Kasaragod ಮಿನಿ ಲಾರಿ-ಬೈಕ್ ಢಿಕ್ಕಿ: ಇಬ್ಬರು ಯುವಕರು ಮೃತ್ಯು
Team Udayavani, Aug 20, 2023, 8:29 PM IST
ಕಾಸರಗೋಡು: ಕಣ್ಣೂರು ತಳಾಪ್ಪಿಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿನಿ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರರಾದ ಕಾಸರಗೋಡು ಮೊಗ್ರಾಲ್ಪುತ್ತೂರು ಕಂಬಾರು ಬೆದ್ರಡ್ಕ ನಿವಾಸಿಗಳಾದ ಮನಾಫ್(24) ಮತ್ತು ಗೆಳೆಯ ಲತೀಫ್(23) ಸಾವಿಗೀಡಾದರು.
ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬೈಕ್ ಹಾಗು ಮಂಗಳೂರಿನಿಂದ ಆಯಿಕರಕ್ಕೆ ತೆರಳುತ್ತಿದ್ದ ಮಿನಿ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ಮಿನಿ ಲಾರಿಯ ಚಾಲಕ ಕಣ್ಣೂರು ನಿವಾಸಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಳಂಗರೆ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿದ್ದ ಮನಾಫ್ ಒಂದು ವಾರ ರಜೆ ಪಡೆದಿದ್ದರು. ಗೆಳೆಯ ಲತೀಫ್ ಅವರ ಜೊತೆಯಲ್ಲಿ ಕಣ್ಣೂರಿಗೆ ಹೋಗಿ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿತು. ನಾಲ್ಕು ಮಂದಿ ಗೆಳೆಯರು ಕಣ್ಣೂರಿಗೆ ಹೋಗಿದ್ದರು. ಈ ಪೈಕಿ ಇಬ್ಬರು ಮೊದಲೇ ವಾಪಸಾಗಿದ್ದರು.
ಚೌಕಿ ಬದರ್ ನಗರದ ಮುಹಮ್ಮದ್-ಸಫಿಯ ದಂಪತಿಗಳ ಪುತ್ರ ಮನಾಫ್ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಬದರ್ನಗರದ ರಫೀಕ್-ಜಮೀಲ ದಂಪತಿಗಳ ಪುತ್ರ ಲತೀಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!