ದಂಡ ಕಟ್ಟಲಿಕ್ಕಾದರೂ ಪ್ರಶಸ್ತಿ ಗೆಲ್ಲಬೇಕಿದೆ!
Team Udayavani, Apr 26, 2022, 7:45 AM IST
ಮುಂಬಯಿ: ಮುಂಬೈ ಇಂಡಿಯನ್ಸ್ ಎದುರಿನ ಗೆಲುವನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ತನಗೆ ಹಾಗೂ ತಂಡಕ್ಕೆ ವಿಧಿಸಲಾಗಿರುವ ದೊಡ್ಡ ಮೊತ್ತದ ದಂಡವನ್ನು ಕಟ್ಟಲಿಕ್ಕಾದರೂ ಲಕ್ನೋ ಐಪಿಎಲ್ ಚಾಂಪಿಯನ್ ಆಗಬೇಕಿದೆ ಎಂದು ತಮಾಷೆ ಹಾಗೂ ಅಷ್ಟೇ ಮಾರ್ಮಿಕವಾಗಿ ನುಡಿದಿದ್ದಾರೆ.
ಈ ಸರಣಿಯಲ್ಲಿ 2ನೇ ಸಲ ನಿಧಾನ ಗತಿಯ ಓವರ್ಗಾಗಿ ಲಕ್ನೋ ತಂಡಕ್ಕೆ ದಂಡ ವಿಧಿಸಲಾಗಿದೆ. ತಂಡದ ನಾಯಕನಿಗೆ ಮೊದಲು 12 ಲಕ್ಷ, ಅನಂತರ 24 ಲಕ್ಷ ರೂ. ಜುಲ್ಮಾನೆ ಹೇರಲಾಗಿದೆ. ಈ ಮೊತ್ತವನ್ನು ಹೊಂದಿಸಿಕೊಳ್ಳಲಿಕ್ಕಾದರೂ ಐಪಿಎಲ್ ಚಾಂಪಿಯನ್ ಆಗಬೇಕಿದೆ ಎಂಬುದು ರಾಹುಲ್ ಅವರ ವ್ಯಂಗ್ಯಮಿಶ್ರಿತ ಪ್ರತಿಕ್ರಿಯೆ!
ಸಂದರ್ಭಕ್ಕೆ ತಕ್ಕ ಆಟ
“ಸಂದರ್ಭಕ್ಕೆ ತಕ್ಕ ಪ್ರದರ್ಶನ ನೀಡುವುದು ನನ್ನ ಗೇಮ್ಪ್ಲ್ರಾನ್ಗಳಲ್ಲೊಂದು. ಹಾಗೆಯೇ ನನಗೆ ನೀಡಲಾದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಬೇಕಿದೆ. ಪಿಚ್ ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ತಕ್ಕ ಬ್ಯಾಟಿಂಗ್ ನಡೆಸಿದೆ. ನನ್ನ ಕೊಡುಗೆಯನ್ನು ನಾನು ಸಲ್ಲಿಸಿದ್ದೇನೆ. ಕೊನೆಯ ತನಕವೂ ನಮ್ಮ ಬ್ಯಾಟಿಂಗ್ ವಿಸ್ತರಿಸಲ್ಪಟ್ಟಿರುವುದರಿಂದ ಯಾವುದೇ ಒತ್ತಡವಿಲ್ಲದಂತೆ ಆಡಬಹುದಾಗಿದೆ’ ಎಂದು ರಾಹುಲ್ ಹೇಳಿದರು.
ಮುಂಬೈ ಔಟ್!
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯವನ್ನು ಲಕ್ನೋ 36 ರನ್ನುಗಳಿಂದ ಜಯಿಸಿತು. ಇದು 8 ಪಂದ್ಯಗಳಲ್ಲಿ ರಾಹುಲ್ ಪಡೆಗೆ ಒಲಿದ 5ನೇ ಜಯ. ನಾಯಕ ಕೆ.ಎಲ್. ರಾಹುಲ್ ಅವರ ಮತ್ತೂಂದು ಶತಕ ಈ ಪಂದ್ಯದ ಆಕರ್ಷಣೆಯಾಗಿತ್ತು (ಅಜೇಯ 103). ಆದರೆ ಇವರದು ಏಕಾಂಗಿ ಹೋರಾಟವಾಗಿತ್ತು. ಹೀಗಾಗಿ ಮೊತ್ತ 6 ವಿಕೆಟಿಗೆ 168ಕ್ಕೆ ನಿಂತಿತು.
ಮುಂಬೈಗೆ ಇದೇನೂ ಅಸಾಧ್ಯ ಸವಾಲಾಗಿರಲಿಲ್ಲ. ಆದರೆ ಸೋಲಿನ ಸುಳಿಯಲ್ಲಿ ಮುಳುಗಿರುವ ರೋಹಿತ್ ಪಡೆಗೆ ಈ ಮೊತ್ತವೂ ಕಠಿನವಾಗಿ ಪರಿಣಮಿಸಿತು. 8 ವಿಕೆಟಿಗೆ ಕೇವಲ 132 ರನ್ ಗಳಿಸಿ ಸತತ 8ನೇ ಸೋಲನುಭವಿಸಿತು. ಕೂಟದಿಂದ ನಿರ್ಗಮಿಸಿತು. ಐಪಿಎಲ್ ಇತಿಹಾಸದಲ್ಲಿ ಒಂದೂ ಪಂದ್ಯ ಗೆಲ್ಲದೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಸಂಕಟ ಮುಂಬೈ ತಂಡದ್ದಾಯಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್