ISRO: ಯುವಕರಿಗೆ ಪ್ರೇರೇಪಿಸಲು ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ- ಮುಂದಿನ ತಿಂಗಳು ಲೋಕಾರ್ಪಣೆ
Team Udayavani, Oct 26, 2023, 12:00 AM IST
ತಿರುವನಂತಪುರ: ಚಂದ್ರಯಾನ-3 ಹಾಗೂ ಆದಿತ್ಯ-ಎಲ್1 ಯಶಸ್ಸಿನ ನಂತರ ಇದೀಗ ಯುವಕರಿಗೆ ಸ್ಫೂರ್ತಿ ತುಂಬಲು ಆತ್ಮಚರಿತ್ರೆಯನ್ನು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ರಚಿಸಿದ್ದಾರೆ.
ಮಲಯಾಳಂನಲ್ಲಿ “ನಿಲುವು ಕುಡಿಚ್ಚ ಸಿಂಹಗಳ್”(ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಹೆಸರಿನಲ್ಲಿ ಸೋಮನಾಥ್ ಅವರ ಆತ್ಮಚರಿತ್ರೆಯನ್ನು ಕೇರಳ ಮೂಲದ ಲಿಬಿ ಪಬ್ಲಿಕೇಶನ್ಸ್ ಹೊರತರುತ್ತಿದ್ದು, ನವೆಂಬರ್ನಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ವೆಚ್ಚ ತಗ್ಗಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ದುಡ್ಡು ಉಳಿಸಲು ಸಾರಿಗೆ ಬಸ್ ಬದಲು ಹಳೆಯ ಸೈಕಲ್ನಲ್ಲಿ ಸಂಚಾರ.. ಹೀಗೆ ಅನೇಕ ಸಂಗತಿಗಳು ಸೋಮನಾಥ್ ಅವರ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ.
“ಇದು ನಿಜವಾಗಿಯೂ ಎಂಜಿನಿಯ ರಿಂಗ್ ಅಥವಾ ಬಿಎಸ್ಸಿ ಸೇರಬೇಕೇ ಎಂದು ತಿಳಿಯದ ಹಳ್ಳಿಯ ಸಾಮಾನ್ಯ ಯುವಕನ ಕಥೆಯಾಗಿದೆ. ಆತನ ಉಭಯ ಸಂಕಟ, ನಂತರ ಜೀವನದಲ್ಲಿ ಮಾಡಿದ ಸರಿಯಾದ ನಿರ್ಧಾರ ಗಳು ಹಾಗೂ ಭಾರತದಂತಹ ದೇಶದಲ್ಲಿ ಅವನಿಗೆ ದೊರೆತ ಅವಕಾಶಗಳ ಕುರಿತಾಗಿದೆ’ ಎಂದು ಸೋಮನಾಥ್ ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.
“ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಜೀವನದಲ್ಲಿ ಹಲವು ಸಮಸ್ಯೆಗಳ ನಡುವೆಯೂ ಕನಸುಗಳನ್ನು ಬೆನ್ನತ್ತಲು ಯುವಕರಿಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ’ ಎಂದು ಸೋಮನಾಥ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್