ಕಡಬ: ಅವ್ಯವಸ್ಥೆಯ ಆಗರ ಸಾರ್ವಜನಿಕ ಶ್ಮಶಾನ
Team Udayavani, Jul 7, 2020, 5:31 AM IST
ವಿಶೇಷ ವರದಿ- ಕಡಬ: ಬೆಳೆಯುತ್ತಿರುವ ಕಡಬ ಪೇಟೆ ತಾ| ಕೇಂದ್ರವಾಗಿ ಹಲವು ಸಮಯ ಕಳೆಯಿತು. ಗ್ರಾ.ಪಂ. ವ್ಯವಸ್ಥೆ ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಆದರೆ ಇಲ್ಲಿನ ಸಾರ್ವಜನಿಕ ಶ್ಮಶಾನ ಮಾತ್ರ ಅಭಿವೃದ್ಧಿ ಕಾಣದೆ ಅವ್ಯವಸ್ಥೆಯ ಆಗರವಾಗಿದೆ.
ಇಲ್ಲಿನ ಶ್ಮಶಾನದಲ್ಲಿ ಯಾವುದೇ ರೀತಿಯ ಸಮರ್ಪಕ ವ್ಯವಸ್ಥೆಗಳು ಇಲ್ಲದೆ ಇರುವುದರಿಂದಾಗಿ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ತೊಂದರೆ ಎದುರಿ ಸುವಂತಾಗಿದೆ. ಮೊದಲೇ ಶಿಥಿಲಗೊಂಡಿದ್ದ ಶ್ಮಶಾನದ ಕಟ್ಟಡ ಇದೀಗ ಚಿಂತಾಜನಕ ಸ್ಥಿತಿಯಲ್ಲಿದೆ. ಕಟ್ಟಡದ ಮೇಲ್ಛಾವಣಿಯ ಶೀಟುಗಳು ಗಾಳಿ, ಮಳೆಯಿಂದಾಗಿ ಹಾರಿ ಹೋಗಿ ಅಲ್ಲಿ ಮಳೆಗಾಲದಲ್ಲಿ ಶವ ದಹನ ಮಾಡಲು ಜನರು ಹರಸಾಹಸ ಪಡಬೇಕಿದೆ.
ಬೇಜವಾಬ್ದಾರಿಗೆ ಸಾಕ್ಷಿ
ಶ್ಮಶಾನವನ್ನು ಅಭಿವೃದ್ಧಿಪಡಿಸಲು ಸರಕಾರ ಮಂಜೂರು ಮಾಡಿದ 4 ಲ.ರೂ. ಅನುದಾನ ಬಳಕೆಯಾಗದೆ 9 ವರ್ಷಗಳಿಂದ ಕಡಬ ತಹಶೀಲ್ದಾರ್ ಖಾತೆ ಯಲ್ಲಿ ಉಳಿದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ ಇಲ್ಲಿ ಎದ್ದುಕಾಣುತ್ತಿದೆ. ಇಲ್ಲಿನ ಅವ್ಯವಸ್ಥೆ ಯಿಂದಾಗಿ ಕಡಬ ಪರಿಸರದ ಜನರು ದೂರದ ಉಪ್ಪಿನಂಗಡಿಗೆ ಶವ ಸಂಸ್ಕಾರಕ್ಕಾಗಿ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ಗಮನಹರಿಸದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸುವುದು ಅನಿ ವಾರ್ಯವಾಗಲಿದೆ.
ನಾಚಿಕೆಗೇಡಿನ ಸಂಗತಿ
ಮೃತಪಟ್ಟವರಿಗೆ ಸಿಗುವ ಅಂತಿಮ ಗೌರವವಾದ ಅಂತ್ಯಸಂಸ್ಕಾರಕ್ಕೂ ಕಡಬ ದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವುದು ಕಡಬದ ರಾಜಕೀಯ ಪ್ರಮುಖರಿಗೆ, ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಕೆಲವು ದಿನಗಳ ಹಿಂದೆ ಮೃತಪಟ್ಟ ನಮ್ಮ ಸಂಬಂಧಿಕರೋರ್ವರ ಅಂತ್ಯಸಂಸ್ಕಾರಕ್ಕಾಗಿ 30 ಕಿ.ಮೀ. ದೂರದ ಉಪ್ಪಿನಂಗಡಿಯ ಶ್ಮಶಾನಕ್ಕೆ ತರಳಬೇಕಾಯಿತು ಎಂದು ಸ್ಥಳೀಯ ನಿವಾಸಿಯಾದ ಪ್ರಶಾಂತ್ ಕಡಬ ಅವರು ತಿಳಿಸಿದ್ದಾರೆ.
ಶೀಘ್ರ ಕ್ರಮ
ಬಿಡುಗಡೆಯಾಗಿರುವ 4 ಲಕ್ಷ ರೂ. ಅನುದಾನವನ್ನು ಬಳಸಿ ಶ್ಮಶಾನವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳ ಅನುಮತಿಗಾಗಿ ಪತ್ರ ಬರೆಯ ಲಾಗಿತ್ತು. ಅನುದಾನ ಬಳಸಲು ಜಿಲ್ಲಾಧಿಕಾರಿಗಳ ಅನುಮತಿ ಲಭಿಸಿದ್ದು, ಲೋಕೋಪಯೋಗಿ ಇಲಾಖೆಯ ಮೂಲಕ ಶ್ಮಶಾನದ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
-ಜಾನ್ಪ್ರಕಾಶ್ ರೋಡ್ರಿಗಸ್,
ಕಡಬ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…