Team India: ಪದಾರ್ಪಣೆಯ ಹಾದಿಯಲ್ಲಿ ಜುರೆಲ್, ಸರ್ಫ್ರಾಜ್
Team Udayavani, Feb 13, 2024, 11:01 PM IST
ರಾಜ್ಕೋಟ್: ಗಾಯ ದಿಂದ ತತ್ತರಿಸಿರುವ ಟೀಮ್ ಇಂಡಿಯಾ ರಾಜ್ಕೋಟ್ ಟೆಸ್ಟ್ ಪಂದ್ಯ ಕ್ಕಾಗಿ ನೂತನ ಸ್ವರೂಪದ ತಂಡವನ್ನು ಆರಿಸುವ ಅನಿವಾರ್ಯತೆಗೆ ಸಿಲುಕಿದೆ. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಧ್ರುವ ಜುರೆಲ್ ಮತ್ತು ಬ್ಯಾಟರ್ ಸರ್ಫ್ರಾಜ್ ಖಾನ್ ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತಗೊಂಡಿದೆ.
ಇಬ್ಬರೂ ಭಾರತ ತಂಡದೊಂದಿಗೆ ಮಂಗಳವಾರ ಸುದೀರ್ಘ ಅಭ್ಯಾಸ ನಡೆಸಿದರು. ಜುರೆಲ್ ಗಲ್ಲಿ ವಿಭಾಗ ದಲ್ಲಿ, ಸರ್ಫ್ರಾಜ್ ಮೊದಲ ಸ್ಲಿಪ್ನಲ್ಲಿ ಫೀಲ್ಡಿಂಗ್ ನಡೆಸಿದ್ದು ಕಂಡುಬಂತು. ಅಬುಧಾಬಿಯಿಂದ ಆಗಮಿಸಿದ ಇಂಗ್ಲೆಂಡ್ ಕ್ರಿಕೆಟಿಗರೂ ಮೊದಲ ಸುತ್ತಿನ ಅಭ್ಯಾಸ ನಡೆಸಿದರು.
ಗಿಲ್ ಅಭ್ಯಾಸಕ್ಕೆ ಗೈರು
ವಿಶಾಖಪಟ್ಟಣದಲ್ಲಿ ಶತಕ ಬಾರಿ ಸಿದ ಶುಭಮನ್ ಗಿಲ್ ಅಭ್ಯಾಸಕ್ಕೆ ಇಳಿಯಲಿಲ್ಲ. ದ್ವಿತೀಯ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ಗಿಲ್ ಅವರ ಬಲಗೈ ತೋರುಬೆರಳಿಗೆ ಗಾಯವಾ ಗಿತ್ತು. ಹೀಗಾಗಿ ದ್ವಿತೀಯ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ಗೆ ಇಳಿದಿರಲಿಲ್ಲ.
ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿರುವುದರಿಂದ ಹಾಗೂ ಕೆ.ಎಲ್. ರಾಹುಲ್ ತಂಡದಿಂದ ಬೇರ್ಪಟ್ಟ ಕಾರಣ ಸರ್ಫ್ರಾಜ್ ಖಾನ್ ಅವರ ಹಾದಿ ಸುಗಮಗೊಂಡಿದೆ. ಅವರ ಸುದೀರ್ಘ ಕಾಯುವಿಕೆಗೊಂದು ಅಂತ್ಯ ಲಭಿಸಲಿದೆ. ಹಾಗೆಯೇ ಕೀಪರ್ ಕೆ.ಎಸ್. ಭರತ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಸತತ 7 ಟೆಸ್ಟ್ಗಳಲ್ಲಿ ಇವರಿಂದ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. ಕೀಪಿಂಗ್ ಕೂಡ ಗಮನಾರ್ಹ ಮಟ್ಟದಲಿಲ್ಲ. ಹೀಗಾಗಿ ಧ್ರುವ ಜುರೆಲ್ಗೆ ಟೆಸ್ಟ್ ತಂಡದ ಬಾಗಿಲು ತೆರೆಯುವ ಎಲ್ಲ ಸಾಧ್ಯತೆ ಇದೆ.
ಅಭ್ಯಾಸ ನಡೆಸಿದ ಜಡೇಜ
ಗಾಯಾಳಾಗಿದ್ದ ರವೀಂದ್ರ ಜಡೇಜ ಚೇತರಿಸಿಕೊಂಡಿದ್ದು, ಮಂಗಳವಾರ ಅಭ್ಯಾಸ ನಡೆಸಿದರು. ಹೀಗಾಗಿ ಈ ಸವ್ಯಸಾಚಿ ತವರಿನ ಟೆಸ್ಟ್ ಆಡುವುದು ಬಹುತೇಕ ಖಾತ್ರಿಯಾಗಿದೆ. ಇಲ್ಲವಾ ದರೆ ಈ ಸ್ಥಾನ ಅಕ್ಷರ್ ಪಟೇಲ್ ಪಾಲಾಗಲಿದೆ.
ವಿಶಾಖಪಟ್ಟಣದಲ್ಲಿ ಟೆಸ್ಟ್ ಪದಾ ರ್ಪಣೆ ಮಾಡಿದ ರಜತ್ ಪಾಟಿದಾರ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ ತಂಡದಿಂದ ಬೇರ್ಪಡುವ ಸಾಧ್ಯತೆ ಇಲ್ಲ. ಇವರಿಗೆ ಇನ್ನೊಂದು ಅವಕಾಶ ನೀಡುವ ಯೋಜನೆ ಆಡಳಿತ ಮಂಡಳಿ ಯದ್ದು. ಹೀಗಾಗಿ ರಾಹುಲ್ ಸ್ಥಾನಕ್ಕೆ ಬಂದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಟೆಸ್ಟ್ಕ್ಯಾಪ್ ಧರಿಸುವ ಸಾಧ್ಯತೆ ತೀರಾ ಕಡಿಮೆ.
ರೋಹಿತ್, ಜೈಸ್ವಾಲ್, ಗಿಲ್, ಪಾಟಿದಾರ್, ಸರ್ಫ್ರಾಜ್, ಜಡೇಜ, ಜುರೆಲ್… ಹೀಗೆ ಭಾರತದ ಬ್ಯಾಟಿಂಗ್ ಲೈನ್ಅಪ್ ಗೋಚರಿಸುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿ ಅಶ್ವಿನ್, ಬುಮ್ರಾ, ಕುಲದೀಪ್ ಜತೆಗೆ ಸಿರಾಜ್ ಮರಳುವ ಸಾಧ್ಯತೆ ಇದೆ.
ಜಸ್ಪ್ರೀತ್ ಬುಮ್ರಾ, ದೇವದತ್ತ ಪಡಿಕ್ಕಲ್ ಮತ್ತು ಆಕಾಶ್ ದೀಪ್ ಮಂಗಳವಾರ ಸಂಜೆ ತಂಡವನ್ನು ಕೂಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
Thailand Open: ಚಿರಾಗ್ ಶೆಟ್ಟಿ-ಸಾತ್ವಿಕ್ ಚಾಂಪಿಯನ್ಸ್
Italian Open ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್
KKR vs RR ಪಂದ್ಯ ಮಳೆಯಿಂದಾಗಿ ರದ್ದು: ಆರ್ ಸಿಬಿಗೆ ರಾಜಸ್ಥಾನ್ ಎಲಿಮಿನೇಟರ್ ಎದುರಾಳಿ
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
MUST WATCH
ಹೊಸ ಸೇರ್ಪಡೆ
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರಲ್ಲಿ ಸಂದೇಶ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ
Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್?
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’