವರ್ಷ ಬರಗಾಲ ಬೇರೆ ಬಿದ್ದಿದೆ. ಹಣ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳುವಷ್ಟು ಧೈರ್ಯವೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ ಎಂದರು.
ಸಿಎಂ ತಿಲಕ ನಿರಾಕರಿಸಿಲ್ಲ
ಸಿಎಂ ಸಿದ್ದರಾಮಯ್ಯ ಕುಂಕುಮ ಇಡುವುದಿಲ್ಲ ಎಂದು ಹೇಳಿದವರ್ಯಾರು? ತಿಲಕ ಇಟ್ಟುಕೊಳ್ಳಲು ಅವರು ಯಾವತ್ತೂ ನಿರಾಕರಿಸಿಲ್ಲ. ದೇವಸ್ಥಾನ, ಕಾರ್ಯಕ್ರಮಗಳಿಗೆ ಹೋದಾಗ ತಿಲಕ ಇಟ್ಟು ಕೊಳ್ಳುತ್ತಾರೆ. ಹಾಗಂತ ಮಹಿಳೆಯರಂತೆ ಹಣೆ ತುಂಬ ಕುಂಕುಮ ಹಚ್ಚಿ ಕೊಳ್ಳುವುದಿಲ್ಲ. ಅಲರ್ಜಿ ಕಾರಣಕ್ಕೆ ತಿಲಕವಿಡಲು ನಿರಾಕ ರಿಸಿರಬಹುದು. ನನಗೆ ಸುಗಂಧರಾಜ ಹೂವು ಅಲರ್ಜಿ ಇದೆ. ಹಾಗಾದರೆ ನಾವು ಹೂವನ್ನು ನಿರಾಕರಿಸಿದಂತಾಗುತ್ತದೋ ಎಂದು ಡಿಕೆಶಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು